Site icon Vistara News

BBK Season 10: ಈ ವಾರ ಬಿಗ್‌ ಬಾಸ್‌ನಲ್ಲಿ ನೋ ಎಲಿಮಿನೇಷನ್;‌ ಸಂತು-ಪಂತು ಸೇಫ್‌

Varthur Santhosh and Tukali Santhosh

ಬೆಂಗಳೂರು: ಬಿಗ್ ಬಾಸ್ ಸೀಸನ್ 10ರಲ್ಲಿ (Big Boss Season 10) ಈ ವಾರ ಸ್ಪರ್ಧಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ವಾರಾಂತ್ಯದಲ್ಲಿ ಯಾರಾದರೂ ಒಬ್ಬರು ದೊಡ್ಮನೆಯಿಂದ ಹೊರಹೋಗುವುದು ಖಚಿತವಾಗಿತ್ತು. ಆದರೆ, ಸಂಕ್ರಾಂತಿ ಹಿನ್ನೆಲೆಯಲ್ಲಿ ಬಿಗ್‌ ಬಾಸ್‌ (BBK Season 10) ನೀಡಿದ ಟ್ವಿಸ್ಟ್‌ನಿಂದ ಸ್ಪರ್ಧಿಗಳು ಫುಲ್‌ ಖುಷಿಯಾಗಿದ್ದಾರೆ. ಯಾಕೆಂದರೆ ಈ ವಾರ ಯಾವುದೇ ಎಲಿಮಿನೇಷನ್‌ ನಡೆಯದ ಕಾರಣ, ಮನೆಯಲ್ಲಿ ಸಂತು- ಪಂತು ಎಂದು ಕರೆಸಿಕೊಳ್ಳುವ ವರ್ತೂರು ಸಂತೋಷ್‌ ಮತ್ತು ತುಕಾಲಿ ಸಂತೋಷ್‌ ಸೇಫ್‌ ಆಗಿದ್ದಾರೆ.

ಈ ವಾರ ವಿನಯ್ ಗೌಡ, ತನಿಷಾ ಕುಪ್ಪಂಡ, ಕಾರ್ತಿಕ್, ವರ್ತೂರು ಸಂತೋಷ್, ತುಕಾಲಿ ಸಂತೋಷ್, ನಮ್ರತಾ ಗೌಡ ನಾಮಿನೇಟ್ ಆಗಿದ್ದರು. ಒಬ್ಬೊಬ್ಬರಾಗಿಯೇ ಎಲ್ಲರೂ ಸೇಫ್ ಆದರು. ಆದರೆ ಕೊನೆಗೆ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತು ಮಾತ್ರ ಉಳಿದುಕೊಂಡಿದ್ದರು. ಇವರಿಬ್ಬರಲ್ಲಿ ಯಾರಾದರೂ ಒಬ್ಬರು ಎಲಿಮಿನೇಟ್ ಆಗುವುದು ಖಚಿತ ಎನ್ನಲಾಗಿತ್ತು. ಆದರೆ, ಇಬ್ಬರೂ ಸೇಫ್‌ ಆಗಿದ್ದಾರೆ.

ಬಿಗ್ ಬಾಸ್‌ ಸ್ಪರ್ಧೆಯ ಭಾರಿ ಟಫ್‌ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದ ವರ್ತೂರು ಸಂತೋಷ್ (Varthur Santhosh) ಅವರು ಬಿಗ್‌ ಬಾಸ್ ಮನೆಯಲ್ಲಿ ಕೊನೆಯವರೆಗೂ ಉಳಿಯಲಿದ್ದಾರೆಂದು ಬಹುತೇಕರು ಭಾವಿಸಿದ್ದರು. ಆದರೆ, ಈ ವಾರ ಅವರೇ ಮನೆಯಿಂದ ಹೊರ ಬೀಳಲಿದ್ದಾರೆ ಎನ್ನಲಾಗಿತ್ತು. ಆದರೆ, ಆ ಊಹೆ ಸುಳ್ಳಾಗಿದೆ.

ಇನ್ನು ಈಗಾಗಲೇ ಟಿಕೆಟ್ ಫಿನಾಲೆ ಗೆದ್ದಿರುವ ಸಂಗೀತಾ ಅವರು ಫೈನಲ್‌ಗೆ ಆಯ್ಕೆಯಾಗಿದ್ದಾರೆ. ಪ್ರತಾಪ್ ಕೂಡ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಡುವ ಸಾಧ್ಯತೆಗಳಿವೆ.

ಇದನ್ನೂ ಓದಿ | Box Office War: ಬಾಕ್ಸ್‌ ಆಫೀಸ್‌ನಲ್ಲಿ ಸ್ಟಾರ್‌ ವಾರ್‌; ಮಹೇಶ್‌ ಬಾಬು, ಧನುಷ್‌ ಚಿತ್ರಗಳು ಗಳಿಸಿದ್ದೆಷ್ಟು?

ವರ್ತೂರು ಅವರು ಹುಲಿ ಉಗುರಿನ ಲಾಕೆಟ್‌ ಧರಿಸಿಕೊಂಡು ಬಿಗ್ ಬಾಸ್ ಮನೆಗೆ ಬಂದಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ದೂರು ನೀಡಿದ್ದರಿಂದ, ವರ್ತೂರು ಸಂತೋಷ್ ಅವರು ಅರೆಸ್ಟ್ ಕೂಡ ಆಗಿದ್ದರು. ಮತ್ತೆ ಜಾಮೀನು ದೊರೆತ ಮೇಲೆ ಅವರು ಬಿಗ್ ಬಾಸ್ ಮನೆಗೆ ಹಿಂದಿರುಗಿದ್ದರು. ಈ ಹುಲಿ ಉಗುರು ಲಾಕೆಟ್ ಪ್ರಕರಣವು ಅವರಿಗೆ ಭಾರೀ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಆದರೆ ಈಗ ಅವರು ಬಿಗ್‌ಬಾಸ್‌ ಮನೆಯಲ್ಲಿ ಸೇಫ್‌ ಆಗಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.

Exit mobile version