Site icon Vistara News

Mysterious death: ಹುಟ್ಟುಹಬ್ಬದ ಮರುದಿನವೇ ಕೆರೆಯಲ್ಲಿ ಶವವಾಗಿ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌; ಹೆಂಡತಿಯೇ ಹಂತಕಿ!

Mysterious death Kunigal murder case Wife is the murderer

ತುಮಕೂರು: ಕುಣಿಗಲ್‌ನಲ್ಲಿ ಫೆಬ್ರವರಿ ೩ರ ರಾತ್ರಿ ಗೆಳೆಯರ ಜತೆ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಂಡ ಯುವಕನೊಬ್ಬ ಮರುದಿನ ಬೆಳಗ್ಗೆ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ (Mysterious death) ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಹೆಂಡತಿಯೇ ಹಂತಕಿ ಎಂಬ ವಿಚಾರ ತಿಳಿದುಬಂದಿದೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿ ಗ್ರಾಮದ ಮಂಜುನಾಥ್ ಕೊಲೆಯಾಗಿದ್ದ ಯುವಕ. ಪ್ರಕರಣದಲ್ಲಿ ಮಂಜುನಾಥ್ ಪತ್ನಿ ಹರ್ಷಿತಾ (20), ಈಕೆಯ ಚಿಕ್ಕಮ್ಮನ ಮಗ ರಘು, ರವಿಕಿರಣ್ ಎಂಬ ಮೂವರನ್ನು ಬಂಧಿಸಲಾಗಿದೆ.

ಮಂಜುನಾಥ್ ಫೆ.3ರಂದು ಕುಣಿಗಲ್ ಪಟ್ಟಣದಲ್ಲಿ ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಬಳಿಕ ಸೀನಪ್ಪಮಹಳ್ಳಿ ಗ್ರಾಮದ ತನ್ನ ಮನೆಗೆ ಬಂದು ಮಲಗಿದ್ದರು. ನಂತರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮಂಜುನಾಥ್‌ಗೆ ಫೋನ್ ಕರೆಯೊಂದು ಬಂದಿದೆ. ಹೀಗಾಗಿ ಎದ್ದು ಹೊರಗೆ ಹೋಗಿದ್ದರು. ಹೊರಹೋದವರು ಮತ್ತೆ ಮನೆಗೆ ವಾಪಸ್‌ ಬಂದಿರಲಿಲ್ಲ.

ಇದನ್ನೂ ಓದಿ: Rajya Sabha: ಪಟ್ಟು ಸಡಿಲಿಸದ ಪ್ರತಿಪಕ್ಷಗಳು, ಬಗ್ಗದ ಸರ್ಕಾರ, ರಾಜ್ಯಸಭಾ ಕಲಾಪ ಮಾರ್ಚ್ 13ಕ್ಕೆ ಮುಂದೂಡಿಕೆ

ಬೆಳಿಗ್ಗೆ ಊರಿನಿಂದ ಒಂದು ಕಿ.ಮೀ ದೂರದಲ್ಲಿರುವ ಕಿತ್ನಾಮಂಗಲ ಕೆರೆಯಲ್ಲಿ ಮಂಜುನಾಥ್ ಶವ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕುಣಿಗಲ್ ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಖೆ ನಡೆಸಿದಾಗ ಗಂಡನ ಕೊಲೆಗೆ ಪತ್ನಿಯೇ ಸುಪಾರಿ ನೀಡಿರುವ ಅಂಶ ಬಯಲಾಗಿದೆ. ಪತ್ನಿಯ ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಎಂಬ ಮಾಹಿತಿ ಇದ್ದು, ಬಂಧಿತ ಮೂವರನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ. ಹುಟ್ಟುಹಬ್ಬದ ದಿನವೇ ಗಂಡನ ಅಂತ್ಯಕ್ಕೆ ಸ್ಕೆಚ್‌ ಹಾಕಿದ್ದ ಸಂಗತಿ ಈಗ ಬಯಲಾಗಿದೆ.

Exit mobile version