Site icon Vistara News

Murder | ಇಬ್ಬರ ಜಗಳ ಬಿಡಿಸಲು ಹೋಗಿ ಜೀವ ಕಳೆದುಕೊಂಡ ಮೂರನೇ ವ್ಯಕ್ತಿ!

murder

ಧಾರವಾಡ: ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ನಾಣ್ಣುಡಿಯೊಂದಿದೆ. ಆದರೆ, ಇದು ಅದಕ್ಕೆ ವ್ಯತಿರಿಕ್ತವಾದ ಘಟನೆ. ಇಲ್ಲಿ ಇಬ್ಬರ ಜಗಳ ಮೂರನೆಯವನ ಪ್ರಾಣಕ್ಕೇ ಕುತ್ತು ತಂದಿದೆ. ಇಲ್ಲಿ ಇಬ್ಬರ ಜಗಳ ಬಿಡಿಸಲು ಹೋದ ವ್ಯಕ್ತಿ ತಾನೇ ಪ್ರಾಣ ಕಳೆದುಕೊಂಡಿದ್ದಾನೆ.

ಘಟನೆ ನಡೆದಿರುವುದು ಧಾರವಾಡ ಬಸ್ ನಿಲ್ದಾಣದ ಎದುರಿನಲ್ಲಿರುವ ಶ್ರೀ ಸಾಯಿ ಹೋಟೆಲ್‌ನಲ್ಲಿ. ಹೋಟೆಲ್‌ಗೆ ಬಂದಿದ್ದ ಎರಡು ಗುಂಪುಗಳ ಮಧ್ಯೆ ಜಗಳ ನಡೆಯುತ್ತಿತ್ತು. ಅವರಿಗೆ ಬುದ್ಧಿವಾದ ಹೇಳಿ ಜಗಳ ಬಿಡಿಸೋಣ ಎಂದು ರಾಮಲಿಂಗಪ್ಪ ಎಂಬವರು ಮಧ್ಯ ಪ್ರವೇಶ ಮಾಡಿದ್ದರು. ಇದರಿಂದ ಜಗಳವಾಡುತ್ತಿದ್ದ ಒಂದು ಗುಂಪು ಆಕ್ರೋಶಗೊಂಡಿತು. ಮಾತ್ರವಲ್ಲ ಜಗಳ ಬಿಡಿಸಲು ಬಂದ ರಾಮಲಿಂಗಪ್ಪ ಅವರ ಮೇಲೆನೇ ಹಲ್ಲೆಗೆ ಮುಂದಾಯಿತು. ಹಲ್ಲೆಯ ತೀವ್ರತೆ ಎಷ್ಟಿತ್ತೆಂದರೆ ಹಲ್ಲೆ ಮಾಡಿದ ಕೆಲವೇ ಕ್ಷಣಗಳಲ್ಲಿ ರಾಮಲಿಂಗಪ್ಪ ಕುಸಿದು ಬಿದ್ದರು. ಮತ್ತು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದರು.

ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಧಾರವಾಡ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Murder | ಕುಡುಗೋಲಿನಿಂದ ಹಲ್ಲೆ; ಬರ್ಬರವಾಗಿ ಪತ್ನಿಯ ಕೊಲೆಗೈದು ಪೊಲೀಸರಿಗೆ ಶರಣಾದ ವೃದ್ಧ

Exit mobile version