Site icon Vistara News

ಊಟ ಇಲ್ಲ ಎಂದಿದ್ದಕ್ಕೆ ಹೋಟೆಲ್‌ಗೇ ಬೆಂಕಿ ಹಚ್ಚಿದ ಕಿಡಿಗೇಡಿಗಳು!

ಕೊಪ್ಪಳ: ತಡರಾತ್ರಿ ಆಗಮಿಸಿದ್ದ ಗ್ರಾಹಕರು, ಊಟ ಇಲ್ಲ ಎಂದು ಹೇಳಿದ ಕಾರಣಕ್ಕೆ ಹೋಟೆಲ್‌ಗೇ ಬೆಂಕಿ ಹಚ್ಚಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿ ಈ ದುಷ್ಕೃತ್ಯ ನಡೆದಿದೆ.

ರಾತ್ರಿ 11 ಗಂಟೆಯ ಸುಮಾರಿಗೆ ಬಂದ ಕೆಲವರು ಹೋಟೆಲ್‌ನಲ್ಲಿ ಊಟ ಸಿಗಬಹುದೇ ಎಂದು ಕೇಳಿದ್ದಾರೆ. ಹೋಟೆಲ್‌ ಮಾಲೀಕರು ಊಟ ಇಲ್ಲವೆಂದು ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಅವರು ಹೋಟೆಲ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಕಿಡಿಗೇಡಿಗಳು ಹಟ್‌ಗಳಿಗೆ ಬೆಂಕಿ ಹಚ್ಚಿದ್ದರಿಂದ ಹೊಟೇಲ್‌ ಹೊತ್ತಿ ಉರಿದಿದೆ. ಸ್ಥಳೀಯರು ಹೋಟೆಲ್‌ನಲ್ಲಿ ಸಿಲುಕಿಕೊಂಡ ಸಿಬ್ಬಂದಿಯನ್ನು ಹೊರತರಲು ಸಾಹಸಪಟ್ಟಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ನೊಣಗಳ ಆಟ, ಗ್ರಾಮಸ್ಥರಿಗೆ ರೋಗದ ಕಾಟ

Exit mobile version