Site icon Vistara News

Murder Case : ಹೆಂಡ್ತಿ ಕತ್ತು ಹಿಸುಕಿ ಕೊಲೆ ಮಾಡಿದ ಕುಡುಕ ಗಂಡ

Deepa and prakash

ಹುಬ್ಬಳ್ಳಿ: ಹುಬ್ಬಳ್ಳಿಯ (Hubballi News) ರಾಯನಾಳದಲ್ಲಿ ಪತ್ನಿಯ ಕತ್ತು ಹಿಸುಕಿ ಪತಿಯೊಬ್ಬ ಹತ್ಯೆ (Murder case) ಮಾಡಿದ್ದಾನೆ. ದೀಪಾ ಹತ್ಯೆಯಾದವರು. ಪ್ರಕಾಶ್‌ ಎಂಬುವವನು ಆರೋಪಿ ಆಗಿದ್ದಾನೆ.

ಪ್ರಕಾಶ್‌ ಕುಡಿತದ ಚಟವನ್ನು ಹೊಂದಿದ್ದ. ನಿತ್ಯವು ಕುಡಿದು ಬಂದು ಆಗಾಗ ಪತ್ನಿ‌ ದೀಪಾ ಜತೆ ಕ್ಯಾತೆ ತೆಗೆದು ಜಗಳ ಮಾಡುತ್ತಿದ್ದ. ಇದೆ ರೀತಿ ಗುರುವಾರವು ಇಬ್ಬರ ನಡುವೆ ಜಗಳ ಶುರುವಾಗಿದ್ದು, ವಿಕೋಪಕ್ಕೆ ತಿರುಗಿದೆ. ಬಳಿಕ ಸಿಟ್ಟಿಗೆದ್ದ ಪ್ರಕಾಶ್‌, ಪತ್ನಿಯ ಕತ್ತು ಹಿಸುಕಿದ್ದಾನೆ ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಹಳೇಹುಬ್ಬಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕಾಶ್‌ ಕುಡಿದು ಬಂದು ದೀಪಾಳನ್ನು ಹತ್ಯೆ ಮಾಡಿದ್ದಾನೆ ಎಂದು ಮೃತ ಪೋಷಕರು ಆರೋಪಿಸಿದ್ದಾರೆ. ಸದ್ಯ ಕೊಲೆ ಮಾಡಿ ಪರಾರಿ ಆಗಿರುವ ಆರೋಪಿ ಪ್ರಕಾಶ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Road accident : ಏನಿದು ದುರಂತ ಸರಣಿ?; ನಿನ್ನೆ ತಾಯಿ-ಮಗ ಮೃತ್ಯು; ಇಂದು ತಂದೆ-ಮಗಳು ಅಪಘಾತಕ್ಕೆ ಬಲಿ

ಲಿವಿಂಗ್‌ ಟುಗೆದರ್‌ನಲ್ಲಿದ್ದ ಪ್ರಿಯಕರನ ಎದೆಗೆ ಚಾಕುವಿನಿಂದ ಇರಿದಳು

ಬೆಂಗಳೂರು: ಅವನು ಕೇರಳದವನು, ಇವಳು ಬೆಳಗಾವಿ! ಅವರಿಬ್ಬರು ಹೇಗೆ ಭೇಟಿಯಾದರು? ಸಂಬಂಧ ಹುಟ್ಟಿದ್ದು ಎಲ್ಲಿ ಎಂದು ಗೊತ್ತಿಲ್ಲ. ಆದರೆ, ಅವರಿಬ್ಬರೂ ಬೆಂಗಳೂರಿನ ಹುಳಿಮಾವು (Hulimavu in Banagalore) ಸಮೀಪ ಮನೆಯೊಂದರಲ್ಲಿ ಜತೆಯಾಗಿ ವಾಸಿಸುತ್ತಿದ್ದರು. ಅವರದ್ದು ಲಿವಿಂಗ್‌ ಟುಗೆದರ್‌ (Living Together) ಬದುಕು. ಈಗ ಆ ಮಹಿಳೆ ಈ ಪ್ರಿಯಕರನ ಎದೆಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾಳೆ (Woman kills lover by stabbing).

ಕೇರಳದ ಕಣ್ಣೂರಿನ ಜಾವೇದ್‌ಗೆ 29 ವರ್ಷ. ಅವನು ಮೊಬೈಲ್‌ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ರೇಣುಕಾಳಿಗೆ ಯಾವುದೇ ಕೆಲಸ ಇರಲಿಲ್ಲ. ಇಬ್ಬರಿಗೂ ಸುಮಾರು ಮೂರುವರೆ ವರ್ಷದ ಪರಿಚಯ. ರೇಣುಕಾ ಎಂದರೆ ಸಣ್ಣ ಹುಡುಗಿಯೇನಲ್ಲ. ವಯಸ್ಸು 34. ಮಾತ್ರವಲ್ಲ, ಆಕೆಗೆ 8 ವರ್ಷದ ಒಬ್ಬ ಮಗಳೂ ಇದ್ದಾಳೆ. ಯಾರನ್ನೋ ಮದುವೆಯಾಗಿದ್ದವಳು ಅವನನ್ನು ಬಿಟ್ಟು ಬಂದು ಜಾವೇದ್‌ನನ್ನು ಬುಟ್ಟಿಗೆ ಹಾಕಿಕೊಂಡಿದ್ದಾಳೆ.

ಕೊಲೆ ಆರೋಪಿ ರೇಣುಕಾ

ರೇಣುಕಾ ಮತ್ತು ಜಾವೇದ್‌ ಬೇರೆ ಬೇರೆ ಕಡೆ ಮನೆ ಮಾಡಿಕೊಂಡು ಜೀವನ ಸಾಗಿಸಿದ್ದರು. ಕಳೆದ ಸೆಪ್ಟೆಂಬರ್‌ 2ರಂದು ಹುಳಿಮಾವಿನ ಸಮೀಪದ ಅಕ್ಷಯ್‌ ನಗರದ ಸರ್ವಿಸ್‌ ಅಪಾರ್ಟ್‌ಮೆಂಟ್‌ನಲ್ಲಿ ಮೂರು ದಿನಗಳ ಮಟ್ಟಿಗೆ ಒಂದು ಫ್ಲ್ಯಾಟ್‌ ಬುಕ್‌ ಮಾಡಲಾಗಿತ್ತು. ರಿಯಾಜ್‌ ಎಂಬವನ ಹೆಸರಿನಲ್ಲಿ ಬುಕ್‌ ಆದ ಈ ಫ್ಲ್ಯಾಟ್‌ನಲ್ಲಿ ಜಾವೇದ್‌ ಮತ್ತು ರೇಣುಕಾ ಬಂದು ಇದ್ದರು.

ಸೆ. 5ರಂದು ಮಂಗಳವಾರ ಮಧ್ಯಾಹ್ನ 3.15ರ ಸುಮಾರಿಗೆ ಜಾವೇದ್‌ ಮತ್ತು ರೇಣುಕಾ ನಡುವೆ ಜಗಳ ಶುರುವಾಗಿದೆ. ಆಗ ಅಪಾರ್ಟ್‌ಮೆಂಟ್‌ ಮ್ಯಾನೇಜರ್‌ ಹೋಗಿ ನೋಡಿದಾಗ ರೇಣುಕಾ ಜಾವೇದ್‌ನನ್ನು ತನ್ನ ಕಾಲಿನ ಮೇಲೆ ಮಲಗಿಸಿಕೊಂಡಿದ್ದು ಕಂಡಿತು. ಎದೆಯಲ್ಲಿ ಏನೋ ರಕ್ತ ಕಂಡಾಗ ಸುನಿಲ್‌ ಮತ್ತೊಮ್ಮೆ ವಿಚಾರಿಸಿದ್ದಾನೆ. ಆಗ ರೇಣುಕಾ ಏನೂ ಇಲ್ಲ, ನಮ್ಮ ವೈಯಕ್ತಿಕ ಸಮಸ್ಯೆ ಎಂದಿದ್ದಾಳೆ.

ಸುನಿಲ್‌ ಕೂಡಲೇ ಅಕ್ಕಪಕ್ಕದವರನ್ನು ಕರೆದು ಆಟೋ ರಿಕ್ಷಾ ಮಾಡಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ, ಅಷ್ಟರೊಳಗೆ ರಕ್ತ ಸ್ರಾವದಿಂದ ಜಾವೇದ್‌ ಪ್ರಾಣ ಕಳೆದುಕೊಂಡಿದ್ದಾನೆ. ಫ್ಲ್ಯಾಟ್‌ ಮಾಲೀಕ ಗಣೇಶ್‌ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Murder Case : ರಾಜಧಾನಿಯಲ್ಲಿ ಭಯಾನಕ ಘಟನೆ; ತಾಯಿ, 8 ವರ್ಷದ ಮಗನ ಬರ್ಬರ ಹತ್ಯೆ

ಪೊಲೀಸರು ಈಗ ರೇಣುಕಾನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಯ ಮಗಳು ಸದ್ಯ ಆಕೆಯ ಜತೆಗೆ ಇದ್ದಂತಿಲ್ಲ. ರೇಣುಕಾ ಹಲವಾರು ಕಥೆಗಳನ್ನು ಹೇಳುತ್ತಿದ್ದು, ಅವುಗಳಲ್ಲಿ ಯಾವುದು ಸರಿ? ಕೊಲೆಗೆ ನಿಜವಾದ ಕಾರಣ ಏನು ಎನ್ನುವುದನ್ನು ಪತ್ತೆ ಹಚ್ಚಬೇಕಾಗಿದೆ. ಆದರೆ, ಕಂಡ ಕಂಡವರ ಜತೆಗೆ ಲಿವಿಂಗ್‌ ಟುಗೆದರ್‌ ಸಂಬಂಧ ಇಟ್ಟುಕೊಳ್ಳುವವರರಿಗೆ ಇದೊಂದು ಪಾಠದಂತೆ ಇದೆ.

ಹಣಕಾಸು ವ್ಯವಹಾರವಿತ್ತಾ?

ಇನ್ನೊಂದು ಮೂಲದ ಪ್ರಕಾರ, ಇವರಿಬ್ಬರೂ ಮಡಿವಾಳದ ಒಂದೇ ಏರಿಯಾದಲ್ಲಿ ವಾಸವಾಗಿದ್ದರು. ಅಲ್ಲಿ ಅವರಿಬ್ಬರಿಗೂ ಸಲುಗೆ ಬೆಳೆದಿತ್ತು. ಹೀಗಾಗಿ ಬೇಕು ಅನಿಸಿದಾಗಲೆಲ್ಲ ಕೆಲವು ದಿನಗಳ ಮಟ್ಟಿಗೆ ಯಾವುದಾದರೂ ಸರ್ವಿಸ್‌ ಅಪಾರ್ಟ್‌ಮೆಂಟ್‌ನಲ್ಲಿ ಒಟ್ಟಿಗಿರುತ್ತಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ಅವರು ಮೂರು ದಿನದ ಮಟ್ಟಿಗೆ ಅಪಾರ್ಟ್‌ಮೆಂಟ್‌ ಬುಕ್‌ ಮಾಡಿದ್ದರು.

ಈ ನಡುವೆ, ಅವರ ನಡುವೆ ಸೆಕ್ಸ್‌ ಜತೆಗೆ ಹಣಕಾಸಿನ ವ್ಯವಹಾರವೂ ಬೆಳೆದಿತ್ತು. ಅದರ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಕೊಲೆಯಾಗಿದೆ ಎಂಬ ಸಂಶಯವೂ ಇದೆ. ಏನಿದ್ದರೂ ಪೊಲೀಸರೇ ಇದರ ಅಂತಿಮ ವಿವರ ನೀಡಬೇಕಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version