Site icon Vistara News

Karnataka Election | ರಸ್ತೆ, ಚರಂಡಿ ಸಮಸ್ಯೆಗಿಂತ ಲವ್ ಜಿಹಾದ್ ದೊಡ್ಡದು ಎಂದ ಬಿಜೆಪಿ ಅಧ್ಯಕ್ಷ ಕಟೀಲ್

nalinkumar

ಬೆಂಗಳೂರು: ರಸ್ತೆ, ಚರಂಡಿಗಳಂಥ ಸಣ್ಣ ವಿಷಯಗಳ ಬಗ್ಗೆ ಕೇಳಬೇಡಿ. ಒಂದು ವೇಳೆ, ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದರೇ ಮತ್ತು ಲವ್ ಜಿಹಾದ್ ನಿಲ್ಲಿಸಬೇಕಿದ್ದರೆ, ಅದಕ್ಕಾಗಿ ನಮಗೆ ಬಿಜೆಪಿ ಬೇಕು. ಈ ಲವ್ ಜಿಹಾದ್ ಸಮಸ್ಯೆಯಿಂದ ಹೊರಬರಲು ಬಿಜೆಪಿ ಬೇಕು ಎಂದು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೂತ್ ಲೇವಲ್ ಕಾರ್ಯಕರ್ತರ ಸಭೆಯಲ್ಲಿ ತಿಳಿಸಿದ್ದಾರೆ(Karnataka Election).

ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡಯಲಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಕಾರ್ಯಕರ್ತರನ್ನು ಸಜ್ಜುಗೊಳಿಸುತ್ತಿವೆ. ಅದೇ ರೀತಿ, ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶಗಳನ್ನು ಮಾಡುತ್ತಿದೆ. ಸೋಮವಾರ ನಡೆದ ಸಮಾವೇಶವೊಂದರಲ್ಲಿ ಕಟೀಲ್, ರಸ್ತೆ ಮತ್ತು ಚರಂಡಿ ಸಮಸ್ಯೆಗಿಂತ ಲವ್ ಜಿಹಾದ್ ಸಮಸ್ಯೆಯೇ ದೊಡ್ಡದು ಎಂದು ಹೇಳಿದ್ದಾರೆ.

ಕಟೀಲ್ ಹೇಳಿಕೆಗೆ ಕಾಂಗ್ರೆಸ್ ಉಗ್ರವಾಗಿ ಪ್ರತಿಕ್ರಿಯಿಸಿದೆ. ಅವರು (ಬಿಜೆಪಿ) ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಅವರ ದ್ವೇಷದತ್ತ ನೋಡುತ್ತಿದ್ದಾರೆ. ಈ ದೇಶವನ್ನು ಒಡೆಯುವುದೇ ಅವರ ಅಜೆಂಡಾ ಆಗಿದೆ. ಹಾಗಾಗಿ ನಾವು ಮಾತ್ರ ಯಾವಾಗಲೂ ಅಭಿವೃದ್ಧಿಯತ್ತ ನೋಡುತ್ತಿರುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ | Election 2023 | ಕರ್ನಾಟಕದಲ್ಲಿ ಚುನಾವಣೆ ಗೆಲ್ಲುವ ಮಾತನಾಡುವ ಸಿದ್ದು ಬಾದಾಮಿಯನ್ನೇಕೆ ಬಿಡುತ್ತಿದ್ದಾರೆ: ಬಿಎಸ್‌ವೈ ಪ್ರಶ್ನೆ

Exit mobile version