Site icon Vistara News

Karnataka Election : ಸಿದ್ದರಾಮಯ್ಯ ಹೊಸಪೇಟೆಯಿಂದ ಸ್ಪರ್ಧಿಸಿದರೆ ಹೊಲ ಮನೆ ಮಾರಿ ಕೋಟಿ ರೂ. ಕೊಡ್ತೇನೆ ಎಂದ ಅಭಿಮಾನಿ

siddaramaiah

#image_title

ವಿಜಯನಗರ: ಕಾಂಗ್ರೆಸ್‌ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರದಿಂದ ಕಣಕ್ಕಿಳಿಯುವುದಾಗಿ (Karnataka Election) ಘೋಷಣೆ ಮಾಡಿದ್ದರೂ ಅವರನ್ನು ನಮ್ಮಲ್ಲಿ ಬನ್ನಿ, ನಮ್ಮಲ್ಲಿ ಬನ್ನಿ ಎಂದು ಆಹ್ವಾನಿಸುವುದು ಮುಂದುವರಿದಿದೆ. ಇತ್ತೀಚೆಗೆ ಚಿಕ್ಕಮಗಳೂರಿನ ಬಾಲಕೃಷ್ಣ ಎಂಬ ಸಿದ್ದು ಅಭಿಮಾನಿಯೊಬ್ಬರು ಒಂದೊಮ್ಮೆ ಶಾಸಕ ಸಿ.ಟಿ. ರವಿ ವಿರುದ್ಧ ಸ್ಪರ್ಧಿಸಿದರೆ ತನಗಿರುವ ಎರಡೂವರೆ ಎಕರೆ ತೋಟವನ್ನು ಮಾರಿ ಒಂದು ಕೋಟಿ ರೂಪಾಯಿ ಹಣವನ್ನು ಕೊಡುತ್ತೇನೆ ಎಂದು ಘೋಷಣೆ ಮಾಡಿದ್ದರು. ಈಗ ಹೊಸಪೇಟೆ ಕ್ಷೇತ್ರದ ಅಭಿಮಾನಿಯ ಸರದಿ!

ಸಿದ್ದರಾಮಯ್ಯ ಅವರು ವಿಜಯನಗರ ಜಿಲ್ಲೆಯ ಹೊಸಪೇಟೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ತನ್ನ ಆರು ಎಕರೆ ಹೊಲದಲ್ಲಿ ಎರಡು ಎಕರೆ ಮಾರಾಟ ಮಾಡಿ ಒಂದು ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಅಭಿಮಾನಿಯೊಬ್ಬರು ಘೋಷಣೆ ಮಾಡಿದ್ದಾರೆ.

ಸಿದ್ದರಾಮಯ್ಯ ಅಭಿಮಾನಿ ಮಲಿಯಪ್ಪ ಅವರ ಜಮೀನಿನ ದಾಖಲೆ

ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದ ಕೆ.ಎಸ್. ಮಲಿಯಪ್ಪ ಎಂಬ ಸಿದ್ದು ಅಭಿಮಾನಿಯೇ ಈ ಆಫರ್‌ ನೀಡಿದವರು. ಸಿದ್ದರಾಮಯ್ಯ ಹೊಸಪೇಟೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಖಂಡಿತ ಗೆಲುವು ಸಿಗುತ್ತದೆ. ಹೀಗಾಗಿ ಹಣ ಹೊಂದಿಸಿ‌ಕೊಡ್ತೇನೆ ಎಂದಿದ್ದಾರೆ ಅವರು. ಗಾದಿಗನೂರು ಗ್ರಾಮದ ಗೋನಾಳ ಬಳಿ ಆರು ಎಕರೆ ಜಮೀನು ಇದೆ. ಈ ಪೈಕಿ ಎರಡು ಎಕರೆ ಜಮೀನು ಮಾರಾಟ ಮಾಡಿ ಸಿದ್ದರಾಮಯ್ಯ ಅವರಿಗೆ ದೇಣಿಗೆ ಕೊಡುತ್ತೇನೆ. ಇಲ್ಲಿ ಒಂದು ಎಕರೆಗೆ ಐವತ್ತು ಲಕ್ಷ ರೂ. ಇದೆ. ಹೀಗಾಗಿ ಎರಡು ಎಕರೆ ಮಾರಾಟ ಮಾಡಿ ಒಂದು ಕೋಟಿ ಕೋಡುತ್ತೇನೆ ಎಂದು ಹೇಳಿದ್ದಾರೆ ಅಭಿಮಾನಿ ಮಲಿಯಪ್ಪ.

ಇದನ್ನೂ ಓದಿ Karnataka Election: ಸಿ.ಟಿ. ರವಿ ಎದುರು ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ 1 ಕೋಟಿ ರೂ. ಕೊಡುವೆನೆಂದ ಅಭಿಮಾನಿ!

Exit mobile version