Site icon Vistara News

Murder Case | ಸೊರಬ, ಆಗುಂಬೆಯಲ್ಲಿ ಪ್ರತ್ಯೇಕ ಕೊಲೆ; ಮಹಿಳೆ ಕೊಂದು ಬಾವಿಗೆಸೆದಿದ್ದವನ ಸೆರೆ

A thug killed a journalist who had written an article against him

ಶಿವಮೊಗ್ಗ: ಜಿಲ್ಲೆಯ ಆಗುಂಬೆ ಸಮೀಪದ ಬಿಡರಗೋಡು ಎಂಬಲ್ಲಿ ಮಹಿಳೆಯನ್ನು ಕೊಲೆ (Murder Case) ಮಾಡಿ ಬಾವಿಗೆ ಎಸೆದುಹೋಗಿರುವ ಪ್ರಕರಣ ಕಂಡುಬಂದಿದೆ.

ಗುಣಸೆ ರಸ್ತೆಯ ಡಾಕಮ್ಮ ಎಂಬುವವರ ತೋಟದಲ್ಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಮಹಿಳೆಯನ್ನು ಕೊಂದು ಬಡಿಗೆ ಕಟ್ಟಿ ಬಾವಿಯಲ್ಲಿ ಎಸೆದು ಆರೋಪಿ ಪರಾರಿಯಾಗಿದ್ದ. ವಿಷಯ ತಿಳಿದ ಗ್ರಾಮದವರು ಪೊಲೀಸರಿಗೆ ಕರೆ ಮಾಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಕೈಗೊಂಡಿದ್ದರು. ಕಾಣೆಯಾದ ಕಾರ್ಮಿಕನ ಬಗ್ಗೆ ತಿಳಿದು, ಆತನ ಜಾಡುಹಿಡಿದು ಹೊರಟಿದ್ದಾರೆ. ಬಳಿಕ ಆತ ಶಿವಮೊಗ್ಗದ ಕಡೆ ಹೋಗಿರುವುದು ಗೊತ್ತಾಗಿದೆ. ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಶಿವಮೊಗ್ಗದಲ್ಲಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.

ಸೊರಬದಲ್ಲಿ ಕೊಲೆ
ಮತ್ತೊಂದು ಪ್ರಕರಣದಲ್ಲಿ ಸೊರಬದ ತುಡಿನೀರ್ ಗ್ರಾಮದಲ್ಲಿ ಯುವಕನೊಬ್ಬನನ್ನು ಕೊಲೆ (Murder Case) ಮಾಡಲಾಗಿದೆ. ಸಲೀಮ್ ಮಹಮ್ಮದ್ ಗೌಸ್ (೨೬) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ. ಯಾರು ಕೊಲೆ ಮಾಡಿದ್ದಾರೆ? ಯಾವ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ | Car Fire | ಚಲಿಸುತ್ತಿದ್ದಾಗಲೇ ಧಗ ಧಗನೆ ಹೊತ್ತಿ ಉರಿದ ಕಾರು; ಪ್ರಾಣಾಪಾಯದಿಂದ ಪಾರು

Exit mobile version