Site icon Vistara News

Siddheshwar Swamiji | ನಡೆದಾಡುವ ದೇವರ ದೇಹಾಂತ್ಯ, ಕಂಬನಿ ಮಿಡಿದ ಪ್ರಧಾನಿ ನರೇಂದ್ರ ಮೋದಿ

Siddeshwar Swamiji Modi

ಬೆಂಗಳೂರು: ವಿಜಯಪುರ ಜ್ಞಾನ ಯೋಗಾಶ್ರಮದ ಪೀಠಾಧೀಶರು, ಜ್ಞಾನಯೋಗಿ, ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ (Siddheshwar Swamiji) ದೇಹಾಂತ್ಯದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಂಬನಿ ಮಿಡಿದಿದ್ದಾರೆ.

“ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಈ ಸಮಾಜಕ್ಕೆ ನೀಡಿದ ಕೊಡುಗೆಯಿಂದಾಗಿ ಸದಾ ಸ್ಮರಣೀಯರು. ಮತ್ತೊಬ್ಬರ ಏಳ್ಗಿಗಾಗಿ ನಿರಂತರವಾಗಿ ದುಡಿದವರು. ಅಲ್ಲದೇ, ಅವರು ತಮ್ಮ ವಿದ್ವತ್ತಿನಿಂದಾಗಿ ಎಲ್ಲರ ಗೌರವ ಸಂಪಾದಿಸಿದ್ದರು. ಈ ದುಃಖದ ಸಮಯದಲ್ಲಿ ನಾನು ಅವರ ಕೋಟ್ಯಂತರ ಭಕ್ತ ಸಮೂಹದ ಜತೆಗಿದ್ದೇನೆ” ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. ಹಾಗೆಯೇ ಶ್ರೀಗಳ ಜತೆಗಿದ್ದ ಫೋಟೊಗಳನ್ನೂ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | Siddheshwar Swamiji | ಪದ್ಮಶ್ರೀ ಪ್ರಶಸ್ತಿಯನ್ನೂ ವಿನಮ್ರತೆಯಿಂದ ನಿರಾಕರಿಸಿದ್ದ ಸಿದ್ದೇಶ್ವರ ಶ್ರೀಗಳು

Exit mobile version