Site icon Vistara News

Road Accident: ಬೆಂಗಳೂರಲ್ಲಿ ಅಜಾಗರೂಕ ಚಾಲನೆಗೆ ಯುವಕ ಬಲಿ; ಚಿಂತಾಮಣಿಯಲ್ಲಿ ಕಾರು ಪಲ್ಟಿ

Road Accident Man dies of rash driving in Bengaluru Car overturns in Chintamani

ಬೆಂಗಳೂರು/ಚಿಕ್ಕಬಳ್ಳಾಪುರ: ಅಜಾಗರೂಕತೆಯಿಂದ ಬೈಕ್‌ ಚಾಲನೆ ಮಾಡಿದ ಯುವಕನೊಬ್ಬ ರಸ್ತೆ ಡಿವೈಡರ್‌ಗೆ ಡಿಕ್ಕಿ (Road Accident) ಹೊಡೆದು ಮೃತಪಟ್ಟಿದ್ದಾನೆ. ಧನುಶ್ 17 ಮೃತ ದುರ್ದೈವಿ.

ಮೆಜೆಸ್ಟಿಕ್ ಕಡೆಯಿಂದ ಗೂಡ್‌ಶೆಡ್‌ ಕಡೆ ತೆರಳುವಾಗ ಅಪಘಾತ ನಡೆದಿದೆ. ಈ ವೇಳೆ ಧನುಶ್‌ ತಲೆಗೆ ಗಂಭೀರ ಗಾಯಗಳಾಗಿವೆ. ಆತನ ಸ್ನೇಹಿತರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಯುವಕ ಮೃತಪಟ್ಟಿದ್ದಾನೆ.

ಊಟ ತರಲು ಸ್ನೇಹಿತರೊಂದಿಗೆ ಧನುಶ್‌ ತೆರಳಿದ್ದ ಎನ್ನಲಾಗಿದೆ. ಚಿಕ್ಕಪೇಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಭೀಕರ ಕಾರು ಅಪಘಾತ

ಶಿಡ್ಲಘಟ್ಟ- ಚಿಂತಾಮಣಿ ಮಾರ್ಗಮಧ್ಯೆ ಬರುವ ಅಮಿಟಿಗಾನಹಳ್ಳಿ ಬಳಿ ಸ್ವಿಫ್ಟ್‌ ಕಾರೊಂದು ಭೀಕರ ಅಪಘಾತಕ್ಕೊಳಪಟ್ಟಿದ್ದು, ಕಾರಿನಲ್ಲಿದ್ದ ಮಗುವಿಗೆ ಸಣ್ಣಪುಟ್ಡ ಗಾಯಗಳಾಗಿವೆ. ಕುಟುಂಬದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತಕ್ಕೀಡಾಗಿರುವ ಕಾರು

ಇದನ್ನೂ ಓದಿ: Modi in Karnataka: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು: ಪ್ರಧಾನಿ ನರೇಂದ್ರ ಮೋದಿ ಉಲ್ಲೇಖ

ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ವಿಫ್ಟ್‌ ಕಾರು ನಜ್ಜುಗುಜ್ಜಾಗಿದೆ. ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಚಿಂತಾಮಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

Exit mobile version