Site icon Vistara News

Murder Case : ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಧೂರ್ತ ಪತಿ

Man kills wife

ಮೈಸೂರು: ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ (Man kills Wife). ನಂಜನಗೂಡು ತಾಲೂಕು (Nanjanagudu murder) ದೊಡ್ಡಹೊಮ್ಮ ಗ್ರಾಮದಲ್ಲಿ ಘಟನೆ (Murder Case) ನಡೆದಿದ್ದು, ರೂಪಾ (35) ಮೃತ ದುರ್ದೈವಿ. ಮೂಲತಃ ಯಳಂದೂರು ಕೆಸ್ತೂರು ಗ್ರಾಮದ ಪುರುಷೋತ್ತಮ್ (40) ಎಂಬಾತನೇ ತನ್ನ ಪತ್ನಿಯನ್ನು ಕೊಂದವನು.

ಪುರುಷೋತ್ತಮ್‌ಗೆ ಎಂಟು ವರ್ಷಗಳ ಹಿಂದೆ ದೊಡ್ಡಹೊಮ್ಮ ಗ್ರಾಮದ ರೂಪ ಜತೆ ವಿವಾಹವಾಗಿತ್ತು. ಗಂಡ- ಹೆಂಡತಿ ನಡುವೆ ಕ್ಷುಲ್ಲಕ ವಿಚಾರಕ್ಕೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಗುರುವಾರ ನಡೆದ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಂಜುನಾಥ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Self Harming: ಸಾಯಲೆಂದೇ ಧರ್ಮಸ್ಥಳಕ್ಕೆ ಹೋಗಿದ್ದ ಆಕೆ ಮರಳಿ ಬಂದು ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡಳು

ಬೆಕ್ಕನ್ನು ರಕ್ಷಿಸಲು ಹೋಗಿ ಜೀವ ಕಳೆದುಕೊಂಡ ಯುವಕ.

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದ ಹಾಲಿನ ಡೈರಿ ಬಳಿ ಯುವಕನೊಬ್ಬ ಬೆಕ್ಕನ್ನು ರಕ್ಷಿಸಲು ಹೋಗಿ ಜೀವ ಕಳೆದುಕೊಂಡಿದ್ದಾನೆ (Man went to save Cat died himself)

ಬೆಕ್ಕು ಮರದಲ್ಲಿ ಸಿಲುಕಿತ್ತು, ಕೆಳಗೆ ಬರಲಾಗದೆ ಒದ್ದಾಡುತ್ತಿತ್ತು. ಆಗ ಯುವಕ ಅದಕ್ಕೆ ಸಹಾಯ ಮಾಡಲು ಮರ ಹತ್ತಿದ್ದ. ಆದರೆ, ಅವನೇ ಮೃತಪಟ್ಟ. ಆಗಿದ್ದೇನೆಂದರೆ, ಬೆಕ್ಕನ್ನು ರಕ್ಷಿಸಲೆಂದು ಮರ ಹತ್ತುವಾಗ ಮರದ ಮೇಲೆ ಹಾದು ಹೋಗಿದ್ದ ಲೈನ್ ನಿಂದ ವಿದ್ಯುತ್ ಪ್ರವಹಿಸಿದೆ. ವಿದ್ಯುತ್‌ ಶಾಕ್‌ನಿಂದ ಆತ ಪ್ರಾಣ ಕಳೆದುಕೊಂಡಿದ್ದಾನೆ.

ರೋಷನ್ (25) ಎಂಬ ಯುವಕನೇ ಮೃತ ದುರ್ದೈವಿ. ಆತ ಡೈರಿ ಮುಂಬಾಗ ಕಾರ್ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದ.

ಬೆಕ್ಕು ಮರದಲ್ಲಿ ಸಿಲುಕಿ ಪರದಾಡ್ತಿದ್ದನ್ನ ಕಂಡು ರಕ್ಷಣೆಗೆ ಮುಂದಾಗಿದ್ದ ಆತನಿಗೆ ಮರದ ಮೇಲೆ ವಿದ್ಯುತ್‌ ತಂತಿ ಹಾದು ಹೋಗಿರುವುದು ಗೊತ್ತೇ ಇರಲಿಲ್ಲ. ಆಧಾರಕ್ಕಾಗಿ ವಿದ್ಯುತ್‌ ತಂತಿಯನ್ನು ಹಿಡಿದ ಆತ ಹಾಗೇ ಮೃತಪಟ್ಟಿದ್ದಾನೆ.

ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version