Site icon Vistara News

ಅಕ್ರಮವಾಗಿ ಶ್ರೀಗಂಧ ಸಾಗಿಸುತ್ತಿದ್ದ ಮೂವರ ಬಂಧನ; 55 ಕೆಜಿ ಶ್ರೀಗಂಧ ವಶ

ಶ್ರೀಗಂಧ

ಸಂಡೂರು(ಬಳ್ಳಾರಿ): ತಾಲೂಕಿನ ರಾಮಘಡ ಅರಣ್ಯದಲ್ಲಿ ಶ್ರೀಗಂಧ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಮೂವರು ಕಳ್ಳರನ್ನು ಉತ್ತರ ವಲಯ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಅವರಿಂದ ೨.೭೫ ಲಕ್ಷ ರೂ. ಮೌಲ್ಯದ ೫೫ ಕೆಜಿ ಶ್ರೀಗಂಧ, ಎರಡು ಬೈಕ್ ಹಾಗೂ ೩ ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಶನಿವಾರ ಕಾರ್ಯಾಚರಣೆ ನಡೆಸಿ, ಶ್ರೀಗಂಧ ಕಳ್ಳತನ ಮಾಡುವವರನ್ನು ಬಂಧಿಸಿ, ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಡೂರಿನ ಜೆಂಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದ್ದಾರೆ.

ಇದನ್ನೂ ಓದಿ | Vims Bellary | ರೋಗಿಗಳ ಸಾವು; ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಶ್ರೀರಾಮುಲು

Exit mobile version