Site icon Vistara News

Electric shock: ಮುಂಡರಗಿಯಲ್ಲಿ ವಿದ್ಯುತ್ ಹರಿದು ಪವರ್‌ಮ್ಯಾನ್‌ ಸಾವು

Powerman Manjunath D Dollina

ಗದಗ: ವಿದ್ಯುತ್ ಹರಿದು ಕರ್ತವ್ಯ ನಿರತ ಪವರ್‌ಮ್ಯಾನ್‌ ಮೃತಪಟ್ಟಿರುವ ಘಟನೆ (Electric shock) ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಬುಧವಾರ ನಡೆದಿದೆ. ಮಂಜುನಾಥ ಡಿ ಡೊಳ್ಳಿನ (34) ಮೃತ ದುರ್ದೈವಿ. ವಿದ್ಯುತ್ ಪರಿವರ್ತಕಕ್ಕೆ (ಟಿಸಿ) ನಂಬರ್ ಬರೆಯುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪರಿವರ್ತಕದಿಂದ (ಟಿಸಿ) ವಿದ್ಯುತ್ ಹರಿದು ಪವರ್‌ ಮ್ಯಾನ್‌ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಎರಡು‌ ಪ್ರತ್ಯೇಕ ಅಪಘಾತ; ಇಬ್ಬರಿಗೆ ಗಂಭೀರ ಗಾಯ

ಮಂಡ್ಯ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಡ್ಯ ಜಿಲ್ಲೆಯ ತೂಬಿನಕೆರೆ ಹಾಗೂ ನಗುವನಹಳ್ಳಿ ಗ್ರಾಮದ ಬಳಿ ಪ್ರತ್ಯೇಕ ಅಪಘಾತ ನಡೆದಿದೆ. ಬೆಂಗಳೂರಿನಿಂದ ಮೈಸೂರಿಗೆ ಹೋಗುವಾಗ ಕಾರು ಪಟ್ಲಿಯಾಗಿದ್ದು, ಒಂದು‌ ಕಾರಿನಲ್ಲಿ ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಡ್ಯ ಸಂಚಾರಿ ಠಾಣೆ ಹಾಗೂ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Kidnap Case : 9ರ ಬಾಲಕಿಯ ಅಪಹರಣಕ್ಕೆ ಯತ್ನಿಸಿದ ಧೂರ್ತ ಪೊಲೀಸ್‌ ಬಲೆಗೆ; 12 ಗಂಟೆಯೊಳಗೆ ಅರೆಸ್ಟ್‌

ಲಾರಿ ಹರಿದು ಪಾದಚಾರಿ ಸಾವು

ಸಂತೋಷ ಹಿರೇಮಠ

ಬೆಳಗಾವಿ: ಲಾರಿ ಹರಿದು ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿರುವುದು ಜಿಲ್ಲೆಯ ಯರಗಟ್ಟಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬುಧವಾರ ನಡೆದಿದೆ. ಸಂತೋಷ ಹಿರೇಮಠ (24) ಮೃತರು. ಲಾರಿ ಬರುತ್ತಿದ್ದನ್ನು ಗಮನಿಸಿ ಡ್ರೈವರ್‌ಗೆ ನಿಲ್ಲಿಸುವಂತೆ ಹೇಳಿ ಪಾದಚಾರಿ ಮುಂದೆ ಸಾಗಿದ್ದಾರೆ. ಆದರೆ, ಪಾದಚಾರಿ ರೋಡ್ ಕ್ರಾಸ್ ಮಾಡಿದ್ದಾರೆ ಎಂದು ಭಾವಿಸಿ ಚಾಲಕ ಅಜಾಗರೂಕತೆಯಿಂದ ಲಾರಿ ಚಲಾಯಿಸಿದ್ದಾನೆ ಈ ವೇಳೆ ಲಾರಿ ಚಕ್ರದ ಕೆಳಗೆ ಸಿಲುಕಿ ಸಂತೋಷ್ ಮೃತಪಟ್ಟಿದ್ದಾರೆ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Exit mobile version