Site icon Vistara News

Murder Case | ಪ್ರತ್ಯೇಕ ಕಡೆಗಳಲ್ಲಿ ಇಬ್ಬರು ವ್ಯಕ್ತಿಗಳ ಬರ್ಬರ ಹತ್ಯೆ

ನೆಲಮಂಗಲ/ವಿಜಯಪುರ: ನೆಲಮಂಗಲದ ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ಮಾರಕಾಸ್ತ್ರಗಳಿಂದ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ತಮಿಳುನಾಡಿನ ವೇಲೂರು ಮೂಲದ ನಟರಾಜು (35) ಕೊಲೆಯಾದ ದುರ್ದೈವಿ.

ಶ್ರೀ ಮಂಜುನಾಥ್ ಎಂಟರ್ಪ್ರೈಸಸ್ ಎಂಬ ಕಟ್ಟಡದ ಮೇಲೆ ಪಾರ್ಟಿ ಮಾಡಿ, ಆ ಬಳಿಕ ನಟರಾಜು ಅವರನ್ನು ಹತ್ಯೆಗೈದು ಹಂತಕರು ಪರಾರಿ ಆಗಿದ್ದಾರೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಯಾರು, ಯಾವ ಕಾರಣಕ್ಕೆ ಹತ್ಯೆ ಮಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲ.

ಜಾಗದ ವಿಚಾರಕ್ಕೆ ಕ್ಯಾತೆ, ಕೊಲೆಯಲ್ಲಿ ಅಂತ್ಯ
ವಿಜಯಪುರದ ಬಬಲೇಶ್ವರ ತಾಲೂಕಿನ ಕಿಲಾರಹಟ್ಟಿ ಗ್ರಾಮದಲ್ಲಿ ಜಾಗದ ವಿಚಾರಕ್ಕೆ ಮೂವರು ಸೇರಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಮರಗು ಪಾಂಡ್ರೆ (55) ಹತ್ಯೆಯಾದ (Murder Case) ದುರ್ದೈವಿ.

ಮರಗು ಪಾಂಡ್ರೆ (55) ಹತ್ಯೆಯಾದವರು

ಬೀರು, ಮಾಳಪ್ಪ ಹಾಗೂ ಮತ್ತೊಬ್ಬ ಆರೋಪಿಯಿಂದ ಈ ಕೃತ್ಯ ನಡೆದಿದ್ದು, ಹತ್ಯೆಗೈದು ಎಲ್ಲರೂ ಪರಾರಿಯಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಜಾಗದ ವಿಷಯಕ್ಕೆ ಹಲವು ದಿನಗಳಿಂದ ಮರುಗು ಪಾಂಡ್ರೆ ಹಾಗೂ ಈ ಆರೋಪಿಗಳ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಇದನ್ನೂ ಓದಿ | Man in Burqa | ರಸ್ತೆಯಲ್ಲಿ ಹೆಣ್ಣು ಮಕ್ಕಳ ಕೈಹಿಡಿದು ಎಳೆಯುತ್ತಿದ್ದ ಬುರ್ಕಾಧಾರಿ ಯುವಕ; ಸ್ಥಳೀಯರಿಂದ ಧರ್ಮದೇಟು

Exit mobile version