Site icon Vistara News

Karnataka Election 2023: ಐಟಿ ದಾಳಿಗೆ ನಾವೇನೂ ಹೆದರುವುದಿಲ್ಲ ಎಂದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ

Karnataka Election 2023, We are not afraid to IT raid says Priyank Kharge

ಕಲಬುರಗಿ, ಕರ್ನಾಟಕ: ಪ್ರಧಾನಿ ನರೇಂದ್ರ ಮೋದಿ ಅವರು ರೌಡಿಶೀಟರ್ ಫೈಟರ್ ರವಿಗೆ ನಮಸ್ಕಾರ ಮಾಡಿದ ಮೇಲೆ ಗೊತ್ತಾಯ್ತು, ಮಣಿಕಂಠನಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಬಿಡುತ್ತಾರೆ ಎಂಬುದು. ಮೋದಿ ಅವರು ಚಿತ್ತಾಪುರಕ್ಕೆ ಬರದೇ ಇರುವುದು ಬಹಳ ನಿರಾಶೆಯಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ (Priyank Kharge) ಅವರು ವ್ಯಂಗ್ಯವಾಡಿದ್ದಾರೆ(Karnataka Election 2023).

ಖರ್ಗೆ ಕುಟುಂಬ ಹತ್ಯೆ ಮಾಡುವ ಬಗ್ಗೆ ಮಾತನಾಡಿದ್ದಾರೆನ್ನಲಾದ ಬಿಜೆಪಿ ಅಭ್ಯರ್ಥಿ ಮಣಿಕಂಠ ಆಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರಾಗೆ ಅವರು, ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಬಹಳ ಬುದ್ದಿವಂತ ಅಲ್ಲ ಅವನು. ಅವನು ಏನಿದ್ರು ಅಕ್ಕಿ ಪಕ್ಕಿ ಲೇವಲ್ ಅಲ್ಲೆ ಇದ್ದಾನೆ. ಅದಕ್ಕೆ ಚಿತ್ತಾಪುರಕ್ಕೆ ಉಸ್ತುವಾರಿಯ ಸುಪಾರಿ ಕೊಟ್ಟಿರೋದು ರವಿಕುಮಾರ್ ಅವರಿಗೆ. ಬಿಜೆಪಿಯವರು ಸೋಲುವ ಭೀತಿಯಿಂದ ಹತಾಶರಾಗಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಜೇವರ್ಗಿ , ಅಫಜಲಪುರ ಟಿಕೆಟ್ ಮಾರಾಟ ಆಗಿದೆಯಾ ಅಂತ ರವಿಕುಮಾರ್ ಅವರಿಗೆ ಈ ಹಿಂದೆಯೇ ಕೇಳಿದ್ದೇನೆ. ಮೋದಿಯವರು ಅವರು ಫೈಟರ್ ರವಿಗೆ ನಮಸ್ಕಾರ ಹಾಕಿದಾಲೆ ಗೋತ್ತಾಯ್ತು, ಮಣಿಕಂಠನಿಗೆ ಸಾಷ್ಟಾಂಗ ಹಾಕಿ ಬಿಡ್ತಾರೆ ಅಂತಾ ಕಾಣಿಸುತ್ತದೆಮೋದಿ ಚಿತ್ತಾಪುರಕ್ಕೆ ಬರದೆ ಇರೋದಕ್ಕೆ ಬಹಳ ನಿರಾಸೆ ಆಗಿದೆ ನನಗೆ. ಮಣಿಕಂಠ ಈ ಹಿಂದೆ ನವೆಂಬರ್‌ನಲ್ಲಿ ನನಗೆ ಶೂಟ್ ಮಾಡ್ತೆನೆ ಅಂತಾ ಕ್ಯಾಮೆರಾ ಮುಂದೆ ಹೇಳಿದ್ದ. ಬಿಜೆಪಿಯವರು ಮಾತೆತ್ತಿದ್ರೆ ರಾಮ ರಾಜ್ಯ ಕಟ್ಟತ್ತೆವೆ ಅಂತಾ ಹೇಳ್ತಾರೆ. ರಾಮರಾಜ್ಯವನ್ನು ರೌಡಿ ಗಳ ಜೊತೆ ಕಟ್ಟತ್ತೀರಾ ಹೇಗೆ ಎಂದು ಪ್ರಿಯಾಂಕ್ ಖರ್ಗೆ ಅವರು ಪ್ರಶ್ನಿಸಿದರು.

ಬಿಜೆಪಿಯವರು ಎಂತಹವರಿಗೆ ಟಿಕೆಟ್ ಕೊಟ್ಟಿದ್ದರಿ ಅಂತಾ ಯೋಚನೆ ಮಾಡಲಿ. ವಿಶ್ವನಾಥ್ ಪಾಟೀಲ್ ಅವರ ಕಾಲು ಧೋಳಿನಷ್ಟು ಅನುಭವ ಇಲ್ಲ ರವಿಕುಮಾರ್‌ಗೆ. ವಿಶ್ವನಾಥ್ ಪಾಟೀಲ್ ಅವರನ್ನ ಖರಿದಿ ಮಾಡಿದ್ದಿವಿ ಅಂತಾ ಚಿತ್ತಾಪುರದಲ್ಲಿ ಬಂದು ಹೇಳಲಿ. ವಿಶ್ವನಾಥ್ ಪಾಟೀಲ್ ಅವರು ಖರಿದಿ ಆಗ್ತಾರೆ ಅಂತಾ ತಿಳಿದುಕೊಂಡರೆ ಅವರಷ್ಟು ಮೂರ್ಖರು ಯಾರು ಇಲ್ಲ. ರವಿಕುಮಾರ್ ಗ್ರಾಮ ಪಂಚಾಯ್ತಿ ಗೆಲ್ಲೋದಕ್ಕೂ ಆಗಲ್ಲ ಎಂದು ಪ್ರಿಯಾಂಕ್ ಖರ್ಗೆ ಅವರು ಹೇಳಿದರು.

ಬಿಜೆಪಿಯವರು ಇಡೀ ರಾಜ್ಯದಲ್ಲಿ ಚುನಾವಣೆಯಲ್ಲಿ ಸೋಲ್ತಿದ್ದಾರೆ. ಬಿಜೆಪಿಯವರು ಹತಾಶೆಗೆ ಒಳಗಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜಾತಿ , ಧರ್ಮ , ತಂದು ವೈಯಕ್ತಿಕವಾಗಿ ಜಗಳ ಹಚ್ಚೋದಕ್ಕೆ ಮುಂದಾಗಿದ್ದಾರೆ. ಬಿಜೆಪಿಯವರಿಗೆ ಕರ್ನಾಟಕ ಕೈ ತಪ್ಪಿದರೆ ಮುಜುಗರ ಆಗುತ್ತದೆ. ಅದಕ್ಕಾಗಿ ಕೇಂದ್ರ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳೊಕೆ‌ ಮುಂದಾಗಿದ್ದಾರೆ. ಕಲಬುರಗಿಯಲ್ಲಿ ನಿನ್ನೆ ಐಟಿ ಅಸ್ತ್ರವನ್ನ ಬಳಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರನ್ನ ಕಡಿವಾಣ ಹಾಕಲು ಪ್ರಯತ್ನ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ನಿನ್ನೆ ವಾಹೇದ್ ಅಲಿ , ಮೊಹ್ಮದ್ ಜಹಾಗಿರದಾರ್ , ಅರವಿಂದ್ ಚಹ್ವಾಣ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಅರವಿಂದ ಚಹ್ವಾಣ್ ಅವರ ತಾಯಿ ಮನೆಯಲ್ಲಿ ಒಬ್ಬರೆ ಇದ್ದರು ದಾಳಿ ಮಾಡಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದಾಗ ಎಲ್ಲರು ಕಳ್ಳರು ಸುಳ್ಳರು ಬಿಜೆಪಿಯವರ ಪಾಲಿಗೆ. ಬಿ ಜೆಪಿಗೆ ಸೇರಿದ ಮೇಲೆ ಅವರೆಲ್ಲರೂ ದೇಶಪ್ರೇಮಿಗಳು, ರಾಷ್ಟ್ರ ಭಕ್ತರಾಗಿ ಬಿಡುತ್ತಾರೆ. ಎರಡೇ ವಾರದಲ್ಲಿ ಅರವಿಂದ್ ಚಹ್ವಾಣ್ ಅಕ್ರಮ ಆಸ್ತಿಗಳಿಗೆ ಮಾಡಿದ್ರಾ? ಎರಡೇ ವಾರದಲ್ಲಿ ಇವರು ಕೆಟ್ಟವರಾಗಿ ಬಿಟ್ಟರಾ ಹೇಗೆ? ಅರವಿಂದ್ ಚಹ್ವಾಣ್ ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿರೋದಕ್ಕೆ ಐಟಿ ದಾಳಿ ಮಾಡಿ ತೊಂದರೆ ಕೊಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಅವರು ಹೇಳಿದರು.

Exit mobile version