ಮಂಡ್ಯ: ದೇಗುಲದ ಹುಂಡಿ ಹಣ ಕದಿಯಲು ಬಂದು ಊರ ಜನರ ಕೈಗೆ ಆರೋಪಿ ಸಿಕ್ಕಿಬಿದ್ದ ಘಟನೆ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕೋಟಿ ಬೆಟ್ಟ ಗ್ರಾಮದಲ್ಲಿ (Theft in temple) ನಡೆದಿದೆ.
ಇಲ್ಲಿನ ಪ್ರಸಿದ್ದ ಕಂಬದ ನರಸಿಂಹ ಸ್ವಾಮಿ ದೇಗುಲದಲ್ಲಿ ತಡರಾತ್ರಿ ಹುಂಡಿ ಹಣ ಕದಿಯಲು ಆರೋಪಿ ಬಂದಿದ್ದ.
ಹುಂಡಿ ಹಣ ಕದಿಯಲು ಕಿಟಕಿ ಸರಳು ಮುರಿದು ದೇಗುಲ ಪ್ರವೇಶಿಸಿದ್ದ. ಈ ವೇಳೆಗೆ ದೇಗುಲದ ಟ್ರಸ್ಟ್ ನ ಸದಸ್ಯರಿಗೆ ದೇಗುಲದ ಸಿಸಿಟಿವಿ ಪರಿಶೀಲನೆ ವೇಳೆ ಕಳ್ಳ ಬಂದಿರುವುದು ಗೊತ್ತಾಗಿದೆ.
ದೇಗುಲದ ಸಿಸಿಟಿವಿ ಟ್ರಸ್ಟ್ ನ ಸದಸ್ಯರಿಗೆ ವೈಫೈ ಸಂಫರ್ಕದ ಮೂಲಕ ಮೊಬೈಲ್ ಗೆ ಲಿಂಕ್ ಆಗಿರುವುದರಿಂದ ಸಂದೇಶ ಸಿಕ್ಕಿತು. ದೇಗುಲಕ್ಕೆ ಬಂದು ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿಗೆ ಗ್ರಾಮಸ್ಥರ ಧರ್ಮಧೇಟು ಲಭಿಸಿತು. ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Theft in temple : ದೇವಾಲಯದ ಹುಂಡಿ ಹಣ ಕಳ್ಳತನಕ್ಕೆ ಯತ್ನ, ಸಿಕ್ಕಿ ಬಿದ್ದ ಆರೋಪಿ
![Theft in temple : ದೇವಾಲಯದ ಹುಂಡಿ ಹಣ ಕಳ್ಳತನಕ್ಕೆ ಯತ್ನ, ಸಿಕ್ಕಿ ಬಿದ್ದ ಆರೋಪಿ Theft in temple Theft in temple](https://vistaranews.com/wp-content/uploads/2023/02/hundi1.jpeg)