Site icon Vistara News

Murder Mystery | ಪ್ರೀತಿಗೆ ಅಡ್ಡಿಯಾಗಬಾರದೆಂದು ಪ್ರಿಯಕರನ ಜತೆ ಸೇರಿ ಪತಿಯ ಕತ್ತು ಹಿಸುಕಿ ಕೊಂದಳು!

Supari Criminal

ಬೆಂಗಳೂರು: ಪ್ರೀತಿಗೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಕೊಲೆ (Murder Mystery) ಮಾಡಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಕೇಶ್ ತೋಮಂಗ ಕೊಲೆಯಾದ ದುರ್ದೈವಿ. ದೇಬಿತಂಬಾಗ್ ಹಾಗೂ ಬಾಬು ಅಲಿ ಬಂಧಿತ ಆರೋಪಿಗಳು.

ದೇಬಿತಂಬಾಗ್ ಹಾಗೂ ಬಾಬು ಅಲಿ ನಡುವೆ ಬಹಳ ದಿನಗಳಿಂದ ಪ್ರೀತಿ ಬೆಳೆದಿತ್ತು ಎನ್ನಲಾಗಿದೆ. ಆದರೆ, ತಮ್ಮ ಅಕ್ರಮ ಸಂಬಂಧಕ್ಕೆ ಪತಿಯು ಅಡ್ಡಿಯಾಗುತ್ತಾನೆ ಎಂದು ಇಬ್ಬರೂ ಸೇರಿ ಕೊಲೆ ಮಾಡುವ ಸಂಚು ರೂಪಿಸಿದ್ದರು. ಇದರಂತೆ ಪ್ರಿಯಕರನೊಂದಿಗೆ ಸೇರಿ ನವೆಂಬರ್ 6ರಂದು ವಿದ್ಯಾರಣ್ಯಪುರದ ವಡೇರಹಳ್ಳಿಯಲ್ಲಿ ರಾಕೇಶ್ ತೋಮಂಗನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ಬಳಿಕ ಏನೂ ಆಗಿಲ್ಲವೆಂಬಂತೆ ಇದ್ದ ದೇಬಿತಬಾಂಗ್‌ ಪೊಲೀಸರ ಎದುರು ನಾಟಕವಾಡಿದ್ದಾಳೆ. ಆದರೆ, ತನಿಖೆಗಿಳಿದ ವಿದ್ಯಾರಣ್ಯಪುರ ಪೊಲೀಸರು, ಕೊಲೆಯ ಹಿಂದಿನ ರಹಸ್ಯವನ್ನು ಭೇದಿಸಿದ್ದಾರೆ. ಕೊಲೆಯ ಹಿಂದೆ ಪತ್ನಿ ಹಾಗೂ ಆಕೆಯ ಪ್ರಿಯಕರ ಇರುವುದು ಗೊತ್ತಾಗಿದ್ದು, ಇಬ್ಬರನ್ನೂ ಬಂಧಿಸಿದ್ದಾರೆ.

ಇದನ್ನೂ ಓದಿ | Suicide | ಜೀವನದಲ್ಲಿ ಜಿಗುಪ್ಸೆಗೊಂಡು ರೈಲಿಗೆ ತಲೆಕೊಟ್ಟ ವ್ಯಕ್ತಿ; ಮೋಸ ಹೋಗಿದ್ದಕ್ಕೆ ಉಪನ್ಯಾಸಕಿ ಆತ್ಮಹತ್ಯೆ

Exit mobile version