Site icon Vistara News

Karnataka Election | ಕೋಲಾರದಿಂದಲೇ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಒತ್ತಾಯಿಸಿದ ಮಹಿಳೆಯರು

karnataka-election-women-voters-requested-siddaramaiah-to-contest-from-kolar

ಬೆಳಗಾವಿ: ವಿಧಾನಭೆ ಚುನಾವಣೆ (Karnataka Election) ಹತ್ತಿರವಾಗುತ್ತಿದ್ದರೂ ಕ್ಷೇತ್ರವನ್ನು ಅಂತಿಮಗೊಳಿಸಿಕೊಳ್ಳದ ಮಾಜಿ ಸಿಎಂ ಸಿದ್ದರಾಮ್ಮಯ ಅವರು ಕೋಲಾರದಿಂದಲೇ ಸ್ಪರ್ಧೆ ಮಾಡಬೇಕು ಎಂದು ಕೋಲಾರ ಕ್ಷೇತ್ರದ ಮಹಿಳಾ ಮುಖಂಡರು ಒತ್ತಾಯ ಮಾಡಿದ್ದಾರೆ.

ಬೆಳಗಾವಿಯ ಸುವರ್ಣಸೌಧಕ್ಕೆ ನಿಯೋಗದಲ್ಲಿ ಆಗಮಿಸಿದ ಮಹಿಳೆಯರ ಗುಂಪು, ಕೋಲಾರಕ್ಕೆ ಬರಬೇಕು ಎಂದು ಒತ್ತಡ ಹಾಕಿತು.

ವರುಣದಲ್ಲಿ ಕಳೆದ ವಾರ ರೌಂಡ್ಸ್ ಹಾಕಿದ್ದ ಸಿದ್ದರಾಮಯ್ಯ, ಅಲ್ಲಿಂದಲೇ ಸ್ಪರ್ಧೆ ಮಾಡುವ ಸುಳಿವು ನೀಡಿದ್ದರು. ಹೀಗಾಗಿ ಬೆಳಗಾವಿಗೇ ಆಗಮಿಸಿದ ಕೋಲಾರದ ತಂಡ, ಮನವಿ ಮಾಡಿದೆ.

ಜನವರಿ ಒಂಭತ್ತಕ್ಕೆ ಕೋಲಾರದಲ್ಲಿ ಮತ್ತೊಂದು ರೌಂಡ್ ಬರುವ ಭರವಸೆ ನೀಡಿದ ಸಿದ್ದರಾಮಯ್ಯ, ನಂತರ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ವರುಣ ಅಥವಾ ಇನ್ನಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಕುರಿತು ಸಿದ್ದರಾಮಯ್ಯ ಗೊಂದಲ ಮುಂದುವರಿಸಿದ್ದಾರೆ.

ಇದನ್ನೂ ಓದಿ | ವಿಸ್ತಾರ ಅಂಕಣ | ಪರಮ ಸಹಿಷ್ಣ ಹಿಂದೂಗಳು ಈಗಲೂ ಅಸಹಿಷ್ಣರಾಗಿಲ್ಲ, ಎಚ್ಚೆತ್ತುಕೊಂಡಿದ್ದಾರಷ್ಟೆ !

Exit mobile version