Site icon Vistara News

Mandya News | ಗಣಪತಿ ಮೆರವಣಿಗೆ ವೇಳೆ ಮನೆ ಮುಂದೆ ಡ್ಯಾನ್ಸ್‌ ಮಾಡಲು ನಿರಾಕರಿಸಿದ ಯುವಕರ ಮೇಲೆ ಹಲ್ಲೆ: ನಾಲ್ವರ ಬಂಧನ

Mandya News

ಮಂಡ್ಯ: ಕೆ ಆರ್ ಪೇಟೆ ತಾಲೂಕಿನ ಪಿ.ಬಿ.ಮಂಚನಹಳ್ಳಿ (Mandya News) ಗ್ರಾಮದಲ್ಲಿ ಗಣಪತಿ ಮೆರವಣಿಗೆ ವೇಳೆ ಮನೆಯ ಮುಂದೆ ಡ್ಯಾನ್ಸ್ ಮಾಡಲು ನಿರಾಕರಿಸಿದಕ್ಕೆ ನಾಲ್ವರು ಯುವಕರ ಮೇಲೆ ಹಲ್ಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಗಣೇಶ ಮೆರವಣಿಗೆ ವೇಳೆ ಮನೆಯ ಮುಂದೆ ಡ್ಯಾನ್ಸ್ ಮಾಡಲು ನಿರಾಕರಿಸಿದಕ್ಕೆ ನಾಲ್ವರು ಯುವಕರನ್ನು ಕೈ ಕಾಲುಗಳಿಗೆ ಹಗ್ಗ ಕಟ್ಟಿ ಆರೋಪಿಗಳು ಹಲ್ಲೆ ನಡೆಸಿದ್ದರು. ಕಳೆದ ಶನಿವಾರ ನಡೆದಿದ್ದ ಅದೇ ಗ್ರಾಮದ ಧರ್ಮ ರಾಜ್, ದೊರೆಸ್ವಾಮಿ, ಎಚ್.ಡಿ.ದರ್ಶನ್ , ಎಂ.ಎನ್.ಕುಮಾರ್ ಎಂಬುವರ ಮೇಲೆ ಹಲ್ಲೆ ನಡೆದಿತ್ತು. ರೈತ ಮುಖಂಡ ನಾಗೇಗೌಡ ಹಾಗೂ ಕಾಂತರಾಜು, ಪ್ರಭಾಕರ್, ಸುಭಾಷ್, ಶಿವ, ನಂದೀಶ್, ಬಾಲರಾಜ್, ಮಂಜೇಗೌಡ, ಸತೀಶ್ ಎಂಬುವರಿಂದ ಹಲ್ಲೆ ಆಗಿತ್ತು. ಕೈಕಾಲು ಕಟ್ಟಿ ಹಲ್ಲೆ ನಡೆಸುತ್ತಿರುವ ವಿಡಿಯೊ ವೈರಲ್‌ ಆಗಿತ್ತು. ಕೆ ಆರ್ ಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ | ಹೋಟೆಲ್ ಕಾರ್ಮಿಕನ ಮೇಲೆ ಸಬ್ ಇನ್ಸ್‌ಪೆಕ್ಟರ್ ಮನಬಂದಂತೆ ಹಲ್ಲೆ

Exit mobile version