Site icon Vistara News

Lover Murder : ಕುಕ್ಕರ್‌ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ ಪ್ರೇಮಿ!

Vaishnav and Deva

ಬೆಂಗಳೂರು: ಬೇಗೂರಿನ (Begur Police) ನ್ಯೂ ಮೈಕೋ ಲೇಔಟ್‌ನಲ್ಲಿ ತಡರಾತ್ರಿ ಪ್ರೇಮಿಯೊಬ್ಬ ಸಿಟ್ಟಿಗೆದ್ದು ಪ್ರಿಯತಮೆಯನ್ನು ಹತ್ಯೆ (Lover Murder) ಮಾಡಿದ್ದಾನೆ. ತಲೆಗೆ ಕುಕ್ಕರ್‌ನಿಂದ ಹೊಡೆದು ಹತ್ಯೆ (Murder case) ಮಾಡಿದ್ದಾನೆ. ದೇವಾ (24 ) ಹತ್ಯೆಯಾದವಳು. ವೈಷ್ಣವ್ (24) ಆರೋಪಿ.

ಕೇರಳ ಮೂಲದ ದೇವಾ, ವೈಷ್ಣವ್‌ ಇಬ್ಬರು ಲಿವಿಂಗ್ ಟುಗೆದರ್‌ನಲ್ಲಿದ್ದರು. ಕಾಲೇಜು ದಿನಗಳಿಂದ ಒಟ್ಟಿಗೆ ವಿದ್ಯಾಭ್ಯಾಸ ‌ಮಾಡಿದ್ದ ಇವರು, ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು.

ತಡರಾತ್ರಿ ಇಬ್ಬರ ನಡುವೆ ಗಲಾಟೆ ಶುರುವಾಗಿದ್ದು, ವೈಷ್ಣವ್‌ ಸಿಟ್ಟಿನಿಂದ ದೇವಾ ತಲೆಗೆ ಕುಕ್ಕರ್‌ನಿಂದ ಹೊಡೆದಿದ್ದಾನೆ. ತಲೆಗೆ ಗಂಭೀರ ಗಾಯಗೊಂಡು ರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ. ಸದ್ಯ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೇಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಪೊಲೀಸರು ಆರೋಪಿ ವೈಷ್ಣವ್‌ನನ್ನು ಬಂಧಿಸಿದ್ದು, ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಅನ್ಯಕೋಮಿನ ಯುವತಿ ಜತೆ ಇದ್ದ ಯುವಕನಿಗೆ ಮಾರಣಾಂತಿಕ ಹಲ್ಲೆ

ಬೆಳಗಾವಿ: ಪೊಲೀಸರ ಎದುರೇ ಹಿಂದೂ ಸಮುದಾಯದ ಯುವಕನಿಗೆ ಅನ್ಯ ಕೋಮಿನ ಯುವಕರ ತಂಡವೊಂದು ಹಿಗ್ಗಾಮುಗ್ಗಾ ಥಳಿಸಿದೆ(Moral Policing). ಯುವಕ ಮಾರಣಾಂತಿಕವಾಗಿ (Youth Beaten) ಗಾಯಗೊಂಡಿದ್ದಾನೆ. ಅನ್ಯ ಕೋಮಿನ ಯುವತಿಯ ಜತೆಗಿದ್ದ ಎಂಬ ಕಾರಣಕ್ಕೆ ಯುವತಿ ಕೋಮಿನ ಯುವಕರ ತಂಡವೊಂದು ನೈತಿಕ ಪೊಲೀಸ್‌ಗಿರಿ ಮಾಡಿದ್ದು, ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಬೆಳಗಾವಿ ನಗರದಲ್ಲಿ ನಡೆದಿದೆ. ಹಲ್ಲೆ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ(Belagavi City).

ಇದನ್ನೂ ಓದಿ: Marriage Cancel : ಫೋಟೊಗೆ ಕಿಲಕಿಲನೇ ನಕ್ಕಳು; ತಾಳಿ ಕಟ್ಟೋ ವೇಳೆ ಹಸೆ‌ಮಣೆಯಿಂದ ಎದ್ದಳು!

ಈ ಕುರಿತು ಬೆಳಗಾವಿ ನಗರದ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಹಲ್ಲೆಗೊಳಗಾದ ಯುವಕನನ್ನು ಜ್ಞಾನೇಶ್ವರ್ ಎಂದು ಗುರುತಿಸಲಾಗಿದೆ. ಈತ ಗೋಕಾಕ್ ತಾಲೂಕಿನ ಮಲ್ಲಾಪೂರ ಪಿಜಿ ಗ್ರಾಮದವನು. ಜ್ಞಾನೇಶ್ವರ ತನ್ನ ಊರಿನ ಪರಿಚಯಸ್ಥ ಅನ್ಯ ಕೋಮಿನ ಯುವತಿಯೊಂದಿಗೆ ತೆರಳುತ್ತಿದ್ದ. ಈತ ವೃತ್ತಿಯಲ್ಲಿ ಫುಟ್‌ವೇರ್ ವ್ಯಾಪಾರಿಯಾಗಿದ್ದಾನೆ.

ಜ್ಞಾನೇಶ್ವರ್ ಅನ್ಯ ಕೋಮಿನ ಯುವತಿಯೊಂದಿಗೆ ತೆರಳುತ್ತಿರುವುದನ್ನು ಪತ್ತೆ ಹಚ್ಚಿದ ಅದೇ ಕೋಮಿನ ಯುವಕರ ತಂಡವು, ಆತನನ್ನು ಫಾಲೋ ಮಾಡಿಕೊಂಡು ಬಂದಿದೆ. ಅವರಿಬ್ಬರೂ ಬೆಳಗಾವಿ ಬಸ್ ನಿಲ್ದಾಣದಿಂದ ಖಡೇ ಬಜಾರ್ ಕಡೆಗೆ ಆಟೋದಲ್ಲಿ ಹೋಗುತ್ತಿದ್ದರು. ಇದನ್ನು ಗಮನಿಸಿದ 10 ಯುವಕರು ಆಟೋ ಫಾಲೋ ಮಾಡಿದ್ದಾರೆ. ಖಡೇ ಬಜಾರ್ ಬರುತ್ತಿದ್ದಂತೆ ಆಟೋ ನಿಲ್ಲಿಸಿ ಯುವಕನಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಬಳಿಕ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಜೀವ ಬೆದರಿಕೆ ಕೂಡ ಹಾಕಿದ್ದಾರೆ.

ಹಿಂದೂ ಯುವಕನ ಮೇಲೆ ಹಲ್ಲೆಗೈಯುತ್ತಿರುವ ವಿಡಿಯೋ ಫುಲ್ ವೈರಲ್ ಆಗಿದೆ. ಬೆಳಗಾವಿಯ ಖಡೇ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಸಂಬಂಧ ಕೆಲವು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಉಳಿದವರಿಗಾಗಿ ಶೋಧ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version