Site icon Vistara News

ಜುಲೈ 5ಕ್ಕೆ ಹಂದಿ ಹೊಡೆಯೋರನ್ನ ಕಳಿಸಬೇಡಿ ಎಂದ ಲಕ್ಷ್ಮಣ್‌: ಪ್ರತಾಪ್‌ ಸಿಂಹಗೆ ಮತ್ತೆ ಆಹ್ವಾನ

ಎಂ.ಲಕ್ಷ್ಮಣ್

ಮೈಸೂರು: ಮೈಸೂರು ಅಭಿವೃದ್ಧಿ ಬಗೆಗಿನ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ಕ್ರೆಡಿಟ್‌ ವಾರ್‌ ಮುಂದುವರಿದಿದ್ದು, ಮತ್ತೊಮ್ಮೆ ಚರ್ಚೆಗೆ ಬರುವಂತೆ ಸಂಸದ ಪ್ರತಾಪ ಸಿಂಹ ಅವರಿಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಪಂಥಾಹ್ವಾನ ನೀಡಿದ್ದಾರೆ.

ಈ ಹಿಂದೆ ಚರ್ಚೆಗೆ ಆಹ್ವಾನಿಸಿದ್ದಾಗ ಸಂಸದ ಪ್ರತಾಪ್‌ ಸಿಂಹ ಆಗಮಿಸಿರಲಿಲ್ಲ. ಗಂಧದ ಜತೆ ಗುದ್ದಾಡಬೇಕು, ಹಂದಿಯ ಜತೆಯಲ್ಲ. ನೀವು ಹಂದಿಯನ್ನು ಕಳುಹಿಸಿದರೆ, ನಾವು ಹಂದಿ ಹೊಡೆಯುವವರನ್ನು ಕಳುಹಿಸುತ್ತೇವೆ ಎಂದು ಲಕ್ಷ್ಮಣ್‌ ಕುರಿತು ವ್ಯಂಗ್ಯವಾಡಿದ್ದರು. ಆದರೆ ಇದೀಗ ಮತ್ತೆ ಬಹಿರಂಗ ಚರ್ಚೆಗೆ ಜುಲೈ 5ಕ್ಕೆ ಬನ್ನಿ ಎಂದು ಕಾಂಗ್ರೆಸ್‌ ವಕ್ತಾರ ದಿನಾಂಕ ಮಾಡಿದ್ದಾರೆ.

ಮೈಸೂರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಲು ಆಹ್ವಾನಿಸಿದರೆ ಪ್ರತಾಪ್ ಸಿಂಹ ನನ್ನನ್ನು ಹಂದಿ, ಕತ್ತೆಗೆ ಹೋಲಿಸಿ, ತಿಳಿದಿರುವವರನ್ನು ಕಳುಹಿಸಿ ಎಂದು ಟೀಕಿಸಿದ್ದಾರೆ. ಈ ಮೂಲಕ ಸಾಯುವವರೆಗೂ ನಾನೇ ಗೆಲ್ಲುತೇನೆ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. 2023ರಲ್ಲಿ ನೀವು ಹೇಗೆ ಗೆಲ್ಲುತ್ತೀರಾ ಎಂದು ನಾವೂ ನೋಡುತ್ತೇವೆ ಎಂದು ಕಿಡಿಕಾರಿದ ಎಂ.ಲಕ್ಷ್ಮಣ್, ಮಾಜಿ ಸಿಎಂ ಸಿದ್ದರಾಮಯ್ಯರ ಸಾಧನೆಗಳ ಬಗ್ಗೆ ಸಂಸದ ಪ್ರತಾಪ್ ಸಿಂಹ ನೀಡಿದ್ದ ಹೇಳಿಕೆಗಳ ವೀಡಿಯೋವನ್ನು ಪ್ರದರ್ಶಿಸುವ ಮೂಲಕ ತಿರುಗೇಟು ನೀಡಿದರು. ಜುಲೈ 5ರಂದು ಎರಡು ಹಂದಿ ಹಾಗೂ ಎರಡು ಕತ್ತೆಗಳ ಜತೆಗೆ ಚರ್ಚೆಗೆ ಬರುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ | ದಂಡು ಬಂತು, ದಾಳಿ ನಡೆಯಲಿಲ್ಲ: ಆಟೋದಲ್ಲಿ ಬಂದ ಲಕ್ಷ್ಮಣ್‌, ಹಂದಿ ಜತೆ ಮಾತಾಡಲ್ಲ ಎಂದ ಪ್ರತಾಪ್‌ ಸಿಂಹ

Exit mobile version