Site icon Vistara News

Prashant Sambargi : ದೇವೇಗೌಡರಿಗೆ ಅಪಮಾನ ಮಾಡಿದ ಸಂಬರ್ಗಿಗೆ ಚಪ್ಪಲಿಯೇಟಿನ ಉತ್ತರ ನೀಡಿದ ಚಂದ್ರಚೂಡ್‌!

Prashant Sambargi Chandrachud

#image_title

ಬೆಂಗಳೂರು: ರಾಹುಲ್‌ ಗಾಂಧಿಯನ್ನು ಟೀಕಿಸುವ ಭರದಲ್ಲಿ ಎಡವಟ್ಟು ಮಾಡಿಕೊಂಡಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರ್ಗಿ (Prashant Sambargi) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಜೆಡಿಎಸ್‌ ಅಭಿಮಾನಿಗಳು, ದೇವೇಗೌಡರ ಅಭಿಮಾನಿಗಳು ಬಗೆಬಗೆಯಲ್ಲಿ ಪ್ರಶಾಂತ್‌ ಸಂಬರ್ಗಿಯನ್ನು ಖಂಡಿಸುತ್ತಿದ್ದಾರೆ. ಜೆಡಿಎಸ್‌ನ ಕಾನೂನು ವಿಭಾಗದ ವತಿಯಿಂದ ಪ್ರಶಾಂತ್‌ ಸಂಬರ್ಗಿ ವಿರುದ್ಧ ದೂರು ಕೂಡಾ ನೀಡಲಾಗಿದೆ. ಇದರ ನಡುವೆಯೇ ಬಿಗ್‌ ಬಾಸ್‌ ಶೋನಲ್ಲಿ ಸಂಬರ್ಗಿ ಜತೆಗೇ ಇದ್ದ ಪತ್ರಕರ್ತ, ಕಲಾವಿದ ಚಂದ್ರಚೂಡ್‌ ಅವರು ಪ್ರಶಾಂತ್‌ ಸಂಬರ್ಗಿಯನ್ನು ʻಚಪ್ಪಲಿಯೇಟಿನ ಕಥೆʼ ಹೇಳಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಏನು ಮಾಡಿದ್ದರು ಪ್ರಶಾಂತ್‌ ಸಂಬರ್ಗಿ?

ನೇರ ನುಡಿ ಮತ್ತು ವಿವಾದಾತ್ಮಕ ಮಾತುಗಳಿಗೆ ಫೇಮಸ್‌ ಆಗಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ರಾಹುಲ್‌ ಗಾಂಧಿ ಅವರನ್ನು ಟೀಕಿಸಲು ಹೋಗಿ, ದೇವೇಗೌಡರ ಹೆಸರನ್ನು ಎಳೆದುತಂದಿದ್ದಾರೆ.

ʻʻದೇವೇ ಗೌಡ ಕಳ್ಳ ಅನ್ನೋದಕ್ಕೂ,ಗೌಡರು ಅನ್ನೋರೆಲ್ಲ ಕಳ್ಳರೆ ಯಾಕಿರ್ತಾರೆ ಅನ್ನೋದಕ್ಕೂ ವ್ಯತ್ಯಾಸವಿದೆ. ಮೊದಲನೆಯದಕ್ಕೆ ದೇವೇ ಗೌಡ್ರು ಕೇಸ್ ಹಾಕಬೇಕು. ಎರಡನೆಯದಕ್ಕೆ ಅವನ ಮಗನೋ ಮೊಮ್ಮಗನೇ or any ಗೌಡ ಕೇಸು ಹಾಕಬಹುದು. ಸುಮ್ನೆ ಒಂದು ಉದಾಹರಣೆ ಕೊಟ್ಟೆ ಅಷ್ಟೇ ಸೀರಿಯಸ್ ಆಗಿ ತಗೋಬೇಡಿʼʼ ಎಂದು ಸಂಬರ್ಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಇದರ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.

ಇದಕ್ಕೆ ಪ್ರತಿಯಾಗಿ ಇನ್ನೊಂದು ಪೋಸ್ಟ್‌ ಹಾಕಿರುವ ಪತ್ರಕರ್ತ, ಕಲಾವಿದ ಚಂದ್ರಚೂಡ್‌ ಅವರು, ಸಂಬರ್ಗಿಯ ಪ್ರತಿಪದಕ್ಕೂ ಪ್ರತಿಯೇಟು ನೀಡಿದ್ದಾರೆ. ನಾಯಿಗೆ ಹೊಡೆದಂತೆ, ಚಪ್ಪಲಿಯೇಟು, ಎದೆಗೆ ಒದೆಯಬೇಕು ಎಂಬಿತ್ಯಾದಿ ಪದಗಳನ್ನು ಬಳಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಡಿ.ವೈ. ಚಂದ್ರಚೂಡ್‌ ಪೋಸ್ಟ್‌ನಲ್ಲಿ ಏನಿದೆ?

ಇನ್ನೂ ಸಿಂಪ್ಲೆಸ್ಟ್ ಆಗಿ ಹೇಳಬೇಕೆಂದರೆ ಕಿತ್ತೂರು ರಾಣಿ ಚನ್ನಮ್ಮನ ಮೊಮ್ಮಗ ಎಂದು ಹೇಳಿಕೊಂಡು ಚಪ್ಪಲಿಯಲ್ಲಿ ಏಟು ತಿಂದ ಅಂದರೆ ಪ್ರಶಾಂತ ಸಂಬರ್ಗಿಗೆ ಮಾತ್ರ ನಾಯಿಗೆ ಹೊಡೆದಂತೆ ಹೊಡೆದರು ಎಂದರ್ಥವೇ ಹೊರತು ಸಂಬರ್ಗಿಯೆಂಬ ಊರಿನವರಿಗೂ ಇದಕ್ಕೂ ವ್ಯತ್ಯಾಸ ಇದೆ.

ಮೊದಲನೆಯದರಲ್ಲಿ ಪ್ರಶಾಂತ ಸಂಬರ್ಗಿ ಯನ್ನು ನಾಯಿಗಳಿಗೆ ಹೋಲಿಸಿದ್ದಕ್ಕೆ ನಾಯಿಗಳೆಲ್ಲ ಕೇಸು ಹಾಕಬೇಕೂ ಅವಮಾನವಾಗಿದ್ದಕ್ಕೆ .ಎರಡನೆಯದರಲ್ಲಿ ಸಂಬರ್ಗಿಯಲ್ಲಿರುವ ಎಲ್ಲ ವರ್ಗದ ಜನ ಇವನನ್ನ ಕರೆದು ಕಿತ್ತೂರು ರಾಣಿ ಚನ್ನಮ್ಮನವರ ಶೈಲಿಯಲ್ಲಿಯೇ ಎದೆಗೊದೆಯಬೇಕೂ…

ಸುಮ್ಮನೆ ಉದಾಹರಣೆ ಅಷ್ಟೇ ಅಲ್ಲ ಸೀರಿಯಸ್ ಆಗಿ ತಗೆದುಕೊಳ್ಳುವ ಕಾಲವಂತೂ ಬಂದಿದೆ.ತಗೊಂಡಾಗಿದೆ ಸಂಬಂಧಪಟ್ಟವರು. ʻಬೆವರುಹಿಡುಕʼ ಸಾರ್ವಜನಿಕ ಜೀವನದಲ್ಲಿ ತುಟಿ ಮತ್ತೊಂದು ಬಿಚ್ಚುವಾಗ ಎಚ್ಚರಿಕೆ ಕಲಿಯಬೇಕು, ಕಲಿಸಬೇಕು.

ಪ್ರಶಾಂತ್‌ ಸಂಬರ್ಗಿ ಮತ್ತು ಚಂದ್ರಚೂಡ್‌ ಅವರು ಬಿಗ್‌ ಬಾಸ್‌ 8ನೇ ಸೀಸನ್‌ನಲ್ಲಿ ಜತೆಗಿದ್ದರು. ಆಗಲೂ ಪರಸ್ಪರ ಕಿತ್ತಾಡುತ್ತಿದ್ದ ಇಬ್ಬರು ಬಳಿಕ ಕಾಂಪ್ರೊಮೈಸ್‌ ಮಾಡಿಕೊಂಡಿದ್ದರು. ನನ್ನ ಖಾಸಗಿ ವಿಷಯದಲ್ಲಿ ನೀನು ಬರಬೇಡ, ನಿನ್ನ ವಿಷಯದಲ್ಲಿ ನಾನಿಲ್ಲ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ : Prashant Sambargi : ರಾಹುಲ್‌ ಟೀಕಿಸುವ ಭರದಲ್ಲಿ ದೇವೇಗೌಡರಿಗೆ ಅಪಮಾನ ಮಾಡಿದ ಸಂಬರ್ಗಿ!; ಜೆಡಿಎಸ್‌ನಿಂದ ದೂರು

Exit mobile version