Site icon Vistara News

Woman murder | ಮದುವೆ ನಿಶ್ಚಯಗೊಂಡ ಯುವತಿಯ ಕೊಲೆ: ಸ್ಕೂಟರ್‌ ತಡೆದು ಕತ್ತು ಕೊಯ್ದು ಕೊಂದ ಕಿರಾತಕ

davanagere murder

ದಾವಣಗೆರೆ: ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಯುವತಿಯೊಬ್ಬರನ್ನು ಹಾಡಹಗಲೇ ನಡು ರಸ್ತೆಯಲ್ಲಿ ಕೊಲೆ ಮಾಡಿದ (Woman murder) ಘಟನೆ ದಾವಣಗೆರೆಯಲ್ಲಿ ಗುರುವಾರ ನಡೆದಿದೆ.

ದಾವಣಗೆರೆ ನಗರದ ವಿನೋಭನಗರ ನಿವಾಸಿ ಚಾಂದ್ ಸುಲ್ತಾನ್(೨೪) ಕೊಲೆಯಾದ ಯುವತಿ. ಇವರು ತಮ್ಮ ಮನೆಯಿಂದ ಸ್ಕೂಟರ್‌ನಲ್ಲಿ ಹೊರಟು ನಗರದ ಪಿಜೆ ಬಡಾವಣೆಯ ಚರ್ಚ್‌ ಎದುರು ಸಾಗುತ್ತಿದ್ದಾಗ ವ್ಯಕ್ತಿಯೊಬ್ಬ ಅಡ್ಡಗಟ್ಟಿ ಕೊಲೆ ಮಾಡಿದ್ದಾನೆ. ಸ್ಕೂಟರನ್ನು ತಡೆದಾಗ ಆಕೆ ಉರುಳಿಬಿದ್ದಿದ್ದು, ಅಲ್ಲೇ ಹೋದ ಯುವಕ ಚೂರಿಯಿಂದ ಆಕೆಯನ್ನು ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

ವಿವಾಹ ನಿಶ್ಚಯವಾಗಿತ್ತು
ಚಾಂದ್‌ ಸುಲ್ತಾನ್‌ ಅವರಿಗೆ ಎಂಟು ತಿಂಗಳ ಹಿಂದೆ ಹರಿಹರ ಮೂಲದ ಯುವಕನ ಜತೆ ವಿವಾಹ ನಿಶ್ಚಿತಾರ್ಥವಾಗಿತ್ತು. ಇದನ್ನು ವಿರೋಧಿಸಿ ಬೇರೊಬ್ಬ ವ್ಯಕ್ತಿ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಆದರೆ, ಕೊಲೆ ಮಾಡಿದ ವ್ಯಕ್ತಿ ಯಾರು ಎನ್ನುವುದು ಸದ್ಯಕ್ಕೆ ಗೊತ್ತಾಗಿಲ್ಲ. ಆತ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರು ಪ್ರಾಣ ಉಳಿಸಲಾಗಲಿಲ್ಲ. ಈ ನಡುವೆ ಪರಿಸರದ ಸಿಸಿ ಟಿವಿಗಳನ್ನು ಪರಿಶೀಲಿಸಿ ಹಂತಕನನ್ನು ಪತ್ತೆ ಹಚ್ಚುವ ಕೆಲಸದಲ್ಲಿ ಪೊಲೀಸರು ನಿರತರಾಗಿದ್ದಾರೆ. ದಾವಣಗೆರೆ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Murder Case | 10 ವರ್ಷದ ವಿಕಲಚೇತನ ಮಗಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

Exit mobile version