Site icon Vistara News

ಮುಂದಿನ ದಸರಾದೊಳಗೆ ಬೆಂಗಳೂರು- ಮೈಸೂರು ದಶಪಥ ಪೂರ್ಣ: ಪ್ರತಾಪ್‌ಸಿಂಹ

ಬೆಂಗಳೂರು- ಮೈಸೂರು ದಶಪಥವನ್ನು ಮುಂದಿನ ದಸರಾ ಹಬ್ಬದೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

https://vistaranews.com/wp-content/uploads/2022/05/WhatsApp-Video-2022-05-03-at-6.28.22-PM.mp4

ಈ ಬಗ್ಗೆ ವಿಶೇಷವಾಗಿ ಸಿದ್ಧಪಡಿಸಿದ ವಿಡಿಯೋ ಒಂದನ್ನು ಅವರು ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿದ್ದಾರೆ. ಈ ದಶಪಥ ಕಾಮಗಾರಿ ಎರಡು ಹಂತಗಳಲ್ಲಿ ನಡೆಯಲಿದೆ. ಬೆಂಗಳೂರಿನಿಂದ ನಿಡಘಟ್ಟ 56 ಕಿಲೋಮೀಟರ್‌ ಹೆದ್ದಾರಿ ಈ ಜುಲೈ ಒಳಗೆ ಪೂರ್ಣಗೊಳ್ಳಲಿದೆ. ನಿಡಘಟ್ಟ- ಮೈಸೂರು 61 ಕಿಲೋಮೀಟರ್‌ ದೂರದ ಹೆದ್ದಾರಿ ಮುಂಬರುವ ದಸರಾದ ಒಳಗೆ ಪೂರ್ಣಗೊಳಿಸಿ, ಪ್ರಧಾನಿ ಮೋದಿ ಅವರನ್ನು ಕರೆದು ಲೋಕಾರ್ಪಣೆ ಮಾಡಲಾಗುವುದು. ನಮ್ಮ ಮೇಲೆ ವಿಶ್ವಾಸವಿಡಿ- ಎಂದು ಪ್ರತಾಪ್‌ಸಿಂಹ ಹೇಳಿದ್ದಾರೆ.

ಇದನ್ನೂ ಓದಿ: ಸಾ.ರಾ.ಮಹೇಶ್‌ ವಿರುದ್ಧ ಭೂ ಅಕ್ರಮ ದಾಖಲೆ ಬಿಡುಗಡೆ ಮಾಡಿದ ಆರ್‌ಟಿಐ ಕಾರ್ಯಕರ್ತ ಗಂಗರಾಜು

Exit mobile version