Site icon Vistara News

Murder Case: ಹೆತ್ತ ಮಗುವನ್ನೇ ಬ್ಲೇಡ್‌ನಿಂದ ಕೊಯ್ದು ಕೊಲೆ ಮಾಡಿದ ಪಾಪಿ ತಾಯಿ!

Murdered child

#image_title

ತುಮಕೂರು: ತಾಯಿಯೊಬ್ಬಳು ಹೆತ್ತ ಮಗುವನ್ನೇ ಬ್ಲೇಡ್‌ನಿಂದ ಕೊಯ್ದು ಕೊಲೆ (Murder Case) ಮಾಡಿದ ಅಮಾನುಷ ಘಟನೆ ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ನಡೆದಿದೆ. ಒಂದು ವರ್ಷದ ಹೆಣ್ಣು ಮಗುವನ್ನು ಪಾಪಿ ತಾಯಿ ಕೊಲೆ ಮಾಡಿದ್ದಾಳೆ.

ಪಟ್ಟಣದ ಡೂಂ ಲೈಟ್ ವೃತ್ತದ ಸಮೀಪ ಇರುವ ತಿಪ್ಪಾಪುರ ಛತ್ರದ ಹಿಂಭಾಗದ ಮನೆಯ ಶಿವಾನಂದ ಎಂಬುವವರ ಪತ್ನಿ ಶ್ವೇತಾ (28) ಕೊಲೆ ಆರೋಪಿ. ಕ್ರಿತೀಶ್ ಕೊಲೆಯಾದ ಮಗು. ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಶ್ವೇತಾ ಏಕಾಏಕಿ ಮಗುವಿನ ಕೈಯನ್ನು ಬ್ಲೇಡ್‌ನಿಂದ ಕೊಯ್ದಿದ್ದಾಳೆ. ಹೀಗಾಗಿ ತೀವ್ರ ರಕ್ತಸ್ರಾವವಾಗಿ ಮಗು ಸ್ಥಳದಲ್ಲೇ ಸಾವಿಗೀಡಾಗಿದೆ. ನಂತರ ಆಕೆ ಕೂಡ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಇದನ್ನೂ ಓದಿ | Medical Negligence: ವೈದ್ಯರ ನಿರ್ಲಕ್ಷ್ಯಕ್ಕೆ ಮೂರು ತಿಂಗಳ ಮಗು ಸಾವು? ಲಸಿಕೆ ಹಾಕಿ ಗಂಟೆಯೊಳಗೇ ಮರಣ!

ತಕ್ಷಣ ಇಬ್ಬರನ್ನೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ. ಅಷ್ಟೊತ್ತಿಗಾಗಲೇ ಮಗು ಮೃತಪಟ್ಟಿರುವುದು ತಿಳಿದುಬಂದಿದೆ. ತಾಯಿ ಶ್ವೇತಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಶ್ವೇತಾ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು ಅನ್ನೋ ಮಾಹಿತಿ ಇದೆ. ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ಕೆ.ಎಸ್.ವೆಂಕಟೇಶ್ ನಾಯ್ಡು, ಸರ್ಕಲ್ ಇನ್ಸ್‌ಪೆಕ್ಟರ್‌ ಹನುಮಂತರಾಯಪ್ಪ ಸ್ಥಳಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳ ಮಗು ಸಾವು

ಮೃತ ಮಗು ಪ್ರಿಯದರ್ಶಿನಿ

ಬಳ್ಳಾರಿ: ತಲೆನೋವು ಶಮನಕ್ಕೆ ಬಳಸುವ ಮೆಂಥೋಪ್ಲಸ್ ಚಿಕ್ಕ ಡಬ್ಬಿ ನುಂಗಿ ಮಗು ಮೃತಪಟ್ಟಿರುವ ಘಟನೆ ಜಿಲ್ಲೆಯ (Bellary News) ಕಂಪ್ಲಿ ಪಟ್ಟಣದ 5ನೇ ವಾರ್ಡ್‌ನ ಇಂದಿರಾನಗರದಲ್ಲಿ ನಡೆದಿದೆ. ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿ ಏಕೈಕ ಪುತ್ರಿ ಪ್ರಿಯದರ್ಶಿನಿ (9ತಿಂಗಳು) ಮೃತ ಮಗು.

ಆಟವಾಡುತ್ತಿದ್ದಾಗ ಮೆಂಥೋಪ್ಲಸ್ ಡಬ್ಬಿಯನ್ನು ಮಗು ನುಂಗಿದೆ. ನಂತರ ಉಸಿರಾಟಕ್ಕೆ ತೊಂದರೆ ಹೆಚ್ಚಿದಾಗ ಖಾಸಗಿ ವೈದ್ಯರ ಬಳಿ ಮಗುವನ್ನು ಪೋಷಕರು ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿದಾಗ ಮಗು ಮಾರ್ಗಮಧ್ಯೆಯೇ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ. ಈ ದಂಪತಿಗೆ ವಿವಾಹವಾಗಿ 10 ವರ್ಷಗಳ ನಂತರ ಈ ಮಗು ಜನಿಸಿತ್ತು. ಇದ್ದ ಒಂದು ಮಗುವನ್ನೂ ಕಳೆದುಕೊಂಡಿದ್ದರಿಂದ ಪೋಷಕರ ಅಕ್ರಂದನ ಮುಗಿಲು ಮುಗಿಲುಮುಟ್ಟಿದೆ.

ಇದನ್ನೂ ಓದಿ | Apsara Murder: ಪತ್ನಿ ಇದ್ದರೂ ಅರ್ಚಕನಿಗೆ ಬೇಕು ಲವ್ವರ್;‌ ಆಕೆ ಮದುವೆಯಾಗು ಎಂದಿದ್ದಕ್ಕೆ ಆದ ಕಿಲ್ಲರ್

ಆಸ್ಪತ್ರೆಗೆ ಬರುವ ಮಾರ್ಗಮಧ್ಯೆಯೇ ಮಗು ಮೃತಪಟ್ಟಿತ್ತು. ಆದರೂ ಪಾಲಕರು ಕೋರಿದಾಗ, ಗಂಟಲಲ್ಲಿದ್ದ ಡಬ್ಬಿ ಹೊರ ತೆಗೆಯಲಾಯಿತು ಎಂದು ಮಕ್ಕಳ ವೈದ್ಯರು ತಿಳಿಸಿದರು.

Exit mobile version