Site icon Vistara News

Road Accident: ಸ್ಕೂಟಿಗೆ ಬಸ್ಸು ಡಿಕ್ಕಿ, ಯುವಕ ಸಾವು

sirsi accident

ಶಿರಸಿ:‌ ಸ್ಕೂಟಿಯೊಂದಕ್ಕೆ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವಿಗೀಡಾಗಿದ್ದಾರೆ. ರಸ್ತೆ ಅಪಘಾತ (Road Accident) ಶಿರಸಿಯ ಯಲ್ಲಾಪುರ ರಸ್ತೆಯ ಅಂಬೇಡ್ಕರ ಭವನ ಬಳಿ ಘಟನೆ ನಡೆದಿದೆ.

ಭೈರುಂಬೆ ಗ್ರಾ.ಪಂ ವ್ಯಾಪ್ತಿಯ ದೇವರ ಕೆರಿ ಗ್ರಾಮದ ಗಣೇಶ್ ಕರಾಳೆ(20) ಮೃತ ಯುವಕ. ಕೆಎಸ್ಆರ್ಟಿಸಿ‌ ಬಸ್ ಚಾಲಕನ ಎಡವಟ್ಟಿನಿಂದ ನಡೆದ ಘಟನೆ ಇದಾಗಿದ್ದು, ಯುವಕನಿಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಯಿತು. ತೀವ್ರವಾಗಿ ಗಾಯಗೊಂಡ ಗಣೇಶ್‌, ಆಸ್ಪತ್ರೆ ಸಾಗಿಸುವಾಗ ದಾರಿಯಲ್ಲಿ ಮೃತಪಟ್ಟರು. ಶಿರಸಿ ಮಾರ್ಕೆಟ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಣ್ಣು ಕೊಡಲಿಲ್ಲ ಎಂದು ಅಡಿಕೆ ತೋಟ ಕತ್ತರಿಸಿ ಹಾಕಿದ!

ಮೈಸೂರು: ಮದುವೆಯಾಗಲು ಹೆಣ್ಣು ಕೊಡಲಿಲ್ಲ ಅಂತ ಭೂಪನೊಬ್ಬ ರೈತರೊಬ್ಬರ ಮನೆಯ ಅಡಿಕೆಯನ್ನೆಲ್ಲ ಕತ್ತರಿಸಿ ಹಾಕಿ ಹಾಳು ಮಾಡಿದ್ದಾನೆ. ಹುಣಸೂರು ತಾಲೂಕಿ‌ನ ಕಡೇ ಮನುಗನಹಳ್ಳಿಯಲ್ಲಿ ಘಟನೆ ನಡೆದಿದೆ.

ಅವರ ಮಗಳನ್ನು ತನಗೆ ಕೊಟ್ಟು ಮದುವೆ ಮಾಡಲಿಲ್ಲ ಎಂಬ ದ್ವೇಷಕ್ಕೆ ಅಡಿಕೆ ಬೆಳೆ ನಾಶ ಮಾಡಿದವನು ಹೆಸರು ಅಶೋಕ್. ರೈತ ವೆಂಕಟೇಶ್ ಅವರಿಗೆ ಸೇರಿದ ಜಮೀನು ಇದಾಗಿದೆ. ನಾಲ್ಕು ದಿನಗಳ ಹಿಂದೆ ಅವರ ಶುಂಠಿ ಬೆಳೆಯನ್ನು ಈತ ಕತ್ತರಿಸಿ ಹಾಕಿದ್ದ.

ವೆಂಕಟೇಶ್ ಅವರಿಗೆ ಸೇರಿದ ಮೂರು ಎಕರೆ ಜಮೀನಿನಲ್ಲಿ ಶುಂಠಿ, ಅಡಿಕೆ ಬೆಳೆ ಕೆಲವೇ ದಿನಗಳಲ್ಲಿ ಫಸಲು ಕೈಗೆ ಬರಬೇಕಿತ್ತು. ಇದೇ ವೇಳೆ ನಿನ್ನೆ ಮಧ್ಯರಾತ್ರಿ ಕಿಡಿಗೇಡಿಗಳನ್ನು ಸೇರಿಸಿಕೊಂಡು ಅಡಿಕೆ ಬೆಳೆ ಕತ್ತರಿಸಿದ್ದಾನೆ. ವೆಂಕಟೇಶ್ ಪುತ್ರಿಯನ್ನು ಅದೇ ಗ್ರಾಮದ ಬೇರೊಬ್ಬರಿಗೆ ವಿವಾಹ ಮಾಡಿಸಲು ಮಾತುಕತೆ ನಡೆದಿತ್ತು. ಅಶೋಕ್ ಕ್ಯಾರೆಕ್ಟರ್ ಸರಿ ಇಲ್ಲ ಎಂಬ ಕಾರಣಕ್ಕೆ ನಿರಾಕರಣೆ ಮಾಡಲಾಗಿತ್ತು. ಇದರಿಂದಾಗಿ ದ್ವೇಷ ಬೆಳೆಸಿಕೊಂಡ ಅಶೋಕ್ ಬೆಳೆ ನಾಶ ಮಾಡಿದ್ದಾನೆ ಎಂದು ಹುಡುಗಿಯ ತಂದೆ ವೆಂಕಟೇಶ್ ಆರೋಪಿಸಿದ್ದಾರೆ.

ಇದನ್ನೂ ಓದಿ: Road Accident: ವಿದ್ಯಾರ್ಥಿಗಳ ಮೇಲೆ ಹರಿದ ಮಹೀಂದ್ರಾ ಪಿಕಪ್ ವಾಹನ; ಇಬ್ಬರ ಸಾವು, 7 ಮಂದಿಗೆ ಗಾಯ

Exit mobile version