Site icon Vistara News

ಮುಂದಿನ ಸಿಎಂ ಶ್ರೀರಾಮುಲು ಎಂದು ಎತ್ತಿನ ಮೇಲೆ ಬರೆದ ರೈತ, ಫೋಟೊ ವೈರಲ್

sriramulu

ವಿಜಯನಗರ : ಮಂಗಳವಾರ (ಜೂನ್‌ 14) ಕಾರ ಹುಣ್ಣಿಮೆ ಪ್ರಯುಕ್ತ ವಿಜಯನಗರದ ರೈತನೊಬ್ಬ ಎತ್ತುಗಳಿಗೆ ಸಿಂಗಾರ. ಅದರ ಮೇಲೆ ಮುಂದಿನ ಸಿಎಂ ಶ್ರೀರಾಮುಲು ಎಂದು ಬರೆದಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಸಿದ್ದಪ್ಪ ಪೂಜಾರಿ ಎಂಬ ರೈತ ಮುಂದಿನ ಸಿಎಂ ಶ್ರೀರಾಮುಲು ಎಂದು ಎತ್ತುಗಳ ಮೇಲೆ ಬರೆದಿದ್ದಾನೆ. ಕಾರ ಹುಣ್ಣಿಮೆಯಾದ ಹಿನ್ನಲೆ ಎತ್ತುಗಳಿಗೆ ಬಣ್ಣ ಬಳಿದು ಸಿಂಗಾರ ಮಾಡುವುದು ವಾಡಿಕೆ. ಹೀಗಾಗಿ ಹಳ್ಳಿ ಭಾಗದಲ್ಲಿ ಎತ್ತುಗಳಿಗೆ ಸಿಂಗಾರ, ಕರಿ ಹರಿಯೋ ಪದ್ದತಿ ಇದೆ. ಈ ಹಿನ್ನಲೆಯಲ್ಲಿ ಶ್ರೀರಾಮುಲು ಅಭಿಮಾನಿಯಾಗಿರುವ ಸಿದ್ದಪ್ಪ ಕೂಡ ಎತ್ತಿಗೆ ಬಣ್ಣ ಬಳಿದು ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.

ಇದನ್ನು ಓದಿ| ಸಿದ್ದರಾಮಯ್ಯ ಸೀಳು ನಾಲಿಗೆ ಸರಿಪಡಿಸಿಕೊಳ್ಳಲಿ : ಸಚಿವ ಶ್ರೀರಾಮುಲು

Exit mobile version