Site icon Vistara News

Vistara News Launch | ಕೆ.ಆರ್. ನಗರದಲ್ಲಿ ವಿಸ್ತಾರ ಕನ್ನಡ ಸಂಭ್ರಮ; ಗಣ್ಯರಿಂದ ವಿಸ್ತಾರ ಚಾನೆಲ್‌ಗೆ ಶುಭ ಹಾರೈಕೆ

Vistara News Launch

ಮೈಸೂರು: ವಿಸ್ತಾರ ನ್ಯೂಸ್​ ಚಾನೆಲ್ ವತಿಯಿಂದ ಜಿಲ್ಲೆಯ ಕೆ.ಆರ್.ನಗರ ತಾಲೂಕು ಪತ್ರಕರ್ತರ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಸ್ತಾರ ಕನ್ನಡ ಸಂಭ್ರಮ (Vistara News Launch) ಕಾರ್ಯಕ್ರಮವನ್ನು ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ದೊಡ್ಡಸ್ವಾಮೇಗೌಡ ಉದ್ಘಾಟಿಸಿದರು.

ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮಾತನಾಡಿ, ವಿಸ್ತಾರ ನ್ಯೂಸ್‌ ಚಾನೆಲ್‌ ಇಡೀ ರಾಜ್ಯದಾದ್ಯಂತ ಉತ್ತಮವಾಗಿ ಮೂಡಿಬರುತ್ತಿದೆ. ಎಲ್ಲ ತಾಲೂಕುಗಳಲ್ಲಿ ಪಕ್ಷಾತೀತವಾಗಿ ವಾಹಿನಿ ಪ್ರಸಾರವಾಗುತ್ತಿದೆ. ಇಂದು ಕೆ.ಆರ್.ನಗರದಲ್ಲೂ ವಿಸ್ತಾರ ನ್ಯೂಸ್‌ಗೆ ಚಾಲನೆ ನೀಡಿದ್ದು, ವಿಸ್ತಾರ ಜನರಿಗೆ ಸತ್ಯ ಸಂಗತಿಗಳನ್ನು ಬೆಳಕಿಗೆ ತರುವ ಮೂಲಕ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ವಿಧಾನ ಪರಿಷತ್ತು ಬಿಜೆಪಿ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಮಾತನಾಡಿ, ನಾಡಿನ ಖ್ಯಾತ ಪತ್ರಕರ್ತ ಹರಿಪ್ರಕಾಶ್‌ ಕೋಣೆಮನೆ ಅವರ ನೇತೃತ್ವದಲ್ಲಿ ವಿಸ್ತಾರ ಚಾನೆಲ್‌ ಆರಂಭವಾಗಿರುವುದು ಬಹಳ ಸಂತಸದ ವಿಷಯ. ನುರಿತ, ಅಪಾರ ಅನುಭವ ಇರುವ ಪತ್ರಕರ್ತರು, ಯಾವುದೇ ಪಕ್ಷಪಾತವಿಲ್ಲದೆ, ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಿಸುವ ಮೂಲಕ ಸುದ್ದಿಗಳನ್ನು ಅತ್ಯಂತ ವ್ಯವಸ್ಥಿತವಾಗಿ, ವಾಸ್ತವಿಕತೆಯ ನೆಲೆಗಟ್ಟಿನಲ್ಲಿ ಪ್ರಸಾರ ಮಾಡಬೇಕು. ಜನರ ಸಮಸ್ಯೆಗಳ ಮೇಲೆ ವಿಸ್ತಾರ ಬೆಳಕು ಚೆಲ್ಲುವ ಮೂಲಕ ಚಾನೆಲ್‌ ಯಶಸ್ವಿಯಾಗಲಿ ಎಂದು ಆಶಿಸಿದರು.

ಪುರಸಭೆ ಅಧ್ಯಕ್ಷ ಪ್ರಕಾಶ್ ಅಲಿಯಾಸ್ ಕೋಳಿ ಪ್ರಕಾಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಿವರಾಮು ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ | Vistara News Launch | ವಿಸ್ತಾರ ನ್ಯೂಸ್ ಕಚೇರಿಗೆ ಶ್ರೀ ಮಧು ಪಂಡಿತ ದಾಸ ಭೇಟಿ, ಶುಭ ಹಾರೈಕೆ

Exit mobile version