Site icon Vistara News

Murder Case : ಟೈಂ ಆಯ್ತು ಬಾರ್‌ ಕ್ಲೋಸ್‌ ಎಂದಿದ್ದಕ್ಕೆ ಕ್ಯಾಶಿಯರ್‌ನ ಕೊಲೆ ಮಾಡಿದ ಕುಡುಕ

Murder Case in kodagu

ಕೊಡಗು: ಈಗಂತು ಕ್ಷುಲ್ಲಕ ಕಾರಣಕ್ಕೆಲ್ಲ ಜನರು ಕೊಲೆ ಮಾಡುವ ಹಂತಕಕ್ಕೆ ಹೋಗುವ ಮನಸ್ಥಿತಿ ಹೆಚ್ಚಾಗುತ್ತಿದೆ. ಸದ್ಯ ಕುಡಿದ ಮತ್ತಿನಲ್ಲಿ ಕುಡುಕನೊಬ್ಬ ಬಾರ್ ಕ್ಯಾಷಿಯರ್‌ನನ್ನೇ ಬರ್ಬರವಾಗಿ ಕೊಲೆ (Murder Case) ಮಾಡಿದ್ದಾನೆ. ಕೊಡಗು ಜಿಲ್ಲೆ ಕುಶಾಲನಗರ ಕನ್ನಿಕ್ಕ ಇಂಟರ್ನ್ಯಾಷನಲ್ ಬಾರ್‌ನಲ್ಲಿ ಘಟನೆ ನಡೆದಿದೆ. ಬಾರ್ ಕ್ಯಾಷಿಯರ್ ಸಂತೋಷ್ (40) ಮೃತ ದುರ್ದೈವಿ.

ಸೋಮವಾರಪೇಟೆ ಬೆಟ್ಟದಳ್ಳಿ ನಿವಾಸಿ ಸಂತೋಷ್‌ನನ್ನು ಕುಶಾಲನಗರ ನಿವಾಸಿ ಹರ್ಷ ಕುಮಾರ್ ಎಂಬಾತ ಹತ್ಯೆ ನಡೆಸಿದ್ದಾನೆ. ಸಮಯ 12 ಗಂಟೆ ಆಯ್ತು, ಬಾರ್‌ ಕ್ಲೋಸ್ ಮಾಡುತ್ತೀವಿ ಎಂದು ಸಂತೋಷ್‌ ಹೇಳಿದ್ದಾರೆ. ಇದರಿಂದ ಸಿಟ್ಟಾದ ಹರ್ಷ ಏಕಾಏಕಿ ಬಿಯರ್ ಬಾಟೆಲ್‌ ಒಡೆದು, ಸಂತೋಷ್‌ನ ಕುತ್ತಿಗೆ ಹಾಗೂ ಹೊಟ್ಟೆಗೆ ತಿವಿದಿದ್ದಾನೆ.

ದಿಢೀರ್‌ ದಾಳಿಯಿಂದ ಕುಸಿದು ಬಿದ್ದ ಸಂತೋಷ್‌ ಗಂಭೀರ ಗಾಯಗೊಂಡಿದ್ದರು. ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ಸಾಗಿಸುವ ಮೊದಲೇ ಉಸಿರು ನಿಲ್ಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುಶಾಲನಗರ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ನಶೆಯಲ್ಲಿದ್ದ ಆರೋಪಿ ಹರ್ಷನನ್ನು ಕುಶಾಲನಗರ ಟೌನ್ ಪೊಲೀಸರು ಬಂಧಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Drowned In lake : ಕತ್ತಲಲ್ಲಿ ಮೀನು ಹಿಡಿಯಲು ಹೋಗಿ‌ ನೀರುಪಾಲಾದ ವ್ಯಕ್ತಿ

ನಡುಬೀದಿಯಲ್ಲಿ ಚಿಕ್ಕಪ್ಪನಿಗೆ ಪೆಟ್ರೋಲ್‌ ಸುರಿದು ಬೆಂಕಿಯಿಟ್ಟ ಮಗ

ಬೆಂಗಳೂರು: ತಮಿಳುನಾಡಿನಲ್ಲೊಂದು ಅಮಾನುಷ ಕ್ರೌರ್ಯದ (Crime news) ಘಟನೆ ನಡೆದಿದೆ. ಪಾಪಿಯೊಬ್ಬ ನಡುಬೀದಿಯಲ್ಲಿ ತನ್ನ ಚಿಕ್ಕಪ್ಪನ ಮೇಲೆ ಪೆಟ್ರೋಲ್‌ (Petrol) ಸುರಿದು ಬೆಂಕಿಯಿಟ್ಟು (Man Burnt Alive) ಪೈಶಾಚಿಕತೆ ಮೆರೆದಿದ್ದಾನೆ.

ರಾಜ್ಯದ ತಮಿಳುನಾಡು ಗಡಿಭಾಗ ಕೃಷ್ಣಗಿರಿ ಜಿಲ್ಲೆಯ ಕಾವೇರಿಪಟ್ಟಣಂ ಸಮೀಪದ ಚಂದಾಪುರ ಗ್ರಾಮದಲ್ಲಿ ಈ ಬರ್ಬರ ಘಟನೆ ನಡೆದಿದೆ. ಜಮೀನು ವಿವಾದದ (land dispute) ಕಾರಣಕ್ಕೆ ಚಿಕ್ಕಪ್ಪನಿಗೆ ಬೆಂಕಿ ಇಟ್ಟಿದ್ದಾನೆ ಪಾತಕಿ ಮಗ. ಈತನ ಅಮಾನವೀಯ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಚಿನ್ನವನ್(55) ದಾಳಿಗೆ ಒಳಗಾದ ವ್ಯಕ್ತಿ. ಸೆಂಥಿಲ್(26) ಚಿಕ್ಕಪ್ಪನಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ ಪಾಪಿ. ಕಳೆದ ಕೆಲ ವರ್ಷಗಳಿಂದ ಎರಡು ಕುಟುಂಬಗಳ ನಡುವೆ ನಡೆಯುತ್ತಿದ್ದ ಜಮೀನು ವಿವಾದ ಮುಂದುವರಿದು ಹೀಗೆ ಆಗಿದೆ. ಸೆಂಥಿಲ್ ಜಮೀನಿಗೆ ಚಿನ್ನವನ್ ಅವರ ಜಮೀನಿನ ಮೂಲಕವೇ ಓಡಾಡಬೇಕಿತ್ತು. ತನ್ನ ಜಮೀನಿನಲ್ಲಿ ಓಡಾಡಬಾರದೆಂದು ಚಿನ್ನವನ್ ಕುಟುಂಬ ಅಡ್ಡಿ ಪಡಿಸಿತ್ತು.

ಕಳೆದ ನವೆಂಬರ್ 19ನೇ ತಾರೀಕಿನಂದು ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಸೆಂಥಿಲ್ ಕುಟುಂಬ ಕಾವೇರಿಪಟ್ಟಣಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. ಅಂದಿನಿಂದ ಇಲ್ಲಿಯವರೆಗೆ ಯಾರಿಗೂ ಸಿಗದೆ ಚಿನ್ನವನ್ ಕುಟುಂಬ ಪರಾರಿಯಾಗಿತ್ತು. ನಿನ್ನೆ ಕಾವೇರಿಪಟ್ಟಣಂನ ಅಂಗಡಿ ಸಮೀಪ ಚಿನ್ನವನ್ ಎದುರಾಗಿದ್ದ. ಈ ವೇಳೆ ವಾಟರ್ ಬಾಟಲ್‌ನಲ್ಲಿ ತಂದಿದ್ದ ಪೆಟ್ರೋಲ್ ಅನ್ನು ನಡುರಸ್ತೆಯಲ್ಲಿ ಚಿನ್ನವನ್ ಮೇಲೆ ಎರಚಿ ಸೆಂಥಿಲ್ ಬೆಂಕಿ ಕೊಟ್ಟಿದ್ದಾನೆ.

ಅಲ್ಲಿನ ಜನರು ಸೆಂಥಿಲ್‌ನ್ನು ಹಿಡಿಯಲು ಮುಂದಾದರೂ ಆಕ್ರೋಶಗೊಂಡಿದ್ದ ಸೆಂಥಿಲ್ ತನ್ನ ಚಿಕ್ಕಪ್ಪ ಚಿನ್ನವನ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಧಗಧಗನೆ ಹೊತ್ತಿ ಉರಿಯುತ್ತಿದ್ದ ಬೆಂಕಿಯಲ್ಲಿ ನರಳಾಡುತ್ತಿದ್ದ ಚಿನ್ನವನ್‌ನನ್ನು ಸ್ಥಳೀಯರು ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಶೇಖಡಾ 70% ಸುಟ್ಟ ಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಕಾವೇರಿಪಟ್ಟಣಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version