Site icon Vistara News

ರಾಜಕೀಯ ದ್ವೇಷ ಮರೆತು ಪರಸ್ಪರ ಆಲಂಗಿಸಿಕೊಂಡ ಪ್ರತಾಪ್‌ ಸಿಂಹ, ಡಾ.ಎಚ್.ಸಿ.ಮಹದೇವಪ್ಪ

pratap simha and hc mahadevappa

ಮೈಸೂರು: ಕ್ಷೇತ್ರದಲ್ಲಿ ಸದಾ ಹಾವು-ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದ ಸಂಸದ ಪ್ರತಾಪ್‌ ಸಿಂಹ ಮತ್ತು ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು, ಕೆಂಪೇಗೌಡ ಜಯಂತಿಯಲ್ಲಿ ರಾಜಕೀಯ ದ್ವೇಷ ಮರೆತು ಪರಸ್ಪರ ಆಲಂಗಿಸಿಕೊಂಡ ಘಟನೆ ಮಂಗಳವಾರ ನಡೆದಿದೆ. ಕಾರ್ಯಕ್ರಮದಲ್ಲಿ ಉಭಯನಾಯಕರು ಪರಸ್ಪರ ಕುಶಲೋಪರಿ ನಡೆಸಿ ಕೈಲುಕುವ ಮೂಲಕ ಕೆಂಪೇಗೌಡ ಜಯಂತಿಯ ಶುಭಾಶಯ ವಿನಿಮಯ ಮಾಡಿಕೊಂಡರು.

ಇದನ್ನೂ ಓದಿ | BJP Karnataka : ಪ್ರತಿಪಕ್ಷ ನಾಯಕ, ರಾಜ್ಯ ಅಧ್ಯಕ್ಷ ಸ್ಥಾನದ ಬಗ್ಗೆ ಮಾತಾಡಬೇಡಿ: ಬಿಜೆಪಿ ನಾಯಕರಿಗೆ ನಳಿನ್‌ ಕಟೀಲ್‌ ಸೂಚನೆ

ಕೆಂಪೇಗೌಡರ ಜಯಂತಿಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರ ಸಮಾಗಮವಾಗಿತ್ತು. ಪಕ್ಷ ಭೇದ ಮರೆತು ಎಲ್ಲ ಜನಪ್ರನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಸಿಎಂ ಸಿದ್ದರಾಮಯ್ಯನವರ ಛೇಲಾ ಎಂದು ಪ್ರತಾಪ್‌ ಸಿಂಹ ಛೇಡಿಸಿದ್ದರು.

Exit mobile version