Site icon Vistara News

Pocso Case: ತಾತಗುಣಿ ನಿರ್ಜನ ಪ್ರದೇಶದಲ್ಲಿ ಪಿಯು ವಿದ್ಯಾರ್ಥಿನಿ ಮೇಲೆ ನಡೆಯಿತಾ ಗ್ಯಾಂಗ್ ರೇಪ್; ಪೊಲೀಸರಿಗೆ ಸಿಕ್ತು ಯುವಕರ ಫೋಟೊ!

Kaggalipura Police Station

Kaggalipura Police Station

ರಾಮನಗರ/ಬೆಂಗಳೂರು: ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಾಲಕಿಯ ಸ್ನೇಹಿತರೇ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿ ಕೊಂದರಾ ಎನ್ನುವ ಅನುಮಾನಗಳು ವ್ಯಕ್ತವಾಗಿದೆ. ಇದಕ್ಕೆ ಪೂರಕವಾಗಿ ಬಾಲಕಿಯೊಂದಿಗೆ ಮೂವರು ಯುವಕರು ಇರುವ ಫೋಟೊ ಲಭ್ಯವಾಗಿದೆ.

ವಿದ್ಯಾರ್ಥಿನಿ ಸಾಯುವ ಸಂದರ್ಭದಲ್ಲಿ ತೆಗೆದ ಫೋಟೊ ಲಭ್ಯವಾಗಿದ್ದು, ಈಗಾಗಲೇ ವೆಂಕಟೇಶ್ ಎಂಬಾತನನ್ನು ಕಗ್ಗಲೀಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೋಟೊದಲ್ಲಿರುವ ಉಳಿದ ಮೂವರು ಯಾರು? ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಪೋಕ್ಸೋ ಪ್ರಕರಣ ದಾಖಲು

ಕಾಲೇಜಿಗೆ ಹೋಗಿದ್ದ ಈ ಬಾಲಕಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಮೃತೆಯ ಕೈ-ಕಾಲಿನಲ್ಲಿ ಗಾಯಗಳು ಕಂಡುಬಂದಿದ್ದು, ರಕ್ತ ಕೂಡ ಬರುತ್ತಿರುವುದರಿಂದ ಅನುಮಾನಗೊಂಡ ಪೋಷಕರು, ಈಕೆಯನ್ನು ಅತ್ಯಾಚಾರಗೈದು ಕೊಲೆ ಮಾಡಿರಬಹುದು ಎಂದು ಶಂಕಿಸಿ ದೂರು ನೀಡಿದ್ದರು.

ಶುಕ್ರವಾರ ಕಾಲೇಜಿಗೆ ಹೋದವಳು ಸಂಜೆಯಾದರೂ ಬಾರದೆ ಇದ್ದಾಗ ಪೋಷಕರು ಆತಂಕಗೊಂಡಿದ್ದಾರೆ. ಕಾಲೇಜಿನ ಪ್ರಾಂಶುಪಾಲರಿಗೆ ಕರೆ ಮಾಡಿ ಕೇಳಿದಾಗ ಮಧ್ಯಾಹ್ನ 1 ಗಂಟೆ ಹೋಗಿರುವುದಾಗಿ ಹೇಳಿದ್ದಾರೆ. ಈ ವೇಳೆ ವೆಂಕಟೇಶ್, ವಿದ್ಯಾರ್ಥಿನಿ ಪೋಷಕರಿಗೆ ಕರೆ ಮಾಡಿದ್ದು, ʼಮಧ್ಯಾಹ್ನ ನನ್ನ ಜತೆ ಬೈರಸಂದ್ರಕ್ಕೆ ಬಂದಿದ್ದಳು. ತಿಂಡಿ ತಿಂದಿಲ್ಲ. ತಲೆ ಸುತ್ತಿ ಬಿದ್ದಿದ್ದಾಳೆ. ನೀರು ಕುಡಿಸಿದರೂ ಕುಡಿಯುತ್ತಿಲ್ಲ. ಉಸಿರಾಡುತ್ತಿಲ್ಲʼ ಎಂದು ಕರೆ ಮಾಡಿ ಹೇಳಿದ್ದಾನೆ. ತಕ್ಷಣ ಸ್ಥಳಕ್ಕೆ ಹೋಗಿ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದು ತೋರಿಸಿದಾಗ, ಆಕೆ ಮೃತಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿದ್ದರು.

ಇದನ್ನೂ ಓದಿ: Pocso Case: ಕಾಲೇಜಿಗೆ ಹೋದ ಯುವತಿಯ ಅತ್ಯಾಚಾರ ನಡೆಸಿ ಕೊಲೆ: ಪೋಷಕರ ದೂರು

ಸದ್ಯ ಲಭ್ಯವಾಗಿರುವ ಯುವಕರ ಫೋಟೊ ಹಿಡಿದು ಪೊಲೀಸರು ತನಿಖೆ ಮುಂದುವರಿಸಿದ್ದು, ವಶಕ್ಕೆ ಪಡೆದ ವೆಂಕಟೇಶ್‌ ಎಂಬಾತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತ ವೆಂಕಟೇಶ್ ಮತ್ತು ಬಾಲಕಿ ಒಂದೇ ಕಾಲೇಜಿನಲ್ಲಿ ಓದುತ್ತಿದ್ದು, ಸಣ್ಣ ವಯಸ್ಸಿನಿಂದಲೂ ಪರಿಚಯವಿತ್ತು. ಆತನ ಜತೆಗೆ ಸ್ನೇಹ ಬೆಳೆಸಿಕೊಂಡಿದ್ದಳು. ಅನಗತ್ಯ ಸಂದೇಶ ಮತ್ತಿತರ ಕಾರಣಕ್ಕೆ ಮನೆಯವರು ವೆಂಕಟೇಶ್‌ನನ್ನು ಕರೆದು ಬುದ್ಧಿ ಹೇಳಿದ್ದರು. ಇದೀಗ ಕೊಲೆಯೇ ನಡೆದುಹೋಗಿದೆ.

ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version