Site icon Vistara News

Karnataka CM: ಜಾಲಿ ಮೂಡಲ್ಲಿ ಭಾವಿ ಸಿಎಂ: ಬೈಟ್‌ ಕೇಳಿದ್ದಕ್ಕೆ ಶಿಳ್ಳೆ ಹೊಡೆದ ಸಿದ್ದರಾಮಯ್ಯ

karnataka cm Siddaramaiah in jolly mood

#image_title

ನವದೆಹಲಿ: ಎರಡನೇ ಬಾರಿಗೆ ಕರ್ನಾಟಕ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ಸಿದ್ದರಾಮಯ್ಯ ಪೂರ್ತಿ ನಿರಾಳರಾಗಿದ್ದಾರೆ. ನವದೆಹಲಿಯಲ್ಲಿ ನಾಲ್ಕು ದಿನ ಸತತವಾಗಿ ನಡೆದ ಸಭೆಗಳ ನಂತರ ಕೊನೆಗೂ ಸಿಎಂ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.

ಆದರೆ ದೆಹಲಿಗೆ ತೆರಳಿದಾಗಿನಿಂದಲೂ ಸಿದ್ದರಾಮಯ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿಲ್ಲ. ಯಾವಾಗಲೇ ಎದುರಿಗೆ ಮೈಕ್‌ ಹಿಡಿದರೂ ಬಲವಂತವಾಗಿ ಬಾಯನ್ನು ಬಿಗಿ ಹಿಡಿದುಕೊಂಡು ಗಂಭೀರವಾಗಿ ನಡೆಯುತ್ತಾ ಇದ್ದರು.

ಪತ್ರಕರ್ತರು ಎಷ್ಟು ಗೋಗರೆದರೂ ಒಂದೂ ಹೇಳಿಕೆ ನೀಡಿಲ್ಲ. ಇದೀಗ ಸಿಎಂ ಎಂದು ಘೋಷಣೆಯಾದ ನಂತರವಾದರೂ ಹೇಳಿಕೆ ನೀಡುತ್ತಾರೆಯೇ ಎಂದು ಮಾಧ್ಯಮದವರು ತೆರಳಿದ್ದಾರೆ. ನವದೆಹಲಿಯ ಖಾಸಗಿ ಹೋಟೆಲಿಗೆ ಬಂದ ಸಿದ್ದರಾಮಯ್ಯ ಅವರಿಗೆ ಖಾಸಗಿ ವಾಹಿನಿ ಪತ್ರಕರ್ತೆಯೊಬ್ಬರು, ಇದೀಗ ಸಿಎಂ ಆಗಿ ನೇಮಕವಾಗುತ್ತಿರುವುದರ ಬಗ್ಗೆ ಏನು ಹೇಳುತ್ತೀರ? ಎಂದು ಪ್ರಶ್ನಿಸಿದ್ದಾರೆ.

ಆದರೆ ಈ ಬಾರಿಯೂ ಯಾವುದೇ ಮಾತನ್ನು ಸಿದ್ದರಾಮಯ್ಯ ಆಡಿಲ್ಲ. ಸ್ವಲ್ಪ ಮುಂದೆ ಹೋಗುತ್ತಲೇ ಜಾಲಿ ಮೂಡಿನಲ್ಲಿ ಶಿಳ್ಳೆ ಹೊಡೆದಿದ್ದಾರೆ. ಈ ವೇಳೆ ಪಕ್ಕದಲ್ಲೇ ಪುತ್ರ ಡಾ. ಯತೀಂದ್ರ ಸಹ ಜತೆಗಿದ್ದರು. ತಕ್ಷಣವೇ ತಾನು ಎಲ್ಲಿದ್ದೇನೆ ಎಂದು ನೆನೆದು ಶಿಳ್ಳೆ ನಿಲ್ಲಿಸಿದ್ದಾರೆ. ಇದೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: Karnataka CM: ಸಿದ್ದರಾಮಯ್ಯ 24ನೇ ಮುಖ್ಯಮಂತ್ರಿ; ಇಲ್ಲಿದೆ ಇದುವರೆಗೆ ರಾಜ್ಯವನ್ನಾಳಿದ ಸಿಎಂಗಳ ಪಟ್ಟಿ

Exit mobile version