Site icon Vistara News

Karnataka Election 2023: ಮುಗಿಯದ ಹಾಸನ ಜೆಡಿಎಸ್‌ ಅಭ್ಯರ್ಥಿ ಗೊಂದಲ; ಹೊಸ ಹೆಸರು ಹರಿಬಿಟ್ಟ ರೇವಣ್ಣ!

JdS candidate from Hassan is in a dilemma Revanna suggest new name Karnataka Election 2023 updates

ಹಾಸನ: ವಿಧಾನಸಭಾ ಚುನಾವಣೆ (Karnataka Election 2023) ದಿನಾಂಕ ಘೋಷಣೆಯಾಗಿದ್ದರೂ ಕಳೆದ ಎರಡು ತಿಂಗಳಿನಿಂದ ಗೊಂದಲದಲ್ಲಿರುವ ಹಾಸನ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಗದ್ದಲ ಇನ್ನೂ ಬಗೆಹರಿದಿಲ್ಲ. ಈ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಹೋದರ, ಮಾಜಿ ಸಚಿವ ಎಚ್.ಡಿ. ರೇವಣ್ಣ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಸ್ವರೂಪ್‌ರನ್ನು ಕಣಕ್ಕಿಳಸಿಲು ಎಚ್‌ಡಿಕೆ ಒಲವು ತೋರಿದ್ದರೆ, ಪತ್ನಿ ಭವಾನಿಯೇ ಸ್ಪರ್ಧೆ ಮಾಡಬೇಕೆಂದು ರೇವಣ್ಣ ಪಟ್ಟು ಹಿಡಿದಿದ್ದಾರೆ. ಆದರೆ, ಈ ಗದ್ದಲದ ನಡುವೆ ಈಗ ರೇವಣ್ಣ ಮತ್ತೊಂದು ದಾಳವನ್ನು ಉರುಳಿಸಿದ್ದು, ಹೊಸ ಅಭ್ಯರ್ಥಿಯೊಬ್ಬರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ.

ಹಾಸನ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಎಚ್‌.ಡಿ. ರೇವಣ್ಣ ಹೊಸ ದಾಳ ಉರುಳಿಸಿದ್ದಾರೆ. ನನ್ನ ಕುಟುಂಬಕ್ಕೆ ಟಿಕೆಟ್‌ ಕೊಡದೇ ಇದ್ದರೆ, ಇದಕ್ಕೆ ಅಡ್ಡಗಾಲಾಗಿರುವ ಎಚ್.ಪಿ. ಸ್ವರೂಪ್‌ಗೂ ಬೇಡ ಎಂಬ ವಾದವನ್ನು ಮುಂದಿಟ್ಟಿದ್ದಾರೆ. ಇದಕ್ಕಾಗಿ ಹೊಸ ಅಭ್ಯರ್ಥಿ ಎಚ್.ಕೆ. ಮಹೇಶ್‌ ಅವರ ಹೆಸರನ್ನು ಎಳೆದು ತಂದಿದ್ದಾರೆ. ಇಷ್ಟಾದರೂ ಕೇಳದ ಎಚ್‌.ಡಿ. ಕುಮಾರಸ್ವಾಮಿ, ಹಾಸನದಿಂದ ಸೂಕ್ತ ಅಭ್ಯರ್ಥಿ ಇದ್ದಾರೆ. ಭವಾನಿ ಅವಶ್ಯಕತೆ ಸದ್ಯಕ್ಕೆ ಇಲ್ಲ. ಸ್ವರೂಪ್ ಅವರನ್ನೇ ಕಣಕ್ಕೆ ಇಳಿಸೋಣ ಎಂಬ ವಾದವನ್ನು ಮುಂದಿಟ್ಟಿದ್ದಾರೆ.

ಇದನ್ನೂ ಓದಿ: IPL 2023: ಬೆಂಗಳೂರಲ್ಲಿ ಐಪಿಎಲ್‌ ಮ್ಯಾಚ್‌; ರಾತ್ರಿ 1.30ರವರೆಗೂ ಮೆಟ್ರೋ ಸಂಚಾರ ಸಮಯ ವಿಸ್ತರಣೆ

ಎಚ್‌ಡಿಕೆ-ರೇವಣ್ಣ ಗುದ್ದಾಟ

ಭವಾನಿ ರೇವಣ್ಣ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ಕೊಡುವುದಿಲ್ಲ. ಅಲ್ಲದೆ, ಕೆ.ಎಂ. ರಾಜೇಗೌಡ ಸಹ ಕಣಕ್ಕಿಳಿಯುವುದು ಬೇಡ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದರು. ಆದರೆ, ಇದಕ್ಕೆ ಒಪ್ಪದ ರೇವಣ್ಣ ಅವರು ಕುಮಾರಸ್ವಾಮಿಗೆ ಟಕ್ಕರ್ ಕೊಡಲು ಮುಂದಾಗಿದ್ದಾರೆ. ಆ ಮೂಲಕ ಮತ್ತೊಂದು ಹೊಸ ಅಭ್ಯರ್ಥಿಯ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ.

ಎಚ್.ಕೆ. ಮಹೇಶ್‌ಗೆ ಗಾಳ

ಕಾಂಗ್ರೆಸ್ ನಾಯಕ, ಎರಡು ಬಾರಿ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಎಚ್.ಕೆ. ಮಹೇಶ್‌ಗೆ ರೇವಣ್ಣ ಗಾಳ ಹಾಕಿದ್ದಾರೆ. 2013ರಲ್ಲಿ ಕೇವಲ 4196 ಅಂತರದಲ್ಲಿ ಪರಾಜಯಗೊಂಡಿದ್ದ ಅವರು ಈ ಬಾರಿ ಸ್ಪರ್ಧೆ ಮಾಡಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿರುವ ರೇವಣ್ಣ, ಶತಾಯಗತಾಯ ಸ್ವರೂಪ್‌ಗೆ ಟಿಕೆಟ್ ಬೇಡವೇ ಬೇಡ ಎಂದು ರೇವಣ್ಣ ಕುಟುಂಬದವರು ಪಟ್ಟುಹಿಡಿದಿದ್ದಾರೆ.

ಎಚ್.ಕೆ. ಮಹೇಶ್‌ಗೆ ಟಿಕೆಟ್ ಕೊಟ್ಟರೆ ಎರಡು ಬಾರಿ ಸೋತಿರುವ ಸಿಂಪತಿ ವರ್ಕೌಟ್ ಆಗಲಿದೆ. ಹಾಲಿ ಶಾಸಕ ಪ್ರೀತಂಗೌಡ ವಿರುದ್ಧ ಕಣಕ್ಕಿಳಿಯಲು ಬಲಿಷ್ಠ ಅಭ್ಯರ್ಥಿ ಸಿಕ್ಕಂತೆ ಆಗುತ್ತದೆ ಎಂದು ಹೇಳಿರುವ ರೇವಣ್ಣ, ತಮ್ಮನ್ನು ಎದುರು ಹಾಕಿಕೊಂಡು ಟಿಕೆಟ್ ಪಡೆಯಲು ಮುಂದಾಗಿರುವ ಸ್ವರೂಪ್‌ಗೆ ಟಿಕೆಟ್ ತಪ್ಪಿಸುವ ಲೆಕ್ಕಾಚಾರವನ್ನು ಹೊಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Karnataka Election 2023: ಎಲೆಕ್ಷನ್‌ ಡ್ಯೂಟಿಯವರಿಗೆ ಬೂಸ್ಟರ್‌ ಡೋಸ್‌ ಕಡ್ಡಾಯ; ಕೋವಿಡ್‌ ಸೋಂಕಿತರಿಗೆ ವೋಟಿಂಗ್ ಟೈಂ ಫಿಕ್ಸ್‌!

ಮಹೇಶ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಪ್ರಬಲ ಪೈಪೋಟಿ ನೀಡಲು ರೇವಣ್ಣ ಪ್ಲ್ಯಾನ್‌ ಮಾಡಿದ್ದರೆ, ಇತ್ತ ಸ್ಚರೂಪ್‌ಗೆ ಟಿಕೆಟ್ ನೀಡಲು ಎಚ್‌ಡಿಕೆ ಒಲವು ಹೊಂದಿದ್ದಾರೆ. ಆದರೆ, ಕುಮಾರಸ್ವಾಮಿ ಲೆಕ್ಕಾಚಾರವನ್ನೇ ಉಲ್ಟಾ ಹೊಡೆಸಲು ರೇವಣ್ಣ ರಣತಂತ್ರ ರೂಪಿಸಿದ್ದಾರೆ.

Exit mobile version