Site icon Vistara News

Love Torture : ಪ್ರೀತ್ಸೇ.. ಪ್ರೀತ್ಸೇ.. ಅಂತ ಹಿಂದೆ ಬಿದ್ದವನ ಕಾಟ ತಾಳಲಾರದೆ ವಿಷವುಂಡು ಜೀವ ಬಿಟ್ಟಳು!

love torture girl suicide

ಮೈಸೂರು: ತನ್ನ ಬದುಕು ಹಾಗಿರಬೇಕು, ಹೀಗಿರಬೇಕು ಎಂದು ಕನಸು ಕಟ್ಟಿಕೊಂಡಿದ್ದ ಯುವತಿಯ ಬದುಕು ಅರ್ಧದಲ್ಲಿಯೇ ಅಂತ್ಯ ಕಂಡಿದೆ. ಪ್ರೀತ್ಸೆ.. ಪ್ರೀತ್ಸೆ.. ಅಂತ ಅವಳದ್ದೇ ಗ್ರಾಮದ ಯುವಕನೊಬ್ಬ ಹಿಂದೆ ಬಿದ್ದಿದ್ದೇ ಈಕೆಯ ಸಾವಿಗೆ ಕಾರಣವಾಗಿದೆ. ಆತನ ನೀಡುವ ಟಾರ್ಚರ್‌ (Love Torture) ತಾಳಲಾರದೆ ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾಳೆ.

ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯ ಗಣಗರಹುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹರ್ಷಿತಾ (21) ಮೃತ ದುರ್ದೈವಿಯಾಗಿದ್ದಾಳೆ. ಅದೇ ಗ್ರಾಮದಲ್ಲಿ ವಾಸವಿದ್ದ ಯುವಕ ಶಿವು (26) ಕಿರುಕುಳ ನೀಡಿರುವ ಆರೋಪವನ್ನು ಎದುರಿಸುತ್ತಿದ್ದಾನೆ.

ಇದನ್ನೂ ಓದಿ: Electricuted: ಕಸ ಎಸೆಯಲು ಹೋದ ಬಾಲಕ ಶಾಕ್‌ನಿಂದ ಸಾವು; ತಂತಿಗೆ ವಿದ್ಯುತ್‌ ಹರಿಸಿ ಕ್ರೌರ್ಯ ಮೆರೆದನೇ ಮಾಲೀಕ?

ಪಿಯುಸಿ ಓದಿದ್ದ ಹರ್ಷಿತಾ ಕಂಪ್ಯೂಟರ್ ಕ್ಲಾಸ್‌ಗೆ ಜಾಯಿನ್ ಆಗಿದ್ದಳು. ಈ ವೇಳೆ ಆಕೆಯನ್ನು ನೋಡಿದ ಶಿವುಗೆ ಪ್ರೀತಿ ಹುಟ್ಟಿದೆ. ಹೀಗಾಗಿ ಪ್ರೀತಿಸು ಎಂದು ಹರ್ಷಿತಾ ಹಿಂದೆ ಬಿದ್ದಿದ್ದಾನೆ. ಶಿವು ಮನವಿಯನ್ನು ಹರ್ಷಿತಾ ತಿರಸ್ಕರಿಸುತ್ತಿದ್ದಳು. ಆಕೆ ಎಷ್ಟೇ ಬೇಡವೆಂದರೂ ಪದೇ ಪದೆ ಹೋಗಿ, ತನ್ನನ್ನು ಪ್ರೀತಿ ಮಾಡು ಎಂದು ದುಂಬಾಲು ಬಿದ್ದಿದ್ದ ಎನ್ನಲಾಗಿದೆ. ಆದರೆ, ಅದಕ್ಕೆ ಹರ್ಷಿತಾ ಸೊಪ್ಪು ಹಾಕಿರಲಿಲ್ಲ.

ಈ ಮಧ್ಯೆ ಹರ್ಷಿತಾ ಮನೆಯವರು ಮದುವೆ ಸಂಬಂಧವನ್ನು ನಿಗದಿ ಮಾಡಿದ್ದರು. ಅದಕ್ಕೆ ಹರ್ಷಿತಾ ಸಹ ಒಪ್ಪಿಗೆ ಸೂಚಿಸಿದ್ದಳು. ಆಷಾಢದ ನಂತರ ಮದುವೆ ದಿನಾಂಕವನ್ನು ಗೊತ್ತುಪಡಿಸಲು ನಿರ್ಧರಿಸಲಾಗಿತ್ತು. ಈ ಮಾಹಿತಿ ಅರಿತ ಶಿವು ತನ್ನನ್ನು ಪ್ರೀತಿಸಿ ಮದುವೆ ಆಗುವಂತೆ ದುಂಬಾಲು ಬಿದ್ದಿದ್ದ ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಪದೇ ಪದೆ ಬಂದು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಆದರೆ, ಯಾವುದಾದರೂ ರೀತಿ ಬ್ಲಾಕ್‌ಮೇಲ್‌ ಮಾಡಿದ್ದನೇ ಎಂಬುದು ತಿಳಿದುಬಂದಿಲ್ಲ. ಶಿವು ಕಿರುಕುಳವನ್ನು ತಾಳಲಾರದೆ ಹರ್ಷಿತಾ ಹುಳುಗಳಿಗಾಗಿ ಇಟ್ಟಿದ್ದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಹರ್ಷಿತಾಳನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಇದನ್ನೂ ಓದಿ: Video Viral : ಈಶ್ವರಪ್ಪಗೆ ಸನ್ಮಾನಿಸಲು ಒಲ್ಲೆ ಎಂದ ಸಿಎಂ ಸಿದ್ದರಾಮಯ್ಯ; ಕುಳಿತಲ್ಲಿಂದ ಏಳಲೇ ಇಲ್ಲ!

ಮಗಳ ಸಾವಿಗೆ ಶಿವು ಕಾರಣ ಎಂದು ಹರ್ಷಿತಾ ತಂದೆ ವೇಣುಗೋಪಾಲ್ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹರ್ಷಿತಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಶಿವು ಊರು ಬಿಟ್ಟಿದ್ದು, ಆತನ ಬಂಧನಕ್ಕೆ ಇಲವಾಲ ಪೊಲೀಸರಿಂದ ಹುಡುಕಾಟ ನಡೆದಿದೆ.

Exit mobile version