Site icon Vistara News

Karnataka Election 2023: ರಾಜ್ಯ ವಿಧಾನಸಭೆ ಚುನಾವಣೆ ಕ್ಷಣಕ್ಷಣದ ಸುದ್ದಿಗಳು: ಕಾಂಗ್ರೆಸ್‌ಗೆ ಸವಾಲು, ರಾಜ್ಯಾದ್ಯಂತ ಹನುಮಾನ್‌ ಚಾಲೀಸಾ ಪಠಣ

election live

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Election 2023) ಈಗ ಸ್ಟಾರ್‌ ಪ್ರಚಾರಕರ ಬೀಡಾಗಿದೆ. ನಿನ್ನೆ ತಾನೆ ಮೂಲ್ಕಿಯಲ್ಲಿ ಬಹಿರಂಗ ಸಮಾವೇಶ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ನಾಳೆ ಮತ್ತೆ ಆಗಮಿಸಲಿದ್ದಾರೆ. ಪ್ರಿಯಾಂಕ ಗಾಂಧಿ, ಯೋಗಿ, ಅಮಿತ್‌ ಶಾ ಅವರ ಕಾರ್ಯಕ್ರಮಗಳು ನಾನಾ ಕಡೆ ಇಂದು ಹಾಗೂ ನಾಳೆ ನಡೆಯುತ್ತಿವೆ.

B Somashekhar

ಬೆಂಗಳೂರಿನಲ್ಲಿ ಶೋಭಾ ಕರಂದ್ಲಾಜೆ ಹನುಮಾನ್‌ ಚಾಲೀಸಾ ಪಠಣ

Mallikarjun Tippar

B Somashekhar

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಹನುಮಾನ್‌ ಚಾಲೀಸಾ ಪಠಣ

ಮಲ್ಲೇಶ್ವರದಲ್ಲಿರುವ ರಾಮಮಂದಿರದಲ್ಲಿ ಹನುಮಾನ್‌ ಚಾಲೀಸಾ ಪಠಿಸಿದ ಸಚಿವೆ

ನರೇಂದ್ರ ಮೋದಿ ಮತ್ತು ಬಿಎಸ್ ಯಡಿಯೂರಪ್ಪ ಹೆಸರಲ್ಲಿ ಅರ್ಚನೆ

ಅರ್ಚನೆ ಮಾಡಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

B Somashekhar

ರಾಜ್ಯಾದ್ಯಂತ ಹನುಮಾನ್‌ ಚಾಲೀಸಾ ಪಠಣ ಆರಂಭ

ಆಂಜನೇಯ ದೇವಾಲಯಗಳಲ್ಲಿ ಹನುಮಾನ್‌ ಚಾಲೀಸಾ ಪಠಣ

ಬಿಜೆಪಿ, ಬಜರಂಗದಳ, ಹಿಂದೂ ಕಾರ್ಯಕರ್ತರಿಂದ ಕಾಂಗ್ರೆಸ್‌ಗೆ ಪಾಟಿಸವಾಲು

ಬಜರಂಗದಳ ನಿಷೇಧ, ಸುರ್ಜೇವಾಲ ಹೇಳಿಕೆಗೆ ತಿರುಗೇಟು

Ramaswamy Hulakodu

ಸೌಭಾಗ್ಯ ಬಸವರಾಜನ್ ಬಿಜೆಪಿಗೆ

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಬಸವರಾಜನ್‌ ಅವರ ಪತ್ನಿ ಸೌಭಾಗ್ಯ ಬಸವರಾಜನ್ ಬಿಜೆಪಿ ಸೇರುವ ತೀರ್ಮಾನ ಪ್ರಕಟಿಸಿದ್ದಾರೆ.

ಇಂದು ಸಂಜೆ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರರ ಸಮ್ಮುಖದಲ್ಲಿ ಅವರು ಬಿಜೆಪಿ ಸೇರಲಿದ್ದಾರೆ.

ಬಸವರಾಜನ್ ಮನೆಗೆ ಬಿಜೆಪಿ ಅಭ್ಯರ್ಥಿ ಶಾಸಕ ತಿಪ್ಪಾರೆಡ್ಡಿ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

Exit mobile version