Site icon Vistara News

OBC Reservation | ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿದ ಜೇನುಹುಳು, ಜನರೆಲ್ಲ ದಿಕ್ಕಾಪಾಲು

OBC reservation

ಚಾಮರಾಜನಗರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ವೀರಶೈವ ಲಿಂಗಾಯತ ಸಮುದಾಯದವರು ಒಬಿಸಿ ಮೀಸಲಾತಿಗೆ (OBC Reservation) ಒತ್ತಾಯಿಸಿ ಪ್ರತಿಭಟಿಸುತ್ತಿದ್ದ ವೇಳೆ ಜನರ ಮೇಲೆ ಜೇನು ಹುಳಗಳು ದಾಳಿ ನಡೆಸಿದ ಘಟನೆ ನಡೆದಿದೆ. ನೂರಾರು ಪ್ರತಿಭಟನಾಕಾರರು ಜಮಾಯಿಸಿದ್ದ ವೇಳೆ ದಿಢೀರ್‌ ಜೇನು ಹುಳುಗಳು ದಾಳಿಯಿಂದ ಪ್ರತಿಭಟನಾಕಾರರು ದಿಕ್ಕಾಪಾಲಾಗಿ ಓಡಿದ್ದಾರೆ.

ಪ್ರತಿಭಟನಾಕಾರರ ಮೇಲೆ ಜೇನು ದಾಳಿ

ಜೇನು ಹುಳುಗಳ ಕಡಿತದಿಂದ ತಪ್ಪಿಸಿಕೊಳ್ಳಲು ಪ್ರತಿಭಟನಾಕಾರರು ದಿಕ್ಕಾಪಾಲಾಗಿ ಓಡಿದ್ದು, ತಾವು ಧರಿಸಿದ್ದ ಬಟ್ಟೆಗಳಿಂದ ರಕ್ಷಣೆ ಪಡೆದುಕೊಳ್ಳುತ್ತಿದ್ದರು. ಆದರೆ, ಕೆಲವರಿಗೆ ತೀವ್ರ ಪ್ರಮಾಣದಲ್ಲಿ ಜೇನು ಕಚ್ಚಿದೆ ಎನ್ನಲಾಗಿದೆ. ಕೆಲ ವೃದ್ಧರನ್ನು ಪೊಲೀಸ್‌ ಸಿಬ್ಬಂದಿ ರಕ್ಷಿಸಿ ತಮ್ಮ ವಾಹನದಲ್ಲಿ ಕೂರಿಸಿಕೊಂಡರು.

ಇದನ್ನೂ ಓದಿ | ಬೇಡ ಜಂಗಮರಿಗೆ ಎಸ್ಸಿ ಮೀಸಲಾತಿ ಬೇಡವೇ ಬೇಡವೆಂದ ಆದಿಜಾಂಬವ ಸಂಘಟನೆ; ವಿಧಾನಸೌಧದಲ್ಲಿ ಹೈಡ್ರಾಮ

Exit mobile version