Site icon Vistara News

Road Accident : ಭೀಕರ ಅಪಘಾತ; ಬೈಕ್‌ ಸವಾರನ ರುಂಡ- ಮುಂಡ ಬೇರ್ಪಡಿಸಿದ ಟಿಪ್ಪರ್‌ ಲಾರಿ

Tipper lorry collides with bike in Kolar Rider death

ಕೋಲಾರ/ ಕಾರವಾರ: ವಾಹನ ಚಲಾಯಿಸುವಾಗ ಸವಾರರು ಎಚ್ಚರ ತಪ್ಪಿ, ಮೈ ಮರೆತರೆ ಪ್ರಾಣಪಕ್ಷಿಯೇ ಹಾರಿಹೋಗುತ್ತದೆ. ಕೋಲಾರದಲ್ಲಿ ಭೀಕರ ಅಪಘಾತಕ್ಕೆ (Road Accident) ಜನರು ಬೆಚ್ಚಿ ಬಿದ್ದಿದ್ದಾರೆ. ಕೋಲಾರ-ಹೊಸೂರು ಮಾರ್ಗದ ಮಿಟ್ಟದಿನ್ನಹಳ್ಳಿ ಗ್ರಾಮದ ಬಳಿ ಟಿಪ್ಪರ್ ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುರುಗೇಶ್ ಇಂಜಿಯರ್ ಮೃತ ದುರ್ದೈವಿ.

ಬೈಕ್‌ಗೆ ಟಿಪ್ಪರ್‌ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಲಾರಿ ಚಾಲಕನ ನಿಯಂತ್ರಣ ಸಿಗದೇ ಈ ವೇಳೆ ಸವಾರನನ್ನು 20 ಮೀಟರ್ ದೂರ ಎಳೆದೊಯ್ದಿದೆ. ಅಪಘಾತದ ತೀವ್ರತೆ ಎಷ್ಟರ ಮಟ್ಟಿಗೆ‌ ಸವಾರ ಮುರುಗೇಶ್‌ರ ರುಂಡ-ಮುಂಡವೇ ಬೇರ್ಪಟ್ಟಿತ್ತು. ಕರ್ತವ್ಯ ನಿಮಿತ ಬೈಕ್‌ನಲ್ಲಿ ಹೋಗುವಾಗ ಟಿಪ್ಪರ್ ಡಿಕ್ಕಿಯಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹೊಸೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Road Accident : ಬೈಕ್ ಡಿಕ್ಕಿಯಾಗಿ ಹಿರಿಯ ವಕೀಲ ಸಾವು; ಸವಾರ ಗಂಭೀರ

ಮರಕ್ಕೆ ಲಾರಿ ಡಿಕ್ಕಿ; ಚಾಲಕ ಸಾವು

ಚಾಲಕನ‌ ನಿಯಂತ್ರಣ ತಪ್ಪಿ ಲಾರಿಯೊಂದು ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಮರಕ್ಕೆ ಸಿಲುಕಿದ್ದರಿಂದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಕನ್ನಡದ ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 63ರ ಹೊನ್ನಳ್ಳಿ ಗ್ರಾಮದ ಬಳಿ ಅಪಘಾತ ನಡೆದಿದೆ.

ಪುಣೆ ಮೂಲದ ಕಿಶೋರ ಸಾವಂತ್ (45) ಮೃತ ದುರ್ದೈವಿ. ಹುಬ್ಬಳ್ಳಿಯಿಂದ ಲಾರಿಯಲ್ಲಿ ಟೈಲ್ಸ್ ಹೊತ್ತು ಅಂಕೋಲಾದತ್ತ ಆಗಮಿಸುತ್ತಿದ್ದಾಗ, ನಿಯಂತ್ರಣ ತಪ್ಪಿದೆ. ಏಕಾಏಕಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ. ಇದರಿಂದಾಗಿ ಕಿಶೋರ್‌ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಕ್ರೇನ್ ಸಹಾಯದಿಂದ ಲಾರಿ ಎಳೆದು ಮೃತದೇಹವನ್ನು ಹೊರತೆಗೆದಿದ್ದಾರೆ. ಅಂಕೋಲಾ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version