Site icon Vistara News

Murder case : ಹೆಂಡತಿಯನ್ನು ಕತ್ತರಿಯಿಂದ ಇರಿದು ಕೊಂದ ಅನುಮಾನ ಪಿಶಾಚಿ ಗಂಡ

Wife murdered by scissor

ದೇವನಹಳ್ಳಿ: ರಾಜ್ಯದಲ್ಲಿ ಬರ್ಬರ ಕೊಲೆ ಪ್ರಕರಣಗಳು (Murder Case) ದಿನದಿನವೂ ಹೆಚ್ಚುತ್ತಿವೆ. ಸಣ್ಣ ಸಣ್ಣ ಕಾರಣಗಳಿಗಾಗಿ ಜನರು ಪರಸ್ಪರ ಕೊಲೆ ಮಾಡುವ ವಿದ್ಯಮಾನಗಳು ನಡೆಯುತ್ತಿದೆ. ಗಂಡ-ಹೆಂಡತಿ, ಗೆಳೆಯರು, ಸಹೋದ್ಯೋಗಿಗಳ ನಡುವಿನ ಸಣ್ಣಪುಟ್ಟ ಘಟನೆಗಳೇ ಕೊಲೆಯಲ್ಲಿ ಅಂತ್ಯಗೊಳ್ಳುತ್ತಿವೆ. ಇದರೊಂದಿಗೆ ಕೊಲೆ ಮಾಡುವ ವಿಧಾನಗಳೂ ಬರ್ಬರವಾಗುತ್ತಿವೆ. ಇಲ್ಲೊಬ್ಬ ಅನುಮಾನ ಪಿಶಾಚಿ ಗಂಡ (Suspicious husband) ತನ್ನ ಹೆಂಡತಿಯನ್ನು ಕತ್ತರಿಯಿಂದ ಇರಿದು ಕೊಲೆ (Man kills wife using scissor) ಮಾಡಿದ್ದಾನೆ.

ದೇವನಹಳ್ಳಿ ತಾಲೂಕಿನ ದೊಡ್ಡಸಣ್ಣೆ ಗ್ರಾಮದಲ್ಲಿ ನಡೆದ ಈ ಕ್ರೌರ್ಯದಲ್ಲಿ ರಜನಿ (28) ಎಂಬ ಮಹಿಳೆಯನ್ನು ಅವರ ಗಂಡ ಮುನಿ ಆಂಜಿನಪ್ಪ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಆತ ಕೊಲೆಗಾಗಿ ಕತ್ತರಿಯನ್ನು ಬಳಸಿದ್ದಾನೆ.

ಮುನಿ ಆಂಜಿನಪ್ಪ ಮತ್ತು ರಜನಿ ಮಧ್ಯೆ ಹಲವು ವರ್ಷಗಳ ಹಿಂದೆಯೇ ಮದುವೆ ನಡೆದಿತ್ತು. ಅವರಿಬ್ಬರ ಮಧ್ಯೆ ಆಗಾಗ ಜಗಳಗಳು ನಡೆಯುತ್ತಿದ್ದವು. ಆದರೆ, ಗುರುವಾರ ರಾತ್ರಿ ಅವರಿಬ್ಬರ ನಡುವೆ ಶುರುವಾದ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯಗೊಂಡಿದೆ.

ಆಂಜಿನಪ್ಪ ಸದಾ ಕಾಲ ತನ್ನ ಪತ್ನಿ ರಜನಿಯನ್ನು ಸಂಶಯದಿಂದಲೇ ನೋಡುತ್ತಿದ್ದ. ಈ ಸಂಶಯವೇ ಕೊಲೆಗೆ ಕಾರಣವಾಗಿದೆ. ಗುರುವಾರ ರಾತ್ರಿ ಮನೆಗೆ ಬಂದ ಆಂಜಿನಪ್ಪ ಇದೇ ವಿಷಯವನ್ನು ಎತ್ತಿಕೊಂಡು ಗಲಾಟೆ ಶುರು ಮಾಡಿದ್ದ. ಈ‌ ವೇಳೆ ಜಗಳ ವಿಕೋಪಕ್ಕೆ ತಿರುಗಿ ಆಂಜಿನಪ್ಪ ಅಲ್ಲೇ ಇದ್ದ ಕತ್ತರಿಯನ್ನು ತೆಗೆದುಕೊಂಡು ಪತ್ನಿಗೆ ಇರಿದಿದ್ದಾನೆ.

ಗಾಯಗೊಂಡ ರಜನಿಯನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರಾದರೂ ತೀವ್ರ ರಕ್ತಸ್ರಾವವಾಗಿದ್ದರಿಂದ ಆಸ್ವತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಸಾವು ಸಂಭವಿಸಿದೆ. ದಂಪತಿಗೆ ಒಬ್ಬ ಪುಟ್ಟ ಮಗಳು ಇದ್ದಾಳೆ.

ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದ್ದು, ಇದೀಗ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.

Murder case : ದೊಣ್ಣೆಯಿಂದ ಹೊಡೆದು ಹೆತ್ತವಳನ್ನೇ ಕೊಂದ ಕುಡುಕ

ಕೊಡಗು: ಇಲ್ಲಿನ ಬೇಸೂರು ಸಮೀಪದ ಕಟ್ಟೆಪುರ ಹಾಡಿಯಲ್ಲಿ ಮಗನೊಬ್ಬ ತಾಯಿಯನ್ನೆ ಹತ್ಯೆ (Murder case) ಮಾಡಿದ್ದಾನೆ. ಕಟ್ಟೆಪುರ ಹಾಡಿ ನಿವಾಸಿ ಲಲಿತಾ (45) ಮೃತ ದುರ್ದೈವಿ. ಜೇನುಕುರುಬರ ರಾಜಶೇಖರ್ ಹತ್ಯೆಕೋರ.

ಬುಧವಾರ ರಾತ್ರಿ (ಜು.12) ಕಂಠಪೂರ್ತಿ ಕುಡಿದು ಬಂದ ರಾಜಶೇಖರ್‌, ತಾಯಿಯೊಂದಿಗೆ ಗಲಾಟೆ ಶುರು ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು ಸಿಟ್ಟಿಗೆದ್ದ ರಾಜಶೇಖರ್‌ ಮನೆಯಲ್ಲಿದ್ದ ದೊಣ್ಣೆಯಿಂದ ತಾಯಿ ಲಲಿತಾ ಮೇಲೆ ಹಲ್ಲೆ ಮಾಡಿದ್ದಾನೆ. ಈತನಿಂದ ತಪ್ಪಿಸಿಕೊಳ್ಳಲು ಹೋದರೂ ಬಿಡದೆ ದೊಣ್ಣೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ.

ವಿಚಾರ ತಿಳಿದು ಸ್ಥಳಕ್ಕೆ ಶನಿವಾರಸಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಶನಿವಾರಸಂತೆ ಪೊಲೀಸರು ಆರೋಪಿ ರಾಜಶೇಖರ್‌ನನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: Chaddi Gang: ಬೆಂಗಳೂರಿಗೆ ಮತ್ತೆ ಎಂಟ್ರಿ ಕೊಟ್ಟ ಚಡ್ಡಿ ಗ್ಯಾಂಗ್!‌ ಸಿಸಿ ಟಿವಿಯಲ್ಲಿ ಸೆರೆಯಾಯ್ತು ಚಲನವಲನ

Exit mobile version