Site icon Vistara News

Mass murder : ಭಟ್ಕಳದಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ; ಕತ್ತಿಯಿಂದ ಕಡಿದು ಕೊಂದ ದುಷ್ಕರ್ಮಿ, ಏನು ಕಾರಣ?

Woman who went missing two days ago found dead Murder Case updates

ಕಾರವಾರ: ಭಟ್ಕಳದ ಹಾಡುವಳ್ಳಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ದುಷ್ಕರ್ಮಿಯೊಬ್ಬರ ಅವರನ್ನು ಕತ್ತಿಯಿಂದ ಕಡಿದು ಕೊಂದಿದ್ದಾನೆ.

ಶಂಭು ಭಟ್ (65), ಪತ್ನಿ ಮಾದೇವಿ ಭಟ್(40), ಮಗ ರಾಜೀವ್ ಭಟ್ (34), ಸೊಸೆ ಕುಸುಮಾ ಭಟ್(30) ಕೊಲೆಯಾದ ದುರ್ದೈವಿಗಳು. ಮಧ್ಯಾಹ್ನದ ವೇಳೆಗೆ ಮನೆಯ ಆಸುಪಾಸಿನಲ್ಲೇ ಕುಟುಂಬದ ನಾಲ್ವರೂ ಶವವಾಗಿ ಪತ್ತೆಯಾಗಿದ್ದು ನಾಲ್ವರ ಕುತ್ತಿಗೆ ಹಾಗೂ ಮುಖದ ಬಳಿ ಕತ್ತಿಯಿಂದ ಕಡಿದಿರುವ ಗುರುತುಗಳಿವೆ.

ಆಸ್ತಿ ವಿಚಾರವಾಗಿ ಸಂಬಂಧಿಯಿಂದಲೇ ನಾಲ್ವರ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು ಕೊಲೆಯ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಶ್ವಾನದಳದೊಂದಿಗೆ ಹತ್ಯೆ ನಡೆದ ಪ್ರದೇಶದಲ್ಲಿ ಪರಿಶೀಲನೆ ನಡೆಸುತ್ತಿದ್ದು ಹತ್ಯೆ ನಡೆಸಿವರ ಕುರಿತು ಇನ್ನೂ ಮಾಹಿತಿ ಲಭ್ಯವಾಗಬೇಕಿದೆ. ಈ ಸಂಬಂಧ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಹೆಚ್ಚಿನ ವಿವರಕ್ಕಾಗಿ ನಿರೀಕ್ಷಿಸಿ..

Exit mobile version