Site icon Vistara News

ಅನೈತಿಕ ಸಂಬಂಧದ ಸಂಶಯ: ಹೆಂಡತಿಯನ್ನು ಕೊಡಲಿಯಿಂದ ಕಡಿದು ಕೊಂದು ಮಕ್ಕಳ ಜತೆ ಠಾಣೆಗೆ ಹೋದ

murder

ರಾಯಚೂರು: ಹೆಂಡತಿಯ ಮೇಲೆ ಸದಾ ಸಂಶಯ ಪಡುತ್ತಿದ್ದ ಗಂಡನೊಬ್ಬ ಕೊನೆಗೆ ಆಕೆಯನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿದ್ದಾನೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಟ್ಟಪ್ಪ ಎಂಬಾತ ತನ್ನ ಪತ್ನಿಯ ರೇಣುಕಾ (೨೬)ಳನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿದ್ದಾನೆ.

ಆರಂಭದಿಂದಲೂ ಸಂಶಯ
ಬೆಟ್ಟಪ್ಪ ಮತ್ತು ರೇಣುಕಾಳ ಮಡುವೆ ಏಳು ವರ್ಷದ ಹಿಂದೆ ನಡೆದಿತ್ತು. ಆದರೆ ಬೆಟ್ಟಪ್ಪ ಆರಂಭದಿಂದಲೂ ಸಂಶಯ ಪಿಶಾಚಿ. ರೇಣುಕಾಳಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪ ಮಾಡುತ್ತಿದ್ದ. ಮನೆಯಲ್ಲಿ ಗಂಡ-ಹೆಂಡತಿ ಮಧ್ಯೆ ನಿತ್ಯ ಇದೇ ವಿಷಯಕ್ಕೆ ಜಗಳ ಆಗುತ್ತಿತ್ತು. ರೇಣುಕಾಗೆ ಅನೈತಿಕ ಸಂಬಂಧವಿದೆ ಎಂದು ಬೆಟ್ಟಪ್ಪ ರೇಣುಕಾಳ ತಾಯಿಗೂ ದೂರು ನೀಡಿದ್ದ.

ಮಂಗಳವಾರ ತಡರಾತ್ರಿಯೂ ಇದೇ ವಿಚಾರದಲ್ಲಿ ಇಬ್ಬರ ನಡುವೆ ಜಗಳ ಆಗಿದೆ. ಜಗಳದಿಂದ ಸಿಟ್ಟಿಗೆದ್ದ ರೇಣುಕಾ ತಾನು ಮನೆ ಬಿಟ್ಟು ತವರಿಗೆ ಹೋಗುವುದಾಗಿ ಹೇಳಿದ್ದಳು. ಇದರಿಂದ ಸಿಟ್ಟಿಗೆದ್ದ ಬೆಟ್ಟಪ್ಪ ಮನೆಯಲ್ಲಿದ್ದ ಕೊಡಲಿಯಿಂದ ರೇಣುಕಾಳ ಮೇಲೆ ಹಲ್ಲೆ ಮಾಡಿದ್ದಾನೆ.

ನಾಲ್ಕು ಬಾರಿ ಕೊಡಲಿಯಿಂದ ಕಡಿದ ಬೆಟ್ಟಪ್ಪ ಬಳಿಕ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಠಾಣೆಗೆ ಹೋಗಿ ಶರಣಾಗತನಾಗಿದ್ದಾನೆ. ಲಿಂಗಸುಗೂರು ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದು, ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ| ಗಂಡ-ಹೆಂಡತಿ ಜಗಳ ಬಿಡಿಸಲು ಬಂದವನೇ ಕೊಲೆಯಾಗಿ ಹೋದ

Exit mobile version