Site icon Vistara News

Karnataka Election: ಲೂಟಿ ಸರ್ಕಾರ ಬಿಡಿ, ಕಾಂಗ್ರೆಸ್‌ಗೆ ಮತ ಕೊಡಿ; ಹುಬ್ಬಳ್ಳಿಯಲ್ಲಿ ಸೋನಿಯಾ ಗಾಂಧಿ ಕರೆ

Sonia Gandhi

Congress will not attend Ram Mandir inauguration, calls it BJP-RSS event

ಹುಬ್ಬಳ್ಳಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Election) ಕೆಲವೇ ದಿನ ಬಾಕಿ ಇರುವಾಗಲೇ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಕೂಡ ಪ್ರಚಾರ ಕೈಗೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಬೃಹತ್‌ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಆಡಳಿತಾರೂಢ ಬಿಜೆಪಿಯನ್ನು ಕಟು ಪದಗಳಿಂದ ಟೀಕಿಸಿದರು. “ರಾಜ್ಯದಲ್ಲಿ ಲೂಟಿ ಸರ್ಕಾರವನ್ನು ಬಿಡಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಅಧಿಕಾರ ನೀಡಿ” ಎಂದು ಮನವಿ ಮಾಡಿದರು.

“ಕರ್ನಾಟಕದ ಜನತೆಗೆ ಕಾಂಗ್ರೆಸ್‌ ಹಲವು ಗ್ಯಾರಂಟಿಗಳನ್ನು ನೀಡಿದೆ. ನಾವು ಅಧಿಕಾರಕ್ಕೆ ಬಂದಕೂಡಲೇ, ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಜನರ ಹಣವನ್ನು ಲೂಟಿ ಮಾಡುವ ಪಕ್ಷವನ್ನು ಸೋಲಿಸಿ. ರಾಜ್ಯದ ಪ್ರತಿಯೊಬ್ಬರ ಏಳಿಗೆಗಾಗಿ ಕಾಂಗ್ರೆಸ್‌ಅನ್ನು ಗೆಲ್ಲಿಸಿ” ಎಂದು ಮನವಿ ಮಾಡಿದರು. ಹಾಗೆಯೇ, “ಇಂದಿರಾ ಗಾಂಧಿ ಅವರ ಜತೆ ಚಿಕ್ಕಮಗಳೂರು ಜನ ನಿಂತಿದ್ದರು. ನಾನು ಕೂಡ ಬಳ್ಳಾರಿಯಿಂದ ಸ್ಪರ್ಧಿಸಿದ್ದಾಗ ಜನ ನನ್ನ ಜತೆ ನಿಂತರು” ಎಂಬುದನ್ನು ಸ್ಮರಿಸಿದರು.

ಹುಬ್ಬಳ್ಳಿ ರ‍್ಯಾಲಿ ಲೈವ್

ಜನರ ವಿರೋಧಿ ಸರ್ಕಾರ, ಮೋಸ, ವಂಚನೆ ವಿರುದ್ಧ ಭಾರತ್‌ ಜೋಡೋ ಯಾತ್ರೆ ಕೈಗೊಳ್ಳಲಾಯಿತು. ದೇಶದಲ್ಲಿ ಪ್ರಗತಿ ಎಂಬುದು ಮರೀಚಿಕೆಯಾಗಿದೆ. ಇದೇ ಕಾರಣಕ್ಕಾಗಿ, ರಾಹುಲ್‌ ಗಾಂಧಿ ಅವರು ದೇಶಾದ್ಯಂತ ಭಾರತ್‌ ಜೋಡೋ ಯಾತ್ರೆ ಕೈಗೊಂಡರು. ಜನರು ಕೂಡ ದೇಶದ ನಾಲ್ಕು ಸಾವಿರಕ್ಕೂ ಅಧಿಕ ಕಿ.ಮೀ ಪಾದಯಾತ್ರೆಗೆ ಸಾಥ್‌ ನೀಡಿದರು. ಕರ್ನಾಟಕದ ಜನರು ಕೂಡ ಭಾರತ್‌ ಜೋಡೋ ಯಾತ್ರೆಗೆ ಬೆಂಬಲ ಸೂಚಿಸಿದರು ಎಂದು ಸೋನಿಯಾ ಗಾಂಧಿ ಹೇಳಿದರು.

40% ಸರ್ಕಾರ ಎಂದು ಟೀಕಿಸಿದ ಸೋನಿಯಾ

“ಕರ್ನಾಟಕದಲ್ಲಿ ಶೇ.40ರಷ್ಟು ಕಮಿಷನ್‌ ಹೊಡೆಯಲಾಗಿದೆ ಎಂದು ಸೋನಿಯಾ ಗಾಂಧಿ ಅವರು ಕೂಡ ಬಿಜೆಪಿಯನ್ನು ಟೀಕಿಸಿದರು. ದೇಶದ ನಾಯಕ ಎನಿಸಿಕೊಂಡವರು ಯಾವ ಪ್ರಶ್ನೆಗಳಿಗೂ ಉತ್ತರ ನೀಡುವುದಿಲ್ಲ, ಯಾವುದಕ್ಕೂ ಅವರು ಉತ್ತರದಾಯಿಗಳಲ್ಲ. ನಮಗೆ ಇಂತಹ ಸರ್ಕಾರ ಏಕೆ ಬೇಕು? ಬಿಜೆಪಿಯನ್ನು ಗೆಲ್ಲಿಸದಿದ್ದರೆ ಕರ್ನಾಟಕಕ್ಕೆ ಮೋದಿ ಆಶೀರ್ವಾದ ಇರುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಆದರೆ, ಬಿಜೆಪಿ ನಾಯಕರು ಒಂದು ಮಾತನ್ನು ತಿಳಿದುಕೊಳ್ಳಬೇಕು. ಕರ್ನಾಟಕದ ಜನರು ಸ್ವಾಭಿಮಾನಿಗಳಾಗಿದ್ದಾರೆ. ರಾಜ್ಯದ ಜನ ಭಯಪಡುವುದಿಲ್ಲ. ಅಷ್ಟಕ್ಕೂ, ರಾಜ್ಯದ ಜನ ಪರಿಶ್ರಮದಿಂದ ಏಳಿಗೆ ಹೊಂದಿದ್ದಾರೆ. ಹಾಗಾಗಿ, ಬಿಜೆಪಿಯವರು ಕರ್ನಾಟಕವನ್ನು ಹಗುರವಾಗಿ ತಿಳಿಯಬಾರದು” ಎಂದು ಹೇಳಿದರು.

ಇದನ್ನೂ ಓದಿ: Modi In Karnataka: ಕಾಂಗ್ರೆಸ್‌ ಗ್ಯಾರಂಟಿ ಸುಳ್ಳು, ನಂಬಿದರೆ ಮುಳ್ಳು; ಬೊಮ್ಮಾಯಿ ತವರಲ್ಲಿ ಮೋದಿ ಅಬ್ಬರ

“ಜನರ ಆಶೀರ್ವಾದದಿಂದ ನಾಯಕನಾಗುತ್ತಾನೆಯೇ ಹೊರತು, ಯಾವ ಜನರ ಮೇಲೂ ನಾಯಕನ ಆಶೀರ್ವಾದ ಇರುವುದಿಲ್ಲ. ಅಷ್ಟಕ್ಕೂ, ಕರ್ನಾಟಕವು ಭಗವಾನ್‌ ಬಸವಣ್ಣನವರ ಪುಣ್ಯಭೂಮಿಯಾಗಿದೆ. ಬಸವಣ್ಣನವರು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುವ ಸಂದೇಶ ರವಾನಿಸಿದ್ದಾರೆ. ಕುವೆಂಪು ಅವರು ಬದುಕಿದಂತಹ ನಾಡಿಗೆ ಬಿಜೆಪಿಯವರು ನಿತ್ಯ ಅವಮಾನ ಮಾಡುತ್ತಿದ್ದಾರೆ” ಎಂದು ಟೀಕಿಸಿದರು.

Exit mobile version