Site icon Vistara News

Praveen Nettaru | ಕೊಲೆ ಮಾಡುವ ಧೈರ್ಯವೇ ಬಾರದಂತೆ ಕ್ರಮ ಕೈಗೊಳ್ಳಿ: ಮಾಜಿ ಸಚಿವ ಈಶ್ವರಪ್ಪ

ಈಶ್ವರಪ್ಪ

ಶಿವಮೊಗ್ಗ: ಕೊಲೆಗೆ ಪ್ರತೀಕಾರ ಕೊಲೆಯೆಂದು (Praveen Nettaru) ಹಿಂದುತ್ವ ನಂಬಿಲ್ಲ, ಮುಸ್ಲಿಂ ಗೂಂಡಾಗಳು ಮನಸ್ಥಿತಿ ಬದಲಾಯಿಸದಿದ್ದರೆ ಕಷ್ಟಕರವಾಗಲಿದೆ. ರಾಜ್ಯ ಸರ್ಕಾರವು ಪ್ರವೀಣ್‌ ಹತ್ಯೆ ಪ್ರಕರಣ ಸಂಬಂಧ ಕೈಗೊಳ್ಳುವ ಕ್ರಮ ಹೇಗಿರಬೇಕೆಂದರೆ ಇನ್ನು ಯಾವತ್ತೂ ಕೊಲೆ ಮಾಡುವ ಧೈರ್ಯವೇ ಬಾರದಂತೆ ಕ್ರಮ ವಹಿಸಬೇಕು ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದರು.

ಮನಸ್ಥಿತಿ ಬದಲಾವಣೆಗೆ ಏನು ಮಾಡಬೇಕೆಂದು ಸರ್ಕಾರ ನಿರ್ಧರಿಸಲಿ. ಕೊಲೆ ಮಾಡುವ ಧೈರ್ಯವೇ ಬಾರದಂತೆ ಕಠಿಣ ಕ್ರಮಕೈಗೊಳ್ಳಬೇಕು ಎಂದ ಹೇಳಿರುವ ಈಶ್ವರಪ್ಪ, ಮುಸ್ಲಿಂ ಗೂಂಡಾಗಳು ಹಿಂದುಗಳ ತಾಳ್ಮೆ ಪರೀಕ್ಷೆ ಮಾಡುವುದು ಬೇಡ ಎಂದು ಸುದ್ದಿಗಾರರಿಗೆ ತಿಳಿಸಿದರು.

ಸಿಎಂ ಜತೆ ಗುರುವಾರ ಚರ್ಚೆ

ಪ್ರವೀಣ್‌ ಹತ್ಯೆ ವಿಚಾರವಾಗಿ ಸಿಎಂ‌ ಬಸವರಾಜ ಬೊಮ್ಮಾಯಿ ಅವರನ್ನು ಗುರುವಾರ‌ ಭೇಟಿ ಮಾಡಿ ಚರ್ಚಿಸುತ್ತೇನೆ. ಈ ರೀತಿಯ ವರ್ತನೆಯನ್ನು ಮಟ್ಟಹಾಕಲು ಯಾವ ರೀತಿ ಕಾನೂನು ಕ್ರಮ ಕೈಗೊಳ್ಳಬಹುದೆಂದು ಚರ್ಚೆ ಮಾಡುತ್ತೇನೆ. ಹಿಂದುಗಳ ಶಾಂತಿ ಮಂತ್ರ ದುರುಪಯೋಗ ಮಾಡಿಕೊಳ್ಳಬಾರದು. ಇಂತಹ ಕೃತ್ಯಕ್ಕೆ ಬೆಂಬಲಿಸುವ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ | Praveen Nettaru | ಪ್ರವೀಣ್‌ ಹತ್ಯೆಗೆ ವ್ಯಾಪಕ ಆಕ್ರೋಶ; ದಕ್ಷಿಣ ಕನ್ನಡದ ವಿವಿಧೆಡೆ ಬಂದ್

Exit mobile version