Site icon Vistara News

Suicide death | ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ ಮರದಿಂದ ಬಿದ್ದು ಸಾವು!

suicide death

ದೇವನಹಳ್ಳಿ: ಅವನು ಆತ್ಮಹತ್ಯೆಗೆಂದು ನಿರ್ಧರಿಸಿದ್ದ. ಒಂದು ಪಂಚೆಯನ್ನು ಹಿಡಿದುಕೊಂಡು ಮರದ ಮೇಲೂ ಹೋಗಿದ್ದ. ಪಂಚೆಯನ್ನು ಮರಕ್ಕೆ ಕಟ್ಟಿ ಅದರ ಮತ್ತೊಂದು ತುದಿಯನ್ನು ಉರುಳಾಗಿಸಿಕೊಂಡು ಅದಕ್ಕೆ ಕೊರಳೊಡ್ಡಿಯೇ ಬಿಟ್ಟ. ಆದರೆ, ಆ ಪಂಚೆಯೇ ಹರಿದು ಅವನು ಮರದಿಂದ ದೊಪ್ಪನೆ ಕೆಳಗೆ ಬಿದ್ದ. ಕೆಳಗೆ ಬಿದ್ದ ಮೇಲಾದರೂ ಬದುಕಿದನಾ? ಇಲ್ಲ. ಅವನ ತಲೆ ನೇರವಾಗಿ ನೆಲಕ್ಕೆ ಹೊಡೆದ ಪರಿಣಾಮವಾಗಿ ದೊಡ್ಡ ಪ್ರಮಾಣದಲ್ಲಿ ರಕ್ತಸ್ರಾವವಾಗಿ ಯುವಕ ಪ್ರಾಣ ಕಳೆದುಕೊಂಡಿದ್ದಾನೆ (Suicide death). ಅವನು ಬಯಸಿದ್ದು ಸಾವೇ ಅದರೂ ಸಿಕ್ಕಿದ್ದು ಬೇರೆ ರೀತಿಯಲ್ಲಿ.

ಇಂಥಹುದೊಂದು ವಿಚಿತ್ರ ಘಟನೆ ನಡೆದಿರುವುದು ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದ ತಾಲೂಕು ಕಚೇರಿ ವೃತ್ತದ ಬಳಿ. ಹೀಗೆ ಪ್ರಾಣ ಕಳೆದುಕೊಂಡ ಯುವಕ ಯಾರು ಎನ್ನುವುದು ಗೊತ್ತಾಗಿಲ್ಲ. ಅಪರಿಚಿತ ಯುವಕ ಇಲ್ಲಿಗೆ ಬಂದು ಈ ಕೃತ್ಯ ನಡೆಸಿಕೊಂಡಿದ್ದಾನೆ.

ಮರಕ್ಕೆ ಹತ್ತಿ ಪಂಚೆಯಲ್ಲಿ ನೇಣು ಹಾಕಿಕೊಳ್ಳಲು ಮುಂದಾಗಿದ್ದ ಯುವಕ ಕೊನೆಯ ಕ್ಷಣದಲ್ಲಿ ನೇಣಿಗೆ ಕೊರಳೊಡ್ಡುವಾಗ ಪಂಚೆಯೇ ಹರಿದುಬಿದ್ದಿದೆ. ಸುಮಾರು 25 ವರ್ಷದ ಈ ಅಪರಿಚಿತ ಯುವಕನ ತಲೆಗೆ ತೀವ್ರ ಪೆಟ್ಟಾದ ಕಾರಣ ರಕ್ತಸ್ರಾವವಾಗಿ ಪ್ರಾಣ ಹೋಗಿದೆ.

ದೊಡ್ಡಬಳ್ಳಾಪುರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Murder Case | ಪತ್ನಿ ಶೀಲ ಶಂಕಿಸಿದ ಪತಿ; ಉಸಿರುಗಟ್ಟಿಸಿ ಕೊಂದು ಪರಾರಿಯಾದ ಪಾಪಿ

Exit mobile version