Site icon Vistara News

Murugha Seer | ಸುಳ್ಳು ದೂರು ಪಿತೂರಿ; ಎಸ್.ಕೆ. ಬಸವರಾಜನ್‌, ಬಸವರಾಜೇಂದ್ರ ಜಾಮೀನು ಅರ್ಜಿ ವಜಾ

Karnataka Election 2023 updates Sowbhagya Basavaraj to contest as independent

ಚಿತ್ರದುರ್ಗ: ಮುರುಘಾಶ್ರೀ (Murugha Seer) ವಿರುದ್ಧ ಸುಳ್ಳು ದೂರು ದಾಖಲಿಸಲು ಪಿತೂರಿ ಪ್ರಕರಣದ ಮೂವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.

ಮುರುಘಾಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಪತ್ನಿ ಸೌಭಾಗ್ಯ ಹಾಗೂ ಮಠದ ಶಾಲಾ ಶಿಕ್ಷಕ ಬಸವರಾಜೇಂದ್ರ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ.

ಎಸ್.ಕೆ.ಬಸವರಾಜನ್, ಬಸವರಾಜೇಂದ್ರ ಜಾಮೀನು ಅರ್ಜಿ ಹಾಗೂ ಸೌಭಾಗ್ಯ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿವೆ. ಯಾವ ಆಧಾರದ ಮೇಲೆ ಅರ್ಜಿ ವಜಾ ಮಾಡಲಾಗಿದೆ ಎಂಬುದು ಗೊತ್ತಿಲ್ಲ. ಹೈಕೋರ್ಟ್‌ನಲ್ಲಿ ಮುಂದಿನ ಹೋರಾಟ ಮಾಡಲಾಗುತ್ತದೆ. ಪ್ರಕರಣ ಸಂಬಂಧ ಸಿಡಿ, ಆಡಿಯೊ ಕೇಳಬೇಕೆಂದು ಜಡ್ಜ್ ಸಮಯ ತೆಗೆದುಕೊಂಡಿದ್ದರು. ಆದರೆ, ಮೂವರು ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ್ದಾರೆ ಎಂದು ಬಸವರಾಜನ್ ಪರ ವಕೀಲ ರಾಮದಾಸ್ ತಿಳಿಸಿದ್ದಾರೆ.

ಇದನ್ನೂ ಓದಿ | Hunasuru Hanuma Jayanthi | 7 ವರ್ಷಗಳ ನಂತರ ಹಿಂದು-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಹುಣಸೂರು ಹನುಮ ಜಯಂತಿ

Exit mobile version