Site icon Vistara News

Love Case | ಯುವತಿ ವಿಚಾರಕ್ಕೆ ಸ್ಮಶಾನದಲ್ಲಿ ಬಡಿದಾಡಿದರು; ಇಬ್ಬರು ಯುವಕರಿಗೆ ಚಾಕು ಇರಿದರು

hubli case

ಹುಬ್ಬಳ್ಳಿ: ಯುವತಿ ವಿಚಾರಕ್ಕೆ ಸ್ಮಶಾನದಲ್ಲಿ ಯುವಕರ ಎರಡು ಗುಂಪಿನವರು ಇಲ್ಲಿನ ಸ್ಮಶಾನದಲ್ಲಿ ಕಿತ್ತಾಡಿಕೊಂಡಿದ್ದು, ಇಬ್ಬರು ಯುವಕರಿಗೆ ಚಾಕು ಇರಿತದಲ್ಲಿ ಕೊನೆಗೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರೇಮ ವಿಚಾರವೇ (Love Case) ಗಲಾಟೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಸೆಪ್ಟೆಂಬರ್ 18 ರಂದು ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಗಲಾಟೆ ನಡೆದಿದ್ದು, ಯುವತಿ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ರಸ್ತೆ ಬದಿಯಲ್ಲಿರುವ ಸ್ಮಶಾನದಲ್ಲಿ ಹೊಡೆದಾಟ ನಡೆದಿದೆ. ಈ ವೇಳೆ ಇಬ್ಬರು ಯುವಕರಾದ ಕಾರ್ತಿಕ್ ಹಾಗೂ ನಾಗರಾಜ್‌ ಎಂಬುವವರ ಕುತ್ತಿಗೆ ಮತ್ತು ಎದೆಗೆ ಪೆಟ್ಟಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೊಡೆದಾಟದ ವಿಡಿಯೊ ವೈರಲ್
ಲವ್‌ ವಿಚಾರಕ್ಕಾಗಿ ಹೊಡೆದಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಯುವಕರು ಹೊಡೆದಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎದುರಾಳಿ ತಂಡದ ಶುಭಂ , ವರುಣ್ ಹಾಗೂ ಸಂಪತ್ ಮೇಲೆ ದೂರು ದಾಖಲಾಗಿತ್ತು. ಸದ್ಯ ಕಾರ್ತಿಕ್, ನಾಗರಾಜ್ ಹಾಗೂ ಸಿದ್ದು ಎಂಬ ಯುವಕರ ಮೇಲೆ ಪ್ರತಿದೂರು ದಾಖಲು ಮಾಡಲಾಗಿದೆ. ಹುಬ್ಬಳ್ಳಿಯ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ | Bengaluru Crime : ನಡುರಸ್ತೆಯಲ್ಲಿ ತಲ್ವಾರ್ ಹಿಡಿದು ದಾಳಿ

Exit mobile version