Site icon Vistara News

Neha Murder Case: ಕಾಂಗ್ರೆಸ್ ಸರ್ಕಾರದಲ್ಲಿ ಹಿಂದುಗಳ ರಕ್ತಕ್ಕೆ ಬೆಲೆ ಇಲ್ಲದಂತಾಗಿದೆ: ಆರ್.ಅಶೋಕ್‌ ಕಿಡಿ

Neha Murder Case

ತುಮಕೂರು: ಕಾಂಗ್ರೆಸ್ ಸರ್ಕಾರ ಬಂದ ಮೇಲೆ‌ ಹಿಂದುಗಳ ರಕ್ತಕ್ಕೆ ಬೆಲೆ (Neha Murder Case) ಇಲ್ಲದಂತಾಗಿದೆ. ಅವರ ಜಾಹೀರಾತಿನಲ್ಲಿ ಏನು ಚೊಂಬು ಕೊಟ್ಟಿದ್ದಾರೆ, ಅದರಲ್ಲಿ ಪೂರ್ತಿ ರಕ್ತ ತುಂಬಿದೆ. ಹಿಂದುಗಳ ರಕ್ತ ತುಂಬಿ ಚೆಲ್ಲುತ್ತಿರೋದು ಅವರ ಚೊಂಬಿನ ಪ್ರತೀಕ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashok) ಕಿಡಿ ಕಾರಿದ್ದಾರೆ.

ನೇಹಾ ಹತ್ಯೆ ಖಂಡಿಸಿ ನಗರದಲ್ಲಿ ಬಿಜೆಪಿ-ಜೆಡಿಎಸ್‌ ವತಿಯಿಂದ ನಡೆದ ಪ್ರತಿಭಟನೆ (BJP Protest) ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಬಂತು ಭಯೋತ್ಪಾದನೆ ಬಂತು, ಕಾಂಗ್ರೆಸ್ ಬಂತು ನಕ್ಸಲ್ ಬಂತು, ಕಾಂಗ್ರೆಸ್ ಬಂತು ಲವ್ ಜಿಹಾದ್ ಬಂತು, ಲವ್ ಜಿಹಾದ್ ಹೆಸರಲ್ಲಿ ಕಗ್ಗೊಲೆಯಾಗಿರೋದನ್ನು ಇಡೀ ದೇಶ ನೋಡುತ್ತಿದೆ. ಸನ್ಮಾನ್ಯ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರಿಗೆ ಇದು ಲವ್ ಕೇಸ್ ಅಂತೆ, ನಾವು ಹೇಳಿದ್ದು ಲವ್ ಅಂತಾನೆ‌, ಲವ್ ಅಂದ್ರೇನೆ ಜಿಹಾದ್‌… ಮುಸ್ಲಿಂ ಯುವಕರಿಗೆ ಟ್ರೈನಿಂಗ್ ಕೊಟ್ಟು, ಅವರಿಗೆ ಹಣ ಕೊಟ್ಟು ಕಳುಹಿಸುತ್ತಾರಲ್ಲವೇ ಅದನ್ನೇ ಲವ್ ಜಿಹಾದ್ ಅನ್ನೋದು‌. ಇವತ್ತು ಕಾಂಗ್ರೆಸ್‌ನವರು ಕೇಸ್ ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯನವರೇ ನಿಮ್ಮ ಹಿಂದು ವಿರೋಧಿ ನೀತಿ ಇದೇನು ಮೊದಲಲ್ಲ, ನಿಮ್ಮದೇ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಮುಸ್ಲಿಂ ಮೂಲಭೂತವಾದಿಗಳು ಬೆಂಕಿ ಹಚ್ಚಿದರು. ಆಗ ಬಾಯಿ ಮುಚ್ಚಿಕೊಂಡು ಸುಮ್ಮನಾದಿರಿ, ಈಗ ಕಾಂಗ್ರೆಸ್ ಕಾರ್ಪೊರೇಟರ್ ಮಗಳ ಹತ್ಯೆಯಾಗಿದೆ, ಈಗಲೂ ಮೌನವಾಗಿದ್ದೀರಿ. ಡಿ.ಕೆ. ಸುರೇಶ್ ಅವರ ಪ್ರಚಾರದಲ್ಲಿ ಮೂರು ದಿನದ ಹಿಂದೆ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದ್ದಾರೆ. ಕಾಂಗ್ರೆಸ್ ನಾಯಕರು ದೇಶವನ್ನು ಇಬ್ಭಾಗ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ಗೆ ಮಾನ, ಮರ್ಯಾದೆ, ನಾಚಿಕೆ ಯಾವುದೂ ಇಲ್ಲ. ಇಷ್ಟೆಲ್ಲಾ ಆದರೂ ರಾಜಾರೋಷವಾಗಿ ಓಡಾಡಿಕೊಂಡು ಇದ್ದಾರೆ. ಬೇರೆಯವರು ಯಾರಾದ್ರು ಸಿಎಂ ಆಗಿದ್ದರೆ ರಾಜೀನಾಮೆ ಕೊಟ್ಟು ಹೋಗುತ್ತಿದ್ದರು. ಇಡೀ ರಾಜ್ಯದಲ್ಲಿ ಒಂದು ರೀತಿ ಭಯೋತ್ಪಾದನೆ ರೀತಿ ಕೃತ್ಯಗಳು ನಡೆಯುತ್ತಿವೆ. ನೇಹಾ ಕೊಲೆ ಪ್ರಕರಣದಲ್ಲಿ ಅವರ ತಂದೆ ತಾಯಿ, ನೀವು ಹೀಗೆ, ಮುಸ್ಲಿಂರನ್ನು ಓಲೈಕೆ ಮಾಡುತ್ತಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಅಂದಿದ್ದಾರೆ. ನಾಡಿನ ಹೆಣ್ಣು ಮಕ್ಕಳಿಗೆ ಇವತ್ತು ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಚೊಂಬಿನ ಜಾಹೀರಾತು ಪ್ರತಿಯಾಗಿ ನಾವು ಕೂಡ ಇವತ್ತು ಒಂದು ಜಾಹೀರಾತು ಕೊಟ್ಟಿದ್ದೀವಿ. ಕಾಂಗ್ರೆಸ್ ಬಂದ್ರೆ ಡೇಂಜರ್ ಅಂತ ಜಾಹೀರಾತು ಕೊಟ್ಟಿದ್ದೀವಿ‌. ಕಾಂಗ್ರೆಸ್ ಬಂದ್ರೆ ಭಯೋತ್ಪಾದನೆ ನಡೆಯುತ್ತೆ, ಕಾಂಗ್ರೆಸ್ ಬಂದ್ರೆ ಬರಗಾಲ ಬರುತ್ತೆ, ಕಾಂಗ್ರೆಸ್ ಬಂದ್ರೆ ಕೊಲೆ ಸುಲಿಗೆ ಆಗುತ್ತೆ, 10 ಅಕ್ಕಿ ಕೊಡ್ತಿವಿ ಅಂದ್ರು ಕೊಡಲಿಲ್ಲ‌ ಅಂತ ಜಾಹೀರಾತು ಕೊಟ್ಟಿದ್ದೀವಿ. ಅವರು ಕೊಡೋದು ಒಂದೇ ಎಣ್ಣೆ, ಅದನ್ನು ಬಿಟ್ಟು ಬೇರೇನೂ ಕೊಡಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | Pralhad Joshi: ಯುಪಿಎ ಕಾಲದಲ್ಲಿ ಸತ್ತ ಉಗ್ರನಿಗಾಗಿ ಸೋನಿಯಾ ಗಾಂಧಿ ಕಣ್ಣೀರಿಟ್ಟಿದ್ದರು: ಪ್ರಲ್ಹಾದ್‌ ಜೋಶಿ

ನೇಹಾ ಕೇಸ್‌ನಲ್ಲಿ ಕಾಗ್ರೆಸ್‌ನವರು ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ. ಕಾಲೇಜ್ ಕ್ಯಾಂಪಸ್‌ಗಳು ಸೇಫ್‌ ಇಲ್ಲವೆಂದರೆ ಈ ಸರ್ಕಾರ ನಡೆಸುವ ಕಾಂಗ್ರೆಸ್ ರಾಜ್ಯವನ್ನು ಗೂಂಡಾ ರಾಜ್ಯವನ್ನಾಗಿ ಮಾಡಿದೆ‌. ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರವಿದೆ, ಮುಸಲ್ಮಾನ್ ಭಯೋತ್ಪಾದಕರು ಏನು ಮಾಡಿದರೂ ನಾವು ರಕ್ಷಣೆ ಮಾಡುತ್ತೀವಿ ಅಂತ ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಈ ರಾಜ್ಯದಲ್ಲಿ ಜೈ ಶ್ರೀರಾಮ್ ಅಂತ ಕೂಗೋದು ಅಪರಾಧವೇ ಎಂದು ಕಿಡಿಕಾರಿದರು.

Exit mobile version