Site icon Vistara News

Love and murder : ಬೇರೆ ಮದುವೆಗೆ ಒಪ್ಪಿಕೊಂಡ ಪ್ರೇಯಸಿಯನ್ನು ಉಸಿರುಗಟ್ಟಿಸಿ ಕೊಂದು ಹಾಕಿದ ಕಿರಾತಕ

Bangalore murder

#image_title

ಬೆಂಗಳೂರು: ತನ್ನನ್ನು ಪ್ರೀತಿಸುತ್ತಿದ್ದ ಹುಡುಗಿ ಬೇರೆಯವನನ್ನು ಮದುವೆಯಾಗಲು ಒಪ್ಪಿಕೊಂಡಿದ್ದನ್ನು ಸಹಿಸಲಾಗದ ಯುವಕನೊಬ್ಬ ಆಕೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಭಯಾನಕ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಮದುವೆ ನಿಗದಿಯಾಗಿದ್ದ ಯುವತಿಯ ಮನೆಗೆ ಆತ್ಮೀಯತೆಯಿಂದಲೇ ಹೋದ ಧೂರ್ತ ಅಂತಿಮವಾಗಿ ಆಕೆಯನ್ನು ಕೊಲೆ ಮಾಡಿ (Murder by Lover) ಅಲ್ಲಿಂದ ಪರಾರಿಯಾಗಿದ್ದಾನೆ.

ಕೆ.ಪಿ. ಅಗ್ರಹಾರದ ನಿವಾಸಿಯಾಗಿರುವ ಮನೋಜ್‌ ಎಂಬಾತನೇ ಕೊಲೆಗಾರ. ಶಾಲಿನಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಆತ ಆಕೆ ಇನ್ನು ಸಿಗುವುದಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಕೊಲೆಯನ್ನೇ ಮಾಡಿದ್ದಾನೆ.

ಕೆ.ಪಿ. ಅಗ್ರಹಾರದ ನಿವಾಸಿಯಾಗಿರುವ ಮನೋಜ್‌ ಮತ್ತು ಶಾಲಿನಿ ಇಬ್ಬರೂ ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ನಡುವೆ, ಶಾಲಿನಿಗೆ ಮನೆಯವರು ಮದುವೆ ನಿಗದಿ ಮಾಡಿದ್ದರು. ಆಕೆಯೇ ಈ ಮದುವೆಗೆ ಒಪ್ಪಿಕೊಂಡಳೋ ಅಥವಾ ಮನೆಯವರು ಒಪ್ಪಿಸಿದರೋ ಗೊತ್ತಿಲ್ಲ. ಮನೆಯವರಿಗೆ ಇವರ ಪ್ರೀತಿಯ ಬಗ್ಗೆ ಗೊತ್ತಿತ್ತೋ ಎನ್ನುವುದೂ ಗೊತ್ತಿಲ್ಲ. ಅಂತೂ ಶಾಲಿನಿ ಮದುವೆಗೆ ಒಪ್ಪಿಕೊಂಡಿದ್ದಾಳೆ.

ಇದು ಮನೋಜ್‌ನನ್ನು ಕೆರಳಿಸಿದೆ. ಈ ವಿಚಾರದಲ್ಲಿ ಅವರಿಬ್ಬರ ಮಧ್ಯೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಮಂಗಳವಾರ ಸಂಜೆ ಆತ್ಮೀಯವಾಗಿಯೇ ಮಾತನಾಡುತ್ತಾ ಹುಡುಗಿಯ ಮನೆಗೆ ಬಂದಿದ್ದ. ಮುಖತಃ ಮಾತನಾಡಿ ಎಲ್ಲ ವಿಚಾರಗಳನ್ನೂ ಸೆಟ್ಲ್‌ ಮಾಡಿಕೊಳ್ಳೋಣ ಎಂದು ಶಾಲಿನಿ ಕೂಡಾ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಭೇಟಿಗೆ ಒಪ್ಪಿದ್ದಾಳೆ ಅನಿಸುತ್ತದೆ.

ಈ ನಡುವೆ ಅವರ ಮಧ್ಯೆ ಮತ್ತೆ ಜಗಳವಾಗಿದೆ. ʻನೀನು ಮನೆಯವರು ತೋರಿಸಿದ ಹುಡುಗನನ್ನು ನೀನು ಒಪ್ಪಿಕೊಂಡಿದ್ದಿಯಾʼʼ ಎಂದು ಕ್ಯಾತೆ ತೆಗೆದ ಆತ ಈ ವೇಳೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಅಲ್ಲಿಂದ ಕೆ.ಪಿ. ಅಗ್ರಹಾರದ ಮನೆಗೆ ಹೋಗಿದ್ದಾನೆ ಮನೋಜ್‌.

ಇತ್ತ ಶಾಲಿನಿ ಮನೆಯವರು ಮರಳಿ ಬಂದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ವಿಲ್ಸನ್‌ ಗಾರ್ಡನ್‌ ಠಾಣೆಗೆ ದೂರು ನೀಡಿದ್ದಾರೆ.

ಅತ್ಯಾಚಾರಕ್ಕೂ ಯತ್ನಿಸಿದ್ದ ದುಷ್ಟ

ಮನೋಜ್‌ ಆಕೆಯನ್ನು ಕೊಲೆ ಮಾಡಿದ್ದು ಮಾತ್ರವಲ್ಲ, ಅದರ ಜತೆಗೆ ಅತ್ಯಾಚಾರ ಮಾಡಲು ಯತ್ನಿಸಿರುವ ಕುರುಹುಗಳು ಕಂಡುಬಂದಿವೆ. ಆಕೆಯ ಖಾಸಗಿ ಭಾಗಗಳಲ್ಲಿ ರಕ್ತ ಬಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಮನೋಜ್‌

ಶಾಲಿನಿಯನ್ನು ಕೊಂದು ತನ್ನ ಕೆ.ಪಿ. ಅಗ್ರಹಾರದ ಮನೆಗೆ ಮರಳಿದ ಮನೋಜ್‌ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಆದರೆ, ಆತ ಸತ್ತಿಲ್ಲ. ಇದೀಗ ವಿಲ್ಸನ್‌ ಗಾರ್ಡನ್‌ ಪೊಲೀಸರು ಆರೋಪಿ ಮನೋಜ್‌ನನ್ನು ಬಂಧಿಸಿದ್ದಾರೆ.

ಕೊಡಗಿನಲ್ಲಿ ನಡೆಯಿತು ಮರ್ಯಾದಾ ಹತ್ಯೆ: ಮದುವೆಯಾದ ಮೂರೇ ದಿನಕ್ಕೆ ಮದುಮಗಳ ಕೊಲೆ

ಮಡಿಕೇರಿ: ಒಕ್ಕಲಿಗ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾದ ದಲಿತ ಯುವತಿಯೊಬ್ಬಳು ಮೂರೇ ದಿನಕ್ಕೆ ಸಾವಿಗೀಡಾಗಿದ್ದಾಳೆ. ಪತಿ ಹಾಗೂ ಆತನ ಕುಟುಂಬದವರ ಹೇಳಿಕೆಗಳು ಸಂಶಯಾಸ್ಪದವಾಗಿದ್ದು, ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಸಮೀಪದ 7ನೇ ಹೊಸಕೋಟೆ ಎಂಬಲ್ಲಿ ಈ ಘಟನೆ ನಡೆದಿದೆ. ಅಕ್ಷಿತಾ (18) ಕೊಲೆಯಾದ ಯುವತಿ. ನಿನ್ನೆ ಸಂಜೆ ಅನುಮಾನಾಸ್ಪದವಾಗಿ ಸಾವು ಸಂಭವಿಸಿದೆ. ಅದೇ ಗ್ರಾಮದ ಹೇಮಂತ್ ಎಂಬ ಒಕ್ಕಲಿಗ ಯುವಕನನ್ನು ಈಕೆ ಪ್ರೀತಿಸಿ ಮದುವೆಯಾಗಿದ್ದಳು. ಮೂರು ದಿನಗಳ ಹಿಂದೆ ಇಬ್ಬರೂ ದೇವಾಲಯದಲ್ಲಿ ಮದುವೆಯಾಗಿ ಬಂದಿದ್ದರು. ಇದರಿಂದ ಹೇಮಂತ್‌ನ ಪೋಷಕರಾದ ದಶರಥ ಮತ್ತು ಗಿರಿಜಾ ರೊಚ್ಚಿಗೆದ್ದಿದ್ದರು. ದಲಿತ ಯುವತಿ ತಮ್ಮ ಮಗನನ್ನು ಮದುವೆಯಾದುದು ಅವರಿಗೆ ಇಷ್ಟವಿರಲಿಲ್ಲ. ಆಕೆಯನ್ನು ಸಾಯಿಸಿಬಿಡುವುದಾಗಿ ಹೇಳಿದ್ದರು ಎಂದು ಅಕ್ಷಿತಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ : Dalit woman murder: ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ದಲಿತ ಯುವತಿ ಸಾವು, ಕೊಲೆ ಶಂಕೆ

Exit mobile version