Site icon Vistara News

Lorry Accident: ಉಜಿರೆಯಲ್ಲಿ ಲಾರಿ ಹರಿದು ಇಬ್ಬರು ಸ್ಥಳದಲ್ಲೇ ದುರ್ಮರಣ

Lorry accident

ಮಂಗಳೂರು: ಲಾರಿ ಹರಿದು ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಗಾಂಧಿನಗರ ತಿರುವು ಬಳಿ ನಡೆದಿದೆ. ಬಸ್‌ಗೆ ಕಾಯುತ್ತಿದ್ದವರಿಗೆ ಲಾರಿ ಡಿಕ್ಕಿಯಾಗಿದ್ದರಿಂದ ದುರಂತ ನಡೆದಿದೆ.

ಉಜಿರೆ ಗಾಂಧಿನಗರದ ಕೃಷ್ಣಪ್ಪ (52), ಕುಂಟಿನಿ ನಿವಾಸಿ ಮೋಹಿನಿ(56) ಮೃತ ದುರ್ದೈವಿಗಳು. ಲಾರಿ ಚಾಲಕನ ಅತಿ ವೇಗ ಮತ್ತು ಅಜಾರೂಕತೆಯ ಚಾಲನೆಯಿಂದ ಅಪಘಾತ ನಡೆದಿದೆ ಎನ್ನಲಾಗಿದ್ದು, ಮೊದಲಿಗೆ ಜನರಿಗೆ ಗುದ್ದಿ ನಂತರ ವಿದ್ಯುತ್ ಕಂಬಗಳು ಹಾಗೂ ಕಟ್ಟಡಕ್ಕೆ ಡಿಕ್ಕಿ ಲಾರಿ ಡಿಕ್ಕಿಯಾಗಿದೆ. ನಂತರ ಲಾರಿ ಚಾಲಕನನ್ನು ಹಿಡಿದು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇದನ್ನೂ ಓದಿ | Attack on police: ಪೊಲೀಸರ ಮೇಲೆ ಹಲ್ಲೆ ಪ್ರಕರಣ; ಮಾಜಿ ಶಾಸಕನ ಪುತ್ರ ಅರೆಸ್ಟ್!

Assault Case : ಪತ್ನಿ ಜತೆಗೆ ಸಲುಗೆ; ಸಿಟ್ಟಾದ ಪತಿಯಿಂದ ಹುಬ್ಬಳ್ಳಿಯಲ್ಲಿ ಕ್ರಿಶ್ಚಿಯನ್ ಧರ್ಮಗುರುವಿಗೆ ಧರ್ಮದೇಟು!

ಹುಬ್ಬಳ್ಳಿ: ಹುಬ್ಬಳ್ಳಿಯ ಹೆಗ್ಗೆರಿ ಚರ್ಚ್ ಬಳಿ ಕ್ರಿಶ್ಚಿಯನ್ ಧರ್ಮಗುರುವಿಗೆ ಧರ್ಮದೇಟು (Assault Case) ಬಿದ್ದಿದೆ. ಪಾಸ್ಟರ್ ಸಂತೋಷ ಗಂಧದ ಎಂಬುವರಿಗೆ ನವೀನ್ ಒಳಗುಂದಿ ಎಂಬಾತ ಹಲ್ಲೆ ನಡೆಸಿದ್ದಾರೆ.

ಪಾಸ್ಟರ್‌ ಸಂತೋಷ್‌, ನವೀನ್‌ ದಂಪತಿ‌ ನಡುವೆ ಕಲಹಕ್ಕೆ ಕಾರಣವಾಗಿದ್ದಾನೆಂದು ಹಲ್ಲೆ ನಡೆಸಿದ್ದಾರೆ. ನವೀನ್‌ ಪತ್ನಿ ಫ್ರೆನಿ ಸ್ನೇಹ ಬೆಳೆಸಿದ ಸಂತೋಷ್‌, ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿಸಿದ್ದಾನೆಂದು ಆರೋಪವಿದೆ.

ಸಂತೋಷ್‌ ಫ್ರೇನಿ ಜತೆಗೆ ಸಲುಗೆ ಬೆಳೆಸಿ ಹಣ ಸುಲಿಗೆ ಮಾಡುತ್ತಿದ್ದ ಎನ್ನಲಾಗಿದೆ. ಸಂತೋಷ ಗೆಳೆತನದ ಕಾರಣದಿಂದಾಗಿ ಫ್ರೆನಿ ನವೀನ್‌ನಿಂದ ದೂರವಾಗಿದ್ದಳು. ಇದರಿಂದ ಸಿಟ್ಟಿಗೆದ್ದ ನವೀನ್‌ ನಡುರಸ್ತೆಯಲ್ಲೇ ಕ್ರಿಶ್ಚಿಯನ್ ಧರ್ಮಗುರು ಆಗಿರುವ ಸಂತೋಷ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇದನ್ನೂ ಓದಿ | Chelavara Falls: ಚೇಲವಾರ ಫಾಲ್ಸ್‌ನಲ್ಲಿ ಮುಳುಗಿ ಕೇರಳ ಯುವಕ ಸಾವು

ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹಲ್ಲೆ ವಿಡಿಯೊ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Exit mobile version