Site icon Vistara News

Murder Case: ಜಮೀನಿನಲ್ಲಿ ಹೆಂಡತಿಯ ಕೊಂದು, ಅಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪತಿ

Crime Image

ವಿಜಯನಗರ: ಕೌಟುಂಬಿಕ‌ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಜಮೀನಿನಲ್ಲಿಯೇ ಹೆಂಡತಿಯನ್ನು ಕೊಲೆ (Murder Case) ಮಾಡಿ ಬಳಿಕ ತಾನೂ ಸಹ ನೇಣಿಗೆ ಶರಣಾಗಿರುವ ಪ್ರಕರಣ ಹರಪನಹಳ್ಳಿ ತಾಲೂಕಿನ ರಂಗಾಪುರದಲ್ಲಿ ನಡೆದಿದೆ.

ಹನಮಂತಪ್ಪ (34) ಕೊಲೆ ಮಾಡಿ ನೇಣಿಗೆ ಶರಣಾದ ಪತಿ. ಚೌಡಮ್ಮ (28) ಕೊಲೆಯಾದ ಪತ್ನಿಯಾಗಿದ್ದಾರೆ. ಜಮೀನಿಗೆ ಕರೆದುಕೊಂಡು ಹೋಗಿ ಪತ್ನಿಯನ್ನು ಈತ ಕೊಲೆ ಮಾಡಿದ್ದಾನೆ. ಬಳಿಕ ಅದೇ ಜಮೀನಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: Modi In Karnataka: ಶ್ರದ್ಧಾ ಎದುರಾದ ಕೂಡಲೆ ಮೋದಿ ಹೇಳಿದ ಮೊದಲ ಶಬ್ದ ʼಅಯ್ಯೋʼ!: ಯಶ್‌, ರಿಷಭ್‌, ಅಶ್ವಿನಿ, ವಿಜಯ್‌ ಭೇಟಿಯಾದ ಪ್ರಧಾನಿ

ಘಟ‌ನಾ ಸ್ಥಳಕ್ಕೆ ಹರಪನಹಳ್ಳಿ ಡಿವೈಎಸ್ಪಿ ರಾಮಮೂರ್ತಿ ಹಾಗೂ ಹಲವಾಗಲು ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೊಟಕ್ಕೆ ಕೌಟುಂಬಿಕ ಕಲಹದ ಶಂಕೆ ವ್ಯಕ್ತವಾಗಿದೆ. ಆದರೆ, ಯಾಕೆ ಕೊಲೆ ಮಾಡಲಾಗಿದೆ? ಇದರ ಹಿಂದಿನ ಉದ್ದೇಶವೇನು? ಆತನೇ ಕೊಲೆ ಮಾಡಿದ್ದಾನೆಯೇ? ಎಂಬಿತ್ಯಾದಿ ಅಂಶಗಳ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.

Exit mobile version