Site icon Vistara News

Tragedy | ಕುತ್ತಿಗೆಯನ್ನೇ ಕತ್ತರಿಸಿದ ಪ್ಲೈವುಡ್‌ ಕಟ್ಟಿಂಗ್‌ ಮೆಷಿನ್‌, ದಾರುಣವಾಗಿ ಪ್ರಾಣ ಕಳೆದುಕೊಂಡ ಯುವಕ

adithya Araga

ತೀರ್ಥಹಳ್ಳಿ: ಪ್ಲೈವುಡ್‌ನ್ನು ಕತ್ತರಿಸುವ ಯಂತ್ರ ಯುವಕನೊಬ್ಬನ ಕುತ್ತಿಗೆಯನ್ನೇ ಕತ್ತರಿಸಿದ ದಾರುಣ ಘಟನೆ ತೀರ್ಥಹಳ್ಳಿಯ ಮಾಳೂರು ಬಳಿ ನಡೆದಿದೆ. ಕನ್ನಂಗಿ ಮುಂಡಾಸಕೊಪ್ಪದ ೨೧ ವರ್ಷದ ಯುವಕ ಆದಿತ್ಯ ಹೀಗೆ ವಿಚಿತ್ರ ರೀತಿಯಲ್ಲಿ ಪ್ರಾಣ ಕಳೆದುಕೊಂಡವನು.

ಮೃತ ಆದಿತ್ಯ

ಮುಂಡಾಸ್ ಕೊಪ್ಪ ಗ್ರಾಮದ ಆದಿತ್ಯ ಪ್ಲೈವುಡ್‌ ಅಂಗಡಿಗೆ ಕೆಲಸಕ್ಕೆ ತೆರಳಿದ್ದ. ಅದು ಬೆಜ್ಜುವಳ್ಳಿ ಗ್ರಾಮದ ಲೋಕೇಶ್‌ ಎಂಬವರಿಗೆ ಸೇರಿದ ಅಂಗಡಿ. ಅಲ್ಲಿ ಅಂಗಡಿಯ ಇಂಟೀರಿಯರ್‌ ಮಾಡುವ ಕೆಲಸ ಆಗುತ್ತಿದ್ದು, ಪ್ಲೈವುಡ್‌ ಪೀಸ್‌ಗಳನ್ನು ಬೇಕಾದ ಗಾತ್ರಕ್ಕೆ ಯಂತ್ರಕ್ಕೆ ಇಟ್ಟು ಕತ್ತರಿಸಲಾಗುತ್ತದೆ.

ಯಂತ್ರದಿಂದ ಪ್ಲೈವುಡ್ ಕಟ್ ಮಾಡುವಾಗ ಯಂತ್ರದ ಬ್ಲೇಡ್‌ ಆದಿತ್ಯನ ಕುತ್ತಿಗೆಯನ್ನೇ ಕತ್ತರಿಸಿದ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ತೀರ್ಥಹಳ್ಳಿ ತಾಲೂಕಿನ ಮಾಳೂರು ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇನ್ಸ್‌ಪೆಕ್ಟರ್‌ ನವೀನ್ ಕುಮಾರ್ ಮಠಪತಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಸಚಿವ ಆರಗ ಜ್ಞಾನೇಂದ್ರ ಭೇಟಿ
ಮರ ಕುಯ್ಯುವ ಯಂತ್ರಕ್ಕೆ ಕುತ್ತಿಗೆ ಸಿಕ್ಕಿ ಮರಣ ಹೊಂದಿದ ಕನ್ನಂಗಿ ಮುಂಡಾಸಕೊಪ್ಪದ ಆದಿತ್ಯನ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಬುಧವಾರ ಬೆಳಗ್ಗೆ ಭೇಟಿ ನೀಡಿ ಮನೆಮಂದಿಗೆ ಸಾಂತ್ವನ ಹೇಳಿದರು.

ಇದನ್ನೂ ಓದಿ |Road tragedy | ರಾಜಧಾನಿಯಲ್ಲಿ ರಸ್ತೆ ಗುಂಡಿ ಅವಾಂತರ: ಸ್ಕೂಟರ್‌ ಸಹಿತ ಉರುಳಿದ ಮಹಿಳೆಯ ಕಾಲಿನ ಮೇಲೆ ಹರಿದ ಬಸ್‌

Exit mobile version